- ಅಳೆದೂ ತೂಗಿ ಸಮುದಾಯಗಳಿಗೆ ಟಿಕೆಟ್ ಹಂಚಿಕೆ ಮಾಡಿದ ಪಕ್ಷ
- 124 ಸ್ಥಾನಗಳಲ್ಲಿ ಅತಿ ಹೆಚ್ಚು ಲಿಂಗಾಯತರಿಗೆ, ಕಡಿಮೆ ಕ್ರಿಶ್ಚಿಯನ್ನರಿಗೆ
ಮಂಬರುವ ರಾಜ್ಯ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಬಹು ನಿರೀಕ್ಷಿತ ಮೊದಲ ಪಟ್ಟಿ ಬಿಡುಗಡೆಯಾಗಿದೆ.
124 ಜನರ ಭವಿಷ್ಯ ಪರೀಕ್ಷೆಗೆ ಅಸ್ತು ಎಂದಿರುವ ಹೈಕಮಾಂಡ್, ಪಕ್ಷವನ್ನುಅಧಿಕಾರಕ್ಕೆ ತರಬಲ್ಲ ಅಭ್ಯರ್ಥಿಗಳಿಗೆ ಮನ್ನಣೆ ನೀಡಿದೆ.
ಅದರಂತೆ ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ, ಸಿದ್ದರಾಮಯ್ಯ ಅವಧಿಯಲ್ಲಿ ಪಕ್ಷದಿಂದ ಗೆದ್ದ ಸ್ಪರ್ಧಾಳುಗಳಿಗೆ ಒತ್ತು ನೀಡಿ ಟಿಕೆಟ್ ನೀಡಿದೆ.
ಜೊತೆಗೆ ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ಜಾತಿ ಸಮೀಕರಣಕ್ಕೆ ಒತ್ತು ನೀಡಿರುವ ಪಕ್ಷ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆ ಪಟ್ಟಿ ಕೆಳಗಿನಂತಿದೆ.
ಮೊದಲಪಟ್ಟಿಯ ಮೊದಲ ಸ್ಥಾನದಲ್ಲಿ ಲಿಂಗಾಯತ ಸಮುದಾಯವಿದ್ದರೆ, ಎರಡನೇ ಸ್ಥಾನದಲ್ಲಿ ಒಕ್ಕಲಿಗರು, ಮೂರನೇ ಸ್ಥಾನದಲ್ಲಿ ಪರಿಶಿಷ್ಟರಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಮೊದಲ ಪಟ್ಟಿಯಲ್ಲಿಲ್ಲ ಮಾಜಿ ಸಚಿವ ಹೆಚ್ ಆಂಜನೇಯ ಹೆಸರು; ಗೊಂದಲಕ್ಕೀಡಾದ ಕಾರ್ಯಕರ್ತರು
ಸಂಖ್ಯೆಗಳ ಲೆಕ್ಕಾಚಾರದ ಮೇಲೆ ನೋಡುವುದಾದರೆ, ಲಿಂಗಾಯತ – 30, ಎಸ್ಸಿ -22, ಎಸ್ಟಿ -10, ಒಕ್ಕಲಿಗ – 22, ಮುಸ್ಲಿಂ -8, ಕುರುಬ -5, ಈಡಿಗ -6, ರೆಡ್ಡಿ – 2, ಬ್ರಾಹ್ಮಣ – 5, ಮರಾಠ -2, ರಜಪೂತ್ -1, ಕುಂಬಾರ – 1, ಬಂಟ್ಸ್ – 3, ಕ್ರಿಶ್ಚಿಯನ್ – 1, ಬೆಸ್ತ – 1, ಇತರೆ -5 ಮಂದಿಗೆ ಅವಕಾಶ ನೀಡಲಾಗಿದೆ.
ಇನ್ನು ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಎಂದೇ ಕರೆಯಲಾಗುವ ಪರಿಶಿಷ್ಟರ ಟಿಕೆಟ್ ಹಂಚಿಕೆಯನ್ನು ಒಳಜಾತಿಗಳಿಗೆ ಹೀಗೆ ಹಂಚಿಕೆ ಮಾಡಲಾಗಿದೆ. ಇಲ್ಲಿ ಎಡಗೈ -5, ಬಲಗೈ -11, ಬೋವಿ -2, ಲಂಬಾಣಿ -4 ರಂತೆ ನೀಡಲಾಗಿದೆ.