- ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ
- ಬೆಳ್ಳಂಬೆಳ್ಳಿಗೆ ಮತ ಬೇಟೆ ಆರಂಭಿಸಿದ ಆಮ್ ಆದ್ಮಿ ಅಭ್ಯರ್ಥಿ
ಗಂಗಾವತಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಅವರು ಗಂಗಾವತಿಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ವಾಯು ವಿಹಾರಕ್ಕೆ ಬಂದಿದ್ದ ನೂರಾರು ಸಾರ್ವಜನಿಕರನ್ನು ಭೇಟಿಮಾಡಿ, ಮತಯಾಚನೆ ಮಾಡಿದರು.
ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, “ಗಂಗಾವತಿ ನಗರದಲ್ಲಿ 150ಕ್ಕೂ ಹೆಚ್ಚು ಪಾರ್ಕ್ಗಳಿದ್ದು, ಅದರಲ್ಲಿ 113 ಪಾರ್ಕ್ಗಳು ವಾಯು ವಿಹಾರಕ್ಕೆ ಯೋಗ್ಯವಾಗಿವೆ. ಆದರೆ, ಹಲವು ಪಾರ್ಕ್ಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಚಾಕು ಹಿಡಿದು ಹಾಡಹಗಲೇ ಬೆದರಿಕೆ ಹಾಕಿದ ಟಾಟಾ ಏಸ್ ಚಾಲಕ!
ಈ ಭೂಗಳ್ಳರ ಹಾವಳಿಯಿಂದ ವಾಯು ವಿಹಾರಕ್ಕೆ ಬರುವವರಿಗೆ ಗಂಗಾವತಿ ನಗರದ ಜೂನಿಯರ್ ಕಾಲೇಜ್ ಮೈದಾನ ಒಂದೇ ಆಧಾರವಾಗಿದೆ. ಆದ್ದರಿಂದ ಪೊರಕೆ ಗುರುತಿಗೆ ಮತ ಹಾಕುವ ಮೂಲಕ ನನ್ನನ್ನು ಬೆಂಬಲಿಸಿದರೆ, ವಾಯುವಿಹಾರದ ಜಾಗಗಳನ್ನು ತೆರವುಗೊಳಿಸಿ ಜನರ ಉಪಯೋಗಕ್ಕೆ ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಅಲ್ಲಿದ್ದ ಕೆಲವರು ಇದಕ್ಕೆ ಪ್ರತಿಕ್ರಿಯಿಸಿ, “ಸಾಮಾನ್ಯರು ರಾಜಕೀಯಕ್ಕೆ ಬಂದು ಅಧಿಕಾರ ಹಿಡಿದಾಗ ಮಾತ್ರ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸಲು ಸಾಧ್ಯ ಆಗುತ್ತದೆ. ಅದು ನಿಮ್ಮಂತ ಯುವಕರಿಂದ ಮಾತ್ರ ಸಾಧ್ಯ “ಎಂದು ತಿಳಿಸಿ ಶುಭ ಕೋರಿದರು.
ಈ ವೇಳೆ ಮುಖಂಡ ವೆಂಕಟೇಶ್, ಮನೀಶ್, ಶಿವರಾಜ್ ದೊಡ್ಡಬಸಪ್ಪ ಸೇರಿದಂತೆ ಹಲವರು ಹಾಜರಿದ್ದರು.