ಸುಮ್ಮನಿದ್ದರೆ ಐನ್‌ಸ್ಟೈನ್‌ ಪಠ್ಯವನ್ನೂ ಕಿತ್ತೆಸೆಯುತ್ತಾರೆ ; ʼಎನ್‌ಸಿಆರ್‌ಟಿʼ ನಡೆಗೆ ನಾಸೀರುದ್ದೀನ್‌ ಶಾ ಆಕ್ರೋಶ

Date:

10ನೇ ತರಗತಿಯ ಪಠ್ಯಕ್ರಮದಿಂದ ಪ್ರಮುಖ ವಿಷಯಗಳನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ ನಡೆಯನ್ನು ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್‌ ಶಾ ವಿರೋಧಿಸಿದ್ದಾರೆ. ಜೊತೆಗೆ ʼಇಸ್ರೋʼ ಮುಖ್ಯಸ್ಥರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಸೀರುದ್ದೀನ್‌ ಶಾ, “ದಿನ ಕಳೆಯುತ್ತಾ ನಮ್ಮ ದೇಶದ ಜನರಲ್ಲಿ ವಿಜ್ಞಾನದ ಕುರಿತ ಕುತೂಹಲ ಕ್ಷೀಣಿಸುತ್ತಿದೆ. ಜನ ವಿಜ್ಞಾನದಿಂದ ವಿಮುಖರಾಗಿ ಮೂಡನಂಬಿಕೆಯತ್ತ ವಾಲಿಕೊಳ್ಳುತ್ತಿದ್ದಾರೆ. 10ನೇ ತರಗತಿಯ ಪಠ್ಯಪುಸ್ತಕದಿಂದ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ʼದಿ ಎವಲ್ಯೂಷನ್‌ ಥಿಯರಿʼ ವಿಷಯವನ್ನು ತೆಗೆದು ಹಾಕಲಾಗಿದೆ. ಹಾಗೇ ಬಿಟ್ಟರೆ ಅಲ್ಬರ್ಟ್‌ ಐನ್‌ಸ್ಟೈನ್‌ ಕುರಿತ ವಿಷಯಗಳನ್ನು ಕಿತ್ತೆಸೆಯುತ್ತಾರೆ. ಇಂತಹ ಮಹಾನ್‌ ಚೇತನಗಳ ವಿಚಾರಗಳಿಲ್ಲದ ನಮ್ಮ ಪಠ್ಯಪುಸ್ತಕಗಳು ಹೇಗಿರಲಿವೆ ಎಂದು ಊಹಿಸಿದ್ದೀರಾ” ಎಂದು ಸಾರ್ವಜನಿಕರಿಗೆ ಪ್ರಶ್ನೆ ಹಾಕಿದ್ದಾರೆ.

ಇದೇ ವೇಳೆ ಇಸ್ರೋ ಮುಖ್ಯಸ್ಥರ ಬಗ್ಗೆ ಕೂಡ ನಾಸೀರುದ್ದೀನ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಸ್ರೋ ಮುಖ್ಯಸ್ಥೆ ಬಹುಶಃ ಮಹಿಳೆ ಎಂದುಕೊಳ್ಳುತ್ತೇನೆ. ಆಕೆ, ʼಎಲ್ಲ ವೈಜ್ಞಾನಿಕ ಆವಿಶ್ಕಾರಗಳು ಪುರಾಣಗಳಲ್ಲಿವೆ. ಪುರಾಣದಲ್ಲಿ ಹಿಂದೆಯೇ ದಾಖಲಾಗಿದ್ದ ಆವಿಶ್ಕಾರಗಳನ್ನು ತಮ್ಮದು ಎನ್ನುವಂತೆ ಯುರೋಪಿಯನ್ನರು ಬಿಂಬಿಸುತ್ತಿದ್ದಾರೆʼ ಎಂದು ತಪ್ಪು ಹೇಳಿಕೆ ನೀಡಿದ್ದಾರೆ. ಈ ರೀತಿ ಮಾತನಾಡುವವರ ಜೊತೆಗೆ ವಾದ ಮಾಡಿಯಾದರೂ ಏನು ಪ್ರಯೋಜನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಇಳಯರಾಜ ಜನುಮದಿನ | ಸಂಗೀತ ಮಾಂತ್ರಿಕನ ಹೆಜ್ಜೆ ಗುರುತುಗಳು

ಮಕ್ಕಳ ವಿದ್ಯಾಭ್ಯಾಸಕ್ಕೆ ಹೊರೆಯಾಗಲಿವೆ ಎಂಬ ಕಾರಣ ನೀಡಿ 10ನೇ ತರಗತಿಯ ಪಠ್ಯಕ್ರಮದಿಂದ ʼಪೀರಿಯಾಡಿಕ್‌ ಟೇಬಲ್‌ʼ, ʼದಿ ಎವಲ್ಯೂಷನ್‌ ಥಿಯರಿʼ ಸೇರಿದಂತೆ 6 ಪ್ರಮುಖ ವಿಷಯಗಳನ್ನು ʼಎನ್‌ಸಿಇಆರ್‌ಟಿʼ ಇತ್ತೀಚೆಗಷ್ಟೇ ತೆಗೆದು ಹಾಕಿತ್ತು. ಸಂಸ್ಥೆಯ ಈ ನಡೆಗೆ ದೇಶವ್ಯಾಪಿಯಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...