ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ʼಲೋಕಸಭೆ ಎಲೆಕ್ಷನ್ಗೆ ಸ್ಪರ್ಧೆ ಮಾಡುವಷ್ಟು ಆರ್ಥಿಕ ಶಕ್ತಿ ಇಲ್ಲʼ ಅನ್ನೋ ಹೇಳಿಕೆಗೆ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ತಿರುಗೇಟು ನೀಡಿದ್ದಾರೆ. ‘ಚುನಾವಣೆಗೆ ಜನರ ಬೆಂಬಲ ಬೇಕು. ಹಣವಲ್ಲ’ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿಕೆ ನೀಡಿದ ಬಳಿಕ ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಪ್ರತಿಕ್ರಿಯೆ ನೀಡಿದ್ದು, “ಚುನಾವಣೆಗೆ ನಿಲ್ಲಲು ಹಣ ಮಾತ್ರ ಅಲ್ಲ. ಜನರ ಬೆಂಬಲವೂ ಬೇಕು. ನಿರ್ಮಲಾ ಸೀತಾರಾಮನ್ಗೆ ಜನರ ಬೆಂಬಲ ಇಲ್ಲ. ಹೀಗಾಗಿಯೇ ಸುಖಾಸುಮ್ಮನೆ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ. ದೇಶದ ಅರ್ಥ ಸಚಿವೆ ಜನರ ಮನ್ನಣೆ ಗಳಿಸಿಲ್ಲ. ಹಾಗಾಗಿ, ಸಣ್ಣಪುಟ್ಟ ಕಾರಣವೊಡ್ಡಿ ಚುನಾವಣೆಗೆ ಸ್ಪರ್ಧೆ ಮಾಡದೆ ತಾವೊಬ್ಬ ಅಸಮರ್ಥ ನಾಯಕಿ ಎಂಬುದನ್ನು ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ” ಎಂದು ಟೀಕಿಸಿದರು.
“ನಿರ್ಮಲಾ ಸೀತಾರಾಮನ್ ಬಹುಶಃ ಚುನಾವಣೆ ರಾಜಕೀಯದಿಂದ ಹೆದರಿ ಓಡಿಹೋಗ್ತಿದ್ದಾರೆ. ಜನರಿಂದ ಆಯ್ಕೆಯಾದ ಪ್ರತಿನಿಧಿಯೇ ನಿಜವಾದ ಪ್ರತಿನಿಧಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎನಿಸಿಕೊಳ್ಳಬೇಕಾದರೆ ಜನರಿಂದ ಆಯ್ಕೆಯಾಗಿ ಅಧಿಕಾರ ನಡೆಸಬೇಕು. ನಿರ್ಮಿಲಾ ಸೀತಾರಾಮನ್ ದೇಶದ ಅರ್ಥ ವ್ಯವಸ್ಥೆಯನ್ನೇ ತನ್ನ ತಪ್ಪು ನಿರ್ಧಾರಗಳಿಂದ ಹಾಳು ಮಾಡಿದ್ದಾರೆ” ಎಂದು ಸರವಣನ್ ಅಣ್ಣಾ ದೊರೈ ವ್ಯಂಗ್ಯವಾಡಿದ್ದಾರೆ.
ಹಣಕಾಸು ಸಚಿವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿರುವುದನ್ನು ಅವರು ಗ್ರಹಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಜನರ ನೀತಿಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಿದ ರೀತಿ ಖಂಡಿತವಾಗಿಯೂ ಅಸಮಾಧಾನವನ್ನು ತಂದುಕೊಟ್ಟಿತು. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವರ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಹುಶಃ ಇದನ್ನು ಗ್ರಹಿಸಿರುವ ಹಣಕಾಸು ಸಚಿವೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ” ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡಿದೆ ಎಂದು ಆರೋಪಿಸಿದ ಅಣ್ಣಾದೊರೈ, “ಚುನಾವಣೆಗೆ ಖರ್ಚು ಮಾಡಲು ಅಭ್ಯರ್ಥಿಯ ಹಣ ಬಳಸಬೇಕಿಲ್ಲ. ಅದು ಪಕ್ಷದ್ದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆ | ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಹೆದರುತ್ತದೆಯೇ; ಮಾಜಿ ಐಎಎಸ್ ಅಧಿಕಾರಿ ಪ್ರಶ್ನೆ
“ಬಿಜೆಪಿ 8,250 ಕೋಟಿ ರೂ.ಗಳನ್ನು ಸುಲಿಗೆ ಮಾಡಿದೆ. ಬಿಜೆಪಿ ಬ್ಯಾಂಕ್ ಖಾತೆಯಲ್ಲಿ 6,000 ಕೋಟಿ ರೂ. ಇದೆ. ಅಲ್ಲದೆ ನಿರ್ಮಲಾ ಸೀತಾರಾಮನ್ ಸಂಪುಟದಲ್ಲಿ ಉನ್ನತ ಸಚಿವರಾಗಿದ್ದಾರೆ. ಬಿಜೆಪಿ ಏಕೆ ಅವರಿಗೆ ಪ್ರಾಯೋಜಕತ್ವ(ಸ್ಪಾನ್ಸರ್) ನೀಡಬಾರದು?” ಎಂದು ಹೇಳಿದರು.