ಕೃಷಿಯಲ್ಲಿ ತೊಡಗಿರುವ ಯುವಕರಿಗೆ ‘ವಧು ಭಾಗ್ಯʼ ಕಲ್ಪಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಮಂಡ್ಯದ ಯುವಕರು ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ನೂರಾರು ತೊಂದರೆಗಳಿಂದ ನಮ್ಮ ಹಳ್ಳಿ ಯುವಕರು ಮದುವೆಯ ಕನಸು ಕಾಣುವುದನ್ನು ನಿಲ್ಲಿಸಿದ್ದಾರೆ. ಅದೆಷ್ಟೋ ಯುವಕರು ವಧು ಸಿಗದೆ ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ. ಯುವ ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲವೆಂದು ಪೋಷಕರು ನೇರವಾಗಿ ಹೇಳುತ್ತಿದ್ದಾರೆ.
ಕೊರೊನಾ ನಂತರ ಯುವಕರು ಖಾಸಗಿ ಉದ್ಯೋಗ ತೊರೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಇವರಿಗೆ ಯಾವ ಪೋಷಕರು ಕನ್ಯೆ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯದ 30ವರ್ಷ ಮೇಲ್ಪಟ್ಟ ಯುವಕರು ಡಿಸೆಂಬರ್ನಲ್ಲಿ, ಅದೃಷ್ಟದ ಬದಲಾವಣೆಗೆ ಮತ್ತು ಅವರ ಸಂಕಟದ ಬಗ್ಗೆ ಜಾಗೃತಿ ಮೂಡಿಸಲು ಆದಿಚುಂಚನಗಿರಿ ಮಠಕ್ಕೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಈ ವರ್ಷ ನಡೆಯುತ್ತಿರುವ ಎರಡನೇ ಪಾದಯಾತ್ರೆ ಇದಾಗಿದೆ. ಕೃಷಿಯಲ್ಲಿ ತೊಡಗಿರುವ ಯುವಕರಿಗೆ ‘ವಧು ಭಾಗ್ಯʼ ಕಲ್ಪಿಸಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಜಾರಿಗೆ ತರಬೇಕು ಎಂದು ಮಂಡ್ಯದ ಯುವಕರು ಒತ್ತಾಯಿಸುತ್ತಿದ್ದಾರೆ.
ಇದೇನು ಮೊದಲ ಪಾದಯಾತ್ರೆಯಲ್ಲ ಈ ಹಿಂದೆ ಫೆಬ್ರವರಿಯಲ್ಲಿ ಯುವ ಕೃಷಿಕರು ಕನ್ಯೆ ಸಿಗುತ್ತಿಲ್ಲವೆಂದು ಮಳವಳ್ಳಿ ತಾಲೂಕಿನಿಂದ ಚಾಮರಾಜನಗರ ಜಿಲ್ಲೆಯ ಎಂ.ಎಂ.ಹಿಲ್ಸ್ವರೆಗೆ ಪಾದಯಾತ್ರೆ ಕೈಗೊಂಡಿದ್ದರು.