- ಪ್ರತಿಯೊಬ್ಬರು ಮತದಾನ ಮಾಡುವಂತೆ ಕರೆ
- ಸಂಸ್ಥೆಯ ಅಧ್ಯಕ್ಷ ನಿಂಗನಗೌಡ ಪಾಟೀಲ್ ನೇತೃತ್ವ
ಗದಗ ನಗರದ ಹಲವಡೆ ‘ಮಾಲಿಪಾಟೀಲ್ ಫೌಂಡೇಶನ್ ಟ್ರಸ್ಟ್’ ವತಿಯಿಂದ ಸಸಿ ನಡುವ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.
ಗದಗ ಮೂಲದ ಈ ಸಂಸ್ಥೆಯ ಅಧ್ಯಕ್ಷ ನಿಂಗನಗೌಡ ಪಾಟೀಲ್ ಮಾತನಾಡಿ, “ಮತದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯ. ದೇಶದ ಅಭಿವೃದ್ಧಿಯಲ್ಲಿ ಶಾಸಕಾಂಗ ಉತ್ತಮವಾಗಿರುವುದು ಅವಶ್ಯಕ. ಹಾಗಾಗಿ ಉತ್ತಮರ ಆಯ್ಕೆ ಮಾಡುವುದಕ್ಕೆ ಪ್ರತಿಯೊಬ್ಬರು ಮತದಾನ ಮಾಡಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? : ಬೀದರ್ | ಪ್ರಭು ಚವ್ಹಾಣ ಮುಕ್ತ ಔರಾದ ಮಾಡಲು ಕಾಂಗ್ರೆಸ್ಗೆ ಬೆಂಬಲ: ರವೀಂದ್ರ ಸ್ವಾಮಿ
“ಸಾರ್ವಜನಿಕರು ಯಾವುದೇ ಆಸೆ- ಆಮಿಷಗಳಿಗೆ ಬೆಲೆ ಕೊಡದೇ ಮತ ಹಾಕಬೇಕು. ನಾವು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಮ್ಮದೇ ಆದ ಮಹತ್ವದ ಪಾತ್ರ ನಿರ್ವಹಣೆ ಮಾಡಬೇಕು” ಎಂದು ಕರೆ ಕೊಟ್ಟರು.
ಈ ವೇಳೆ ಮಾಲಿಪಾಟೀಲ್ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷ ಶೇಖರಗೌಡ ಎನ್ ಮಾಲಿಪಾಟೀಲ್, ಕಾರ್ಯದರ್ಶಿ ವಿದ್ಯಾಶ್ರೀ ಎನ್ ಮಾಲಿ ಪಾಟೀಲ್, ಮಂಜು ಮಾಲಿ ಪಾಟೀಲ್, ಗುರುರಾಜ್ ಬಂಡಿಹಾಳ, ಭೀಮನಗೌಡ ಮಾಲಿ ಪಾಟೀಲ್, ಮಾಂತೇಶ್ ಗೌಡ, ಮಾಲಿ ಪಾಟೀಲ್, ವಿದ್ಯಾ ಮಾಲಿ ಪಾಟೀಲ್, ಪವಿತ್ರ ಬಂಡಿಹಾಳ ಸೇರಿದಂತೆ ಟ್ರಸ್ಟ್ನ ಹಲವು ಸದಸ್ಯರು ಉಪಸ್ಥಿತರಿದ್ದರು.