ಐಶ್ವರ್ಯಾ ರಜನಿಕಾಂತ್‌ ಮನೆಯಲ್ಲಿ ಚಿನ್ನಾಭರಣ ಕಳವು : ಕೆಲಸದವರ ಮೇಲೆ ಶಂಕೆ

Date:

ತಮಿಳಿನ ಹಿರಿಯ ನಟ ರಜನಿಕಾಂತ್‌ ಅವರ ಹಿರಿಯ ಪುತ್ರಿ, ಚಿತ್ರ ನಿರ್ಮಾಪಕಿ ಐಶ್ವರ್ಯಾ ಅವರ ಮನೆಯಲ್ಲಿ 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಐಶ್ವರ್ಯಾ ಅವರು ಚೆನ್ನೈನ ತೈನಂಪೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐಶ್ವರ್ಯಾ, 2019ರಲ್ಲಿ ತಮ್ಮ ಸಹೋದರಿ ಸೌಂದರ್ಯ ಅವರ ಮದುವೆ ಸಂದರ್ಭದಲ್ಲಿ ಒಡವೆಗಳನ್ನು ಬಳಸಿ ಪೋಯಿಸ್‌ ಗಾರ್ಡನ್‌ನಲ್ಲಿರುವ ತಂದೆಯ ಮನೆಯಲ್ಲಿದ್ದ ಲಾಕರ್‌ನಲ್ಲಿಟ್ಟಿದ್ದರು ಎನ್ನಲಾಗಿದೆ. 2019ರಿಂದ ಕಳೆದ ಫೆಬ್ರವರಿಯ ನಡುವೆ ಆಭರಣಗಳಿದ್ದ ಲಾಕರ್‌ ಮೂರು ಕಡೆ ಸ್ಥಳಾಂತರಗೊಂಡಿದೆ. 2021ರ ಆಗಸ್ಟ್‌ನಲ್ಲಿ ಪೋಯಿಸ್‌ ಗಾರ್ಡನ್‌ ಮನೆಯಿಂದ ತಮ್ಮ ಪತಿ ಧನುಷ್‌ ವಾಸವಿದ್ದ ಸಿಐಟಿ ನಗರದ ಮನೆಗೆ ಐಶ್ವರ್ಯಾ, ಲಾಕರ್‌ ಕೊಂಡೊಯ್ದಿದ್ದಾರೆ. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಪತಿಯ ಮನೆಯಿಂದ ತಾವು ವಾಸವಿರುವ ಸೆಂಟ್‌ ಮೇರೀಸ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಲಾಕರ್‌ ಅನ್ನು ಸ್ಥಳಾಂತರಿಸಿದ್ದಾರೆ. ಕೊನೆಯದಾಗಿ 2022ರ ಏಪ್ರಿಲ್‌ನಲ್ಲಿ ಮತ್ತೆ ಅದೇ ಲಾಕರ್‌ ಅನ್ನು ಪೋಯಿಸ್‌ ಗಾರ್ಡನ್‌ನಲ್ಲಿರುವ ಮನೆಗೆ ವಾಪಸ್‌ ಕೊಂಡೊಯ್ಯಲಾಗಿದೆ.

ಈ ನಾಲ್ಕು ವರ್ಷದ ಅವಧಿಯಲ್ಲಿ ಐಶ್ವರ್ಯಾ ಲಾಕರ್‌ನಲ್ಲಿನ ಒಡವೆಗಳನ್ನು ಬಳಸಿದ್ದಾರಾದರೂ ಕೆಲವು ಒಡವೆಗಳು ಕಾಣೆಯಾಗಿರುವ ಬಗ್ಗೆ ಅವರ ಅರಿವಿಗೆ ಬಂದಿಲ್ಲ. ಕಳೆದ ಫೆಬ್ರವರಿ 10ರಂದು ಲಾಕರ್‌ ತೆರೆದು ಪರಿಶೀಲಿಸಿದಾಗ 3 ಲಕ್ಷ 60 ಸಾವಿರ ಮಾಲ್ಯದ ಚಿನ್ನದ ಬಳೆಗಳು, ವಜ್ರದ ಹಾರ, ಹವಳದ ಸರಗಳು ಕಾಣೆಯಾಗಿರುವುದು ಕಂಡು ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಘಟನೆಗೆ ಸಂಬಂಧಿಸಿ ಐಶ್ವರ್ಯಾ ಅವರು ತೈನಂಪೇಟ್‌ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಆರೋಪದಡಿ ದೂರು ದಾಖಲಿಸಿದ್ದು, ತಮ್ಮ ಮನೆಯಲ್ಲಿ ಸಹಾಯಕಿಯರಾಗಿ ಕೆಲಸ ಮಾಡುತ್ತಿರುವ ಈಶ್ವರಿ, ಲಕ್ಷ್ಮೀ ಮತ್ತು ಕಾರು ಚಾಲಕ ವೆಂಕಟ್‌ ಎಂಬುವವರ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...