ಬೈಕ್ ಅಪಘಾತದಿಂದ ಗಾಯಗೊಂಡಿದ್ದ ಸಾಹಿತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ಗುರುವಾರ ನಡೆದಿದೆ.
ಸಾಹಿತಿ ರಾಜೇಂದ್ರ ಕುಮಾರ ಬಿರಾದಾರ (40) ಮೃತಪಟ್ಟಿರುವ ದುರ್ದೈವಿ. ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಪಕ್ಕದಲ್ಲೇ ಇದ್ದ ನೀರಿನ ಪೈಪ್ಲೈನ್ ಗೇಟ್ವಾಲ್ ಗುಂಡಿಗೆ ಬಿದ್ದಿದೆ. ನಿರ್ಮಾಣ ಹಂತದಲ್ಲಿದ್ದ ಗೇಟ್ವಾಲ್ ಗುಂಡಿಯ ಸುತ್ತಲು ಕಬ್ಬಿಣದ ಸರಳುಗಳು ಹಾಗೆ ತೆರೆದುಕೊಂಡಿದ್ದರಿಂದ ದೇಹಕ್ಕೆ ಚುಚ್ಚಿಕೊಂಡಿರುವ ಸಾಧ್ಯತೆ ಇದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ವಿಜಯಪುರ ಜಿಲ್ಲಾ ಆಸ್ಪತ್ರೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಸಂಬಂಧ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | 24 ಪುಟಗಳ ಡೆತ್ನೋಟ್ ಬರೆದು ಯುವತಿ ಆತ್ಮಹತ್ಯೆ