ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವ ಬೆನ್ನಲ್ಲೆ ತೆಲಂಗಾಣದ ವಿಪಕ್ಷ ಭಾರತೀಯ ರಾಷ್ಟ್ರ ಸಮಿತಿಗೆ ಸಂಕಷ್ಟ ಎದುರಾಗಿದೆ. ವಾರಂಗಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ಬಿಆರ್ಎಸ್ ನಿಂದ ಟಿಕೆಟ್ ಸಿಕ್ಕರೂ ತಾವು ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಸ್ಟೇಷನ್ ಗಾನ್ಪುರ್ ಕ್ಷೇತ್ರದ ಶಾಸಕ ಕಡಿಯಂ ಶ್ರೀಹರಿ ಅವರ ಪುತ್ರಿಯಾದ ಡಾ. ಕಾವ್ಯ ಕಡಿಯಂ ಬಿಆರ್ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪತ್ರದಲ್ಲಿ ಡಾ. ಕಾವ್ಯ ಅವರು, ಭ್ರಷ್ಟಾಚಾರ, ಭೂ ಒತ್ತುವರಿ ಅಕ್ರಮಗಳು, ಫೋನ್ ಟ್ಯಾಪಿಂಗ್ ಹಾಗೂ ಅಬಕಾರಿ ಹಗರಣಗಳ ಬಗ್ಗೆ ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಪಕ್ಷಕ್ಕೆ ಕಳಂಕ ಉಂಟಾಗಿದೆ. ಅಲ್ಲದೆ ನಾಯಕರ ನಡುವೆ ಸಹಕಾರ ಹಾಗೂ ಸಮನ್ವಯದ ಕೊರತೆ ಇಲ್ಲದಿರುವುದು ಕೂಡ ಕಾಣಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೌರತ್ವ ಪ್ರಮಾಣಪತ್ರ ಪೂಜಾರಿ ಕೊಡುವುದಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ?
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾನು ಚುನಾವಣಾ ಕಣದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ.ನಾನು ಪಕ್ಷದ ಮುಖ್ಯಸ್ಥ ಕೆಸಿಆರ್ ಹಾಗೂ ಮುಖಂಡರುಗಳಿಗೆ ಕ್ಷಮಿಸುವಂತೆ ಕೇಳಿಕೊಳ್ಳುತ್ತೇನೆ. ವಾರಂಗಲ್ನ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಿದ್ದಕ್ಕಾಗಿ ನಾಯಕರುಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ” ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಡಾ. ಕಾವ್ಯ ಕಡಿಯಂ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿ ಅಲ್ಲಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿಗಷ್ಟೆ ಪಕ್ಷ ಬಿಡುವುದಾಗಿ ಘೋಷಿಸಿ ಮಾ.31 ರಂದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಬಿಆರ್ಎಸ್ನ ಪ್ರಮುಖ ನಾಯಕರಾದ ಕೆ ಕೇಶವ ರಾವ್ ಹಾಗೂ ಅವರ ಪುತ್ರಿ ಜಿಹೆಚ್ಎಂಸಿ ಮೇಯರ್ ಗಡ್ವಾಲ್ ವಿಜಯಲಕ್ಷ್ಮಿ ಬೆಳವಣಿಗೆಯ ನಂತರ ಡಾ. ಕಾವ್ಯ ಅವರು ಬಿಆರ್ಎಸ್ ತೊರೆದಿರುವುದು ಪಕ್ಷಕ್ಕೆ ಮತ್ತಷ್ಟು ಮುಜುಗರವುಂಟಾಗಿದೆ.
ಕಾವ್ಯ ಕಡಿಯಂ ಪಕ್ಷ ಬಿಡುವ ಬಗ್ಗೆ ಬಿಆಎರ್ಎಸ್ ನಾಯಕರುಗಳು ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನಿಡಿಲ್ಲ.
TELANGANA #LokSabhaElection2024#WARANGAL: BIG JOLT to BRS ahead of #LokSabhaElections2024
The Warangal BRS MP cited in an open letter sent to BRS chief KCR— corruption, land grabbing PHONE TAPPING SCANDAL has ‘brought disgrace to BRS.
📌BRS Quit Warangal MP Kadiyam Kavya to… pic.twitter.com/cXQu55ola9
— Gururaj Anjan (@Anjan94150697) March 29, 2024