- ಚರಂಡಿ ಸ್ವಚ್ಛಗೊಳಿಸುವ ವೇಳೆ ಇಬ್ಬರ ಸಾವು
- ದಲಿತ ಯುವತಿಯ ಮೇಲೆ ಅತ್ಯಚಾರ, ಕೊಲೆ
ಕಳೆದ 24 ಗಂಟೆಗಳ ಅವಧಿಯೊಳಗೆ ಗುಜರಾತ್ ಒಂದರಲ್ಲೇ ನಾಲ್ವರು ದಲಿತರ ಮೇಲೆ ದೌರ್ಜನ್ಯ ಎಸಗಿರುವ ಘಟನೆಗಳು ಜರುಗಿವೆ. ಈ ಕುರಿತು ಕಳವಳ ವ್ಯಕ್ತಪಡಿಸಿರುವ ಶಾಸಕ ಜಿಗ್ನೇಶ್ ಮೇವಾನಿ ಅವರು, “ಇದು ಅಮೃತಕಾಲವೇ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಗುಜರಾತಿನಲ್ಲಿ ಕೆಲವು ಪುಂಡರು ದಲಿತ ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಜಿಗ್ನೇಶ್ ಮೇವಾನಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ‘ಅಮೃತಕಾಲ’ದ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, “ಕಳೆದ 24 ಗಂಟೆಗಳಲ್ಲಿಯೇ ಗುಜರಾತ್ ನಾಲ್ಕು ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ರಾಜಕೋಟ್ನಲ್ಲಿ ಚರಂಡಿ ಸ್ವಚ್ಛಗೊಳಿಸಲು ತೆರಳಿ ಇಬ್ಬರು ಬಲಿಯಾದರು, ಮಹಿಸಾಗರ್ ಜಿಲ್ಲೆಯ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಸ್ಥಳೀಯ ಗೂಂಡಾಗಳು ದಲಿತನ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ವಿಡಿಯೋ ಇಲ್ಲಿದೆ” ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
“24 ಗಂಟೆಗಳ ಅವಧಿಯಲ್ಲಿಯೇ ನಾಲ್ಕು ದಲಿತ ದೌರ್ಜನ್ಯ ಪ್ರಕರಣಗಳು ನಡೆದಿವೆ. ಇದು ಅಮೃತಕಾಲವೇ?” ಎಂದು ವ್ಯಂಗ್ಯವಾಡಿದ್ದಾರೆ.
ಚರಂಡಿ ಸ್ವಚ್ಛಗೊಳಿಸುವ ವೇಳೆ ಇಬ್ಬರ ಸಾವು
ರಾಜ್ಕೋಟ್ನ ಸಾಮಾಟ್ರ್ ಕೈಗಾರಿಕ ಪ್ರದೇಶದ ಬಳಿ ತುಂಬಾ ಆಳಕ್ಕೆ ಇರುವ ಚರಂಡಿ ಸ್ವಚ್ಛಗೊಳಿಸುವ ವೇಳೆ ಮೆಹುಲ್ ಮೆಹ್ದಾ (24) ಮತ್ತು ಅಫ್ಜಲ್ ಫುಫರ್ (24) ಎಂಬುವವರು ಉಸಿರುಗಟ್ಟಿ ಮಂಗಳವಾರ ಮೃತಪಟ್ಟಿದ್ದಾರೆ.
ಸಾಮ್ರಾಟ್ ಮುಖ್ಯ ರಸ್ತೆಯಲ್ಲಿನ ಒಳಚರಂಡಿಯನ್ನು ‘ಜೆಟ್ಟಿಂಗ್’ ಯಂತ್ರ ಮತ್ತು ಯಾಂತ್ರೀಕೃತ ‘ಕ್ರೇನ್’ನಿಂದ ಸ್ವಚ್ಛಗೊಳಿಸುವ ವೇಳೆ ಇಬ್ಬರು ದಲಿತ ಕಾರ್ಮಿಕರು ಮೃತರಾಗಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ.