ಸೀಜ಼್ ಆಗಿರುವ ಕ್ಲಿನಿಕ್ ತೆರೆಯಲು ಅನುಮತಿ ನೀಡುವಂತೆ ಮನವಿ ಕೋರಲು ಕಾಂಗ್ರೆಸ್ ಮುಖಂಡ ಮುತ್ತುರಾಜ್ ಮಾಖಡವಾಲೆ ಎಂಬುವರು ನಕಲಿ ವೈದ್ಯ ತರುಣಕುಮಾರ್ ಎಂಬಾತನನ್ನು ಸಚಿವರ ಬಳಿ ಕರೆದುಕೊಂಡು ಬಂದಿದ್ದು, ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಸಿಟ್ಟಾಗಿದ್ದಾರೆ.
ಧಾರವಾಡದ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ನಕಲಿ ವೈದ್ಯ ತರುಣ್ಕುಮಾರ್ ರಾಯ್ ವಿರುದ್ಧ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.
ಕಳೆದ ಕೆಲ ದಿನಗಳ ಹಿಂದೆ ತಾಲೂಕು ವೈದ್ಯಾಧಿಕಾರಿಯಿಂದ ನಕಲಿ ಕ್ಲಿನಿಕ್ ಮೇಲೆ ದಾಳಿಗೈದು ಅಧಿಕಾರಿಗಳು ತರುಣ್ಕುಮಾರ್ ರಾಯ್ ಕ್ಲಿನಿಕ್ ಸೀಜ಼್ ಮಾಡಿದ್ದರು. ಸುಮಾರು 30 ವರ್ಷಗಳಿಂದ ತರುಣ್ಕುಮಾರ್ ರಾಯ್ ಕ್ಲಿನಿಕ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಂತ್ರಿಸ್ಥಾನಕ್ಕಾಗಿ ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ: ಯು ಟಿ ಖಾದರ್
ಪಿಯುಸಿ ಓದಿರುವ ವೈದ್ಯನಿಂದ ಫೈಲ್ಸ್, ಫಿಶರ್ ಪಿಸ್ತೂಲ್ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಂಧ್ರ ಮೂಲದ ತರುಣ್ಕುಮಾರ ರಾಯ್ ನಗರದ ಬೂಸಪ್ಪ ಚೌಕ್ನಲ್ಲಿ ಅನಧಿಕೃತ ಕ್ಲಿನಿಕ್ ತರೆದು ಚಿಕಿತ್ಸೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕ್ಲಿನಿಕ್ ಸೀಜ಼್ ಆಗಿತ್ತು. ಇದೀಗ ಮತ್ತೆ ತರರೆಯಲು ಅನುಮತಿ ನೀಡುವಂತೆ ಮುತ್ತುರಾಜ್ ಮಾಖಡವಾಲೆಯಿಂದ ಸಚಿವರಿಗೆ ಒತ್ತಡ ಬಂದಿದ್ದು, ಇಬ್ಬರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, “ರಿಜಿಸ್ಟ್ರೇಷನ್ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸಲು ಸಾಧ್ಯವಿಲ್ಲ” ಎಂದು ಸಚಿವರು ತಾಕೀತು ಮಾಡಿದ್ದಾರೆ.