ಏಷ್ಯಾನ್ ಕ್ರೀಡಾಕೂಟ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ತಮ್ಮ ಅರ್ಜುನ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ನವದೆಹಲಿಯ ಕರ್ತವ್ಯ ಪಥ ಮಾರ್ಗದ ಪಾದಚಾರಿ ರಸ್ತೆಯಲ್ಲಿ ಇರಿಸಿ ಮರಳಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಲೈಂಗಿಕ ಹಗರಣದ ಆರೋಪಿ ಬ್ರಿಜ್ಭೂಷಣ್ ಸಿಂಗ್ ಬೆಂಬಲಿಗ ಸಂಜಯ್ ಸಿಂಗ್ ನೇಮಕವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇತ್ತೀಚಿಗಷ್ಟೆ ಪ್ರಧಾನ ಮಂತ್ರಿಗೆ ತಮಗೆ ನೀಡಿರುವ ಪ್ರಶಸ್ತಿಗಳನ್ನು ಮರಳಿಸುವುದಾಗಿ ಪತ್ರ ಬರೆದಿದ್ದರು.
ವಿನೇಶ್ ಫೋಗಟ್ ಅವರು ಪ್ರಧಾನಮಂತ್ರಿ ಕಚೇರಿಯ ರಸ್ತೆಯಲ್ಲಿ ಪ್ರಶಸ್ತಿಗಳನ್ನು ಇರಿಸಲು ಮುಂದಾಗಿದ್ದರು. ಆದರೆ ಪೊಲೀಸರು ಆಕೆಯನ್ನು ತಡೆದ ಕಾರಣ ಕರ್ತವ್ಯ ಪಥ ರಸ್ತೆಯ ಪಾದಚಾರಿ ರಸ್ತೆಯಲ್ಲಿ ಪ್ರಶಸ್ತಿ ಇಟ್ಟು ಮರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
ಇತ್ತೀಚಿಗಷ್ಟೆ ಒಲಿಂಪಿಕ್ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವೀರೇಂದ್ರ ಸಿಂಗ್ ಕೂಡ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಕಚೇರಿಯ ರಸ್ತೆಯಲ್ಲಿ ಇರಿಸಿದ್ದರು. ಮತ್ತೊಬ್ಬ ಒಲಿಂಪಿಕ್ ಪ್ರಶಸ್ತಿ ಮಹಿಳಾ ಕ್ರೀಡಾಪಟು ಸಾಕ್ಷಿ ಸಿಂಗ್ ಕುಸ್ತಿಯನ್ನು ತ್ಯಜಿಸಿದ್ದರು.
“ಈ ದಿನ ಯಾವುದೇ ಆಟಗಾರನಿಗೆ ಬಾರದಿರಲಿ,ದೇಶದ ಮಹಿಳಾ ಕ್ರೀಡಾಪಟುಗಳು ಅತ್ಯಂತ ನಿಕೃಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ” ಎಂದು ಬಜರಂಗ್ ಪುನಿಯಾ ಪ್ರಧಾನಿಗೆ ಟ್ವಿಟರ್ ಮೂಲಕ ಪತ್ರ ಬರೆದಿದ್ದರು.