ಮುಹಮ್ಮದ್ ಸಿರಾಜ್ ಬೌಲಿಂಗ್-ಫೀಲ್ಡಿಂಗ್ ಅಬ್ಬರಕ್ಕೆ ನಲುಗಿದ ಪಂಜಾಬ್ ಕಿಂಗ್ಸ್ ತವರಿನಲ್ಲೇ ಹೀನಾಯ ಸೋಲು ಅನುಭವಿಸಿದೆ.
ಐಪಿಎಲ್ 16ನೇ ಆವೃತ್ತಿಯಲ್ಲಿ ಆರ್ಸಿಬಿ 3ನೇ ಗೆಲುವು ಸಾಧಿಸಿದೆ. ಮೊಹಾಲಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಆತಿಥೇಯ ಪಂಜಾಬ್ ವಿರುದ್ಧ 24 ರನ್ಗಳ ಅಂತರದಿಂದ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆರಂಭಿಕರಾದ ವಿರಾಟ್ ಕೊಹ್ಲಿ [59] ಮತ್ತು ಫಾಫ್ ಡುಪ್ಲೆಸಿಸ್ [84] ಗಳಿಸಿದ ಅಬ್ಬರದ ಅರ್ಧಶತಕಗಳ ನೆರವಿನಿಂದ 4 ವಿಕೆಟ್ ನಷ್ಟದಲ್ಲಿ 174 ರನ್ಗಳಿಸಿತ್ತು.
ಉತ್ತರವಾಗಿ ಬ್ಯಾಟಿಂಗ್ ನಲ್ಲಿ ಪಂಜಾಬ್ 18.2 ಓವರ್ಗಳಲ್ಲಿ 150 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.
4 ಓವರ್ಗಳ ದಾಳಿಯಲ್ಲಿ 21 ರನ್ ನೀಡಿ 4 ವಿಕೆಟ್ ಪಡೆದ ವೇಗಿ ಮುಹಮ್ಮದ್ ಸಿರಾಜ್ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಪಾಯಕಾರಿ ಆಗುವ ಸೂಚನೆ ನೀಡಿದ್ದ ಹರ್ಪ್ರೀತ್ ಸಿಂಗ್ ಅವರನ್ನು ಸಿರಾಜ್ ರನೌಟ್ ಮಾಡಿದರು. ಇದು ಸಹ ಪಂದ್ಯಕ್ಕೆ ತಿರುವು ನೀಡಿತು.
ಪಂಜಾಬ್ ಪರ ಪ್ರಭಾಸಿಮ್ರನ್ ಸಿಂಗ್ 46 ಮತ್ತು ಜಿತೇಶ್ ಶರ್ಮಾ 41 ರನ್ಗಳಿಸಿದರು.