- ಜಿಲ್ಲೆಯ ಹಲವೆಡೆ ಶ್ರದ್ಧಾ ಭಕ್ತಿಯಿಂದ ರಂಜಾನ್ ಆಚರಣೆ
- ಶಾಂತಿ ಸೌಹಾರ್ದತೆಯೊಂದಿಗೆ ಆತಂಕಗಳು ದೂರವಾಗಲಿ
ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗೋಗೇರಿ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಈದುಲ್ ಫಿತ್ರ್ ನಮಾಜ್ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಪವಿತ್ರ ರಂಜಾನ್ ಆಚರಿಸಿದರು.
ಜಾಮಿಯಾ ಮಸೀದಿಯ ಹಾಫಿಜ್ ಜನಾಬ್ ಅಶ್ಫಕ್ ಮದನೀ ಮಾತನಾಡಿ, “ಮನುಕುಲಕ್ಕೆ ಏಕತೆ, ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಸಾಮರಸ್ಯದ ಬೆಸುಗೆಯಾದ ರಂಜಾನ್ ಹಬ್ಬದ ಆಚರಣೆಯಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಬದುಕನ್ನು ಮುನ್ನಡೆಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಮದೀನಾ ಮಸ್ಜಿದ್ ಹಾಪೀಜ್ ಜನಾಬ್ ಬರಕತುಲ್ಲಾ ಹಾಫೀಜ್ ಮಾತನಾಡಿ, “ರಂಜಾನ್ ಹಬ್ಬದ ಪ್ರಾರ್ಥನೆಯೊಂದಿಗೆ ಪ್ರೀತಿ ವಿಶ್ವಾಸ, ಶಾಂತಿ ಸೌಹಾರ್ದತೆಯೊಂದಿಗೆ ಆತಂಕಗಳು ದೂರವಾಗಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ” ಎಂದು ಶುಭ ಹಾರೈಸಿದ್ದರು. ಈ ವೇಳೆ ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿ ಸರ್ವಸದಸ್ಯರು ಹಾಗೂ ಯುವಕ ಮಿತ್ರರು ಹಾಜರಿದ್ದರು.
ಈ ಸುದ್ದಿ ಓದಿದ್ದೀರಾ? : ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯ ಮತ್ತೊಂದು ವಿಕೆಟ್ ಪತನ
ಡಿವೈಎಫ್ಐ ಸಂಘಟನೆ ವತಿಯಿಂದ ಪಾನಕ ವಿತರಣೆ
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಲ್ಲಿ ಡಿವೈಎಫ್ಐ ಸಂಘಟನೆ ವತಿಯಿಂದ ಮುಸ್ಲಿಂ ಬಾಂಧವರೊಂದಿಗೆ ರಂಜಾನ್ ಆಚರಿಸುವುದರ ಜೊತೆಗೆ ಪಾನಕ ವಿತರಿಸಿದರು.
ಡಿವೈಎಫ್ಐ ಮುಖಂಡ ಹನಮಂತ ಮಾದರ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ಅನೇಕ ರೀತಿಯ ಕೋಮುಸಂಘರ್ಷ, ದ್ವೇಷ ಮುಂತಾದ ರೀತಿಯ ಕಾರಣಗಳಿಂದ ಜಾತಿ ಆಧಾರಿತವಾಗಿ ಸಂಬಂಧಗಳು ಒಡೆದು ಹೊಂಟಿವೆ. ಆದ್ದರಿಂದ ಅಂತಹ ಸಂಘರ್ಷಗಳನ್ನು ನಿಯಂತ್ರಿಸಲು ಮತ್ತು ಪರಸ್ಪರವಾಗಿ ಸಂಬಂಧಗಳನ್ನು ಹೆಣೆಯುವಲ್ಲಿ ನಾವೆಲ್ಲರೂ ಮುಂದಾಗಬೇಕು” ಎಂದು ಕರೆ ನೀಡಿದರು.
ನಮ್ಮಲ್ಲಿಲ್ಲ ಹಿಂದೂ ರಕ್ತ, ನಮ್ಮಲ್ಲಿಲ್ಲ ಮುಸ್ಲಿಂ ರಕ್ತ, ನಮ್ಮಲ್ಲಿಲ್ಲ ಕ್ರೈಸ್ತ ರಕ್ತ, ನಮ್ಮಲ್ಲಿಲ್ಲ ಬೌದ್ಧ ರಕ್ತ, ಅದುವೇ ಮಾನವ ಕೆಂಪು ರಕ್ತ ಎಂಬ ಶೀರ್ಷಿಕೆಯ ಘೋಷಣೆಯ ಮೂಲಕ ಸೌಹಾರ್ದತೆಯಿಂದ ಪಾನಕ ವಿತರಿಸಿ ಸೌಹಾರ್ದತೆ ಮೆರೆದರು.
ಪ್ರಕಾಶ್ ಕರಕೀಕಟ್ಟಿ ಶಿಕ್ಷಕರು, ವಕೀಲ ಎಸ್ ಎಸ್ ಹಾಲಭಾವಿ, ಮಹೇಶ್ ಹೀರೆಮಠ, ಸಿಐಟಿಯು ಜಿಲ್ಲಾಧ್ಯಕ್ಷ ಸಂಕಪ್ಪ ಕುರಹಟ್ಟಿ, ಮೈಲಾರಪ್ಪ ಮಾದರ, ಹನಮಂತ ತಾಳಿ, ರಾಮಣ್ಣ ಮಲ್ಲಾಪುರ, ಮುತ್ತಪ್ಪ ಮಾದರ, ಮಂಜುನಾಥ ಮಾದರ, ರಾಜು ಆದವಾನಿ. ನವೀನ್ ಆದವಾನಿ, ವಿಶ್ವನಾಥ್ ಹುಣಸಿಗಿಡದ ಸೇರಿದಂತೆ ಹಲವರು ಹಾಜರಿದ್ದರು.