ರಾಯಚೂರು | ತಾರಾಲಯ ಅವೈಜ್ಞಾನಿಕ ನಿರ್ಮಾಣ; ಸರಿಪಡಿಸತ್ತೇವೆ ಎಂದ ಸಚಿವ

Date:

ಹಿಂದುಳಿದ ಪ್ರದೇಶವಾಗಿರುವ ರಾಯಚೂರು ಜಿಲ್ಲೆಯಲ್ಲಿ ಈ ಭಾಗದ ಯುವಕರು, ವಿದ್ಯಾರ್ಥಿಗಳ ಸಾರ್ವಜನಿಕರ ಕಲಿಕಾ ಮಟ್ಟ ಸುಧಾರಣೆಗಾಗಿ ಮತ್ತು ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದಕ್ಕೆ ಪ್ಲಾನೆಟೇರಿಯಂ (ತಾರಾಲಯ) ನಿರ್ಮಾಣ ಮಾಡಲಾಗಿದೆ. ಆದರೆ, ಯೋಜನೆಯ ಉದ್ದೇಶಕ್ಕೆ ತಕ್ಕಂತೆ ನಿರ್ಮಾಣ ವಾಗದ ಕಾರಣ ತಾರಾಲಯ ಕೆಲಸಕ್ಕೆ ಬಾರದಂತಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಈ ತಾರಾಲಯವನ್ನು ನಗರದ ಹೊರವಲಯದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 2016ರಲ್ಲಿ ಕೆಕೆಆರ್ಡಿಬಿಯ 55.80 ಲಕ್ಷ ರೂ. ವೆಚ್ಚದಲ್ಲಿ ತಾರಾಲಯ ಕಟ್ಟಡ ಆರಂಭಿಸಿ 2021ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.ಆದರೆ, ಇದನ್ನು ಸಾಮಾನ್ಯ ಕಟ್ಟಡಗಳು, ಶಾಲಾ, ಅಂಗನವಾಡಿ ಕಟ್ಟಡ ನಿರ್ಮಿಸಿದ ಅನುಭವವುಳ್ಳ ಖಾಸಗಿ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿಯನ್ನು ನೀಡಲಾಗಿತ್ತು.

ಮಾಹಿತಿ ಕೊರತೆಯಿಂದ ತಾರಾಲಯ ನಿರ್ಮಾಣದ ವೇಳೆ ನಿಯಮಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಟ್ಟಡ ಕಳೆದ ಎರಡು ವರ್ಷಗಳಿಂದ ನಿರುಪಯುಕ್ತವಾಗಿದೆ. ಅರೆಬರೆ ಕಾಮಗಾರಿ ಮಾಡಿರುವುದರಿಂದ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಾರಾಲಯ ಎನ್ನುವುದು ಒಂದು ಹೊಸಲೋಕದ ಅನುಭವನ್ನು ನೀಡಬೇಕು. ಹೊರಗಿನಿಂದ ಒಳ ಹೋಗುತ್ತಿದ್ದಂತೆ ಹಂತ ಹಂತವಾಗಿ ಕತ್ತಲಾವರಿಸುವಂತಿರಬೇಕು. ಒಳಗಡೆ ಗಾಢಾಂಧಕಾರದಲ್ಲಿ ಮಕ್ಕಳು ಸೌರವ್ಯೂಹದ ಚಿತ್ರಣ ಕಣ್ತುಂಬಿಕೊಳ್ಳುವಂತಿರಬೇಕು. ಆದರೆ, ಇಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಆ ರೀತಿಯ ಅನುಭವ ಕಾಣಸಿಗುವುದಿಲ್ಲ.

ಜೊತೆಗೆ ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲವೆಂದು ಇಲ್ಲಿನ ಸಿಬ್ಬಂದಿ ಸಹ ಹೇಳುತ್ತಿದ್ದಾರೆ.ರಾಜ್ಯದ ನಾನಾಕಡೆ ನಿರ್ಮಿಸಿರುವ ತಾರಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಮಾತ್ರ ಹಳೆ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಯಾಕೆಂದರೆ ಒಳಗಡೆ ಆಸನಗಳಲ್ಲಿ ಕುಳಿತಾಗ ಒರಗಿ ಕೂರಲು ಅನುಕೂಲವಾಗುವ ರೀತಿ ಇರಬೇಕು. ಅದಕ್ಕೆ ಬೇಕಾದ ಮಾದರಿಯಡಿ ಕಟ್ಟಡ ನಿರ್ಮಿಣ ಮಾಡಿಲ್ಲ.

ಇದೀಗ ಪ್ಲಾನೆಟೇರಿಯಂ ರೂಪಕ್ಕೆ ತರಬೇಕಾದರೆ ಇನ್ನಷ್ಟು ಅನುದಾನವನ್ನು ನೀಡುವ ಮೂಲಕ ಕಟ್ಟಡವನ್ನು ಸರಿ ಮಾಡಬೇಕಾಗುತ್ತದೆ.ಮೂಲಗಳ ಪ್ರಕಾರ ಇದಕ್ಕೆ ಇನ್ನೂ ಎರಡರಿಂದ ಎರಡೂವರೆ ಕೋಟಿ ರೂಪಾಯಿ ಹಣ ಬೇಕು. ಈಗಿರುವ ರೂಫ್ ಮೇಲೆ ಏರ್ ಪ್ರೂಫ್ ಹಾಗೂ ಫೈರ್ ಪ್ರೂಫ್ ಸೇರಿದಂತೆ ಆತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಬೇಕು. ಅಂದಾಗ ಮಾತ್ರ ಇದಕ್ಕೆ ಒಂದು ರೂಪ ಬರಲಿದ್ದು ಬಳಕೆ ಮಾಡಬಹುದಾಗಿದೆ. ಇಲ್ಲದಿದ್ದರೆ ಕಟ್ಟಡ ನಿರುಪಯುಕ್ತವಾಗಿ ಬೀಳಲಿದೆ ಎಂಬ ಮಾತು ಕೇಳಿ ಬರುತ್ತಿವೆ.

ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರನ್ನು ಮಾದ್ಯಮದವರು ಪ್ರಶ್ನಿಸಿದಾಗ ‘ನಾನು ಈ ಇಲಾಖೆ ಸಚಿವನಾಗುವ ಮುನ್ನ ಕಾಮಗಾರಿ ಮಾಡಲಾಗಿದೆ. ಈ ವಿಷಯ ನನ್ನ ಗಮನದಲ್ಲಿ ಇದೆ. ಇದೇ ಆವರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೃಹತ್ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುತ್ತಿದೆ. ತಜ್ಞರ ತಂಡ ಭೇಟಿ ನೀಡಿದೆ. ಈಗಿರುವ ಪ್ಲಾನೆಟೇರಿಯಂ ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಕುರಿತು ಚರ್ಚಿಸಿ, ಅದರ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮʼ ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸ್ಟ್ರಾಂಗ್ ರೂಮ್ ಪರಿಶೀಲಿಸಿದ ಜಿಲ್ಲಾಧಿಕಾರಿ

ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ಷೇತ್ರ ವ್ಯಾಪ್ತಿಗೆ ಒಳಪಡುವ...

ಚಿಕ್ಕಬಳ್ಳಾಪುರ | ಅನುಚಿತ ಪ್ರಭಾವ, ಲಂಚ, ಭ್ರಷ್ಟಾಚಾರ ಪ್ರಕರಣದಡಿ ಕೆ.ಸುಧಾಕರ್ ವಿರುದ್ಧ ಎಫ್‌ಐಆರ್

ಚುನಾವಣೆಯಲ್ಲಿ ಮತದಾರರಿಗೆ ಲಂಚ ನೀಡಲು ಮನೆಯೊಂದರಲ್ಲಿ ಅಕ್ರಮವಾಗಿ ಹಣ ದಾಸ್ತಾನು ಮಾಡಿದ್ದ...

ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ 29 ರಿಂದ ಆರಂಭ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಳೆದ ತಿಂಗಳಷ್ಟೇ ಪಿಯುಸಿ...