ಮಧ್ಯ ಪ್ರದೇಶ ರಾಜ್ಯದಲ್ಲಿ ಶಾಂತಿಯುತವಾಗಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಎರಡು ದಿನಗಳ(ನ.17) ನಂತರ ರಾಜ್ಯದ ಅಶೋಕನಗರ ಜಿಲ್ಲೆಯಿಂದ ಕೆಲವು ಆಘಾತಕಾರಿ ವರದಿಗಳು ಹೊರಬಿದ್ದಿವೆ.
ಈ ಜಿಲ್ಲೆಯ ಕೆಲವು ಗ್ರಾಮಗಳ ಗ್ರಾಮಸ್ಥರು ಆಡಳಿತಾರೂಢ ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಪ್ರಮಾಣ ವಚನ ಸ್ವೀಕರಿಸದ ಹೊರತು ಸರ್ಕಾರ ನಿರ್ಮಿಸಿದ ಕೊಳವೆಬಾವಿಗಳಿಂದ ನೀರನ್ನು ನಿರಾಕರಿಸಲಾಗುತ್ತಿದೆ ಎಂಬ ಸುದ್ದಿ ವರದಿಯಾಗುತ್ತಿದೆ.
ಮಧ್ಯ ಪ್ರದೇಶ ರಾಜ್ಯ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಅವರ ಮುಂಗಾವಲಿ ವಿಧಾನಸಭಾ ಕ್ಷೇತ್ರದ ನಯಖೇಡಾ ಗ್ರಾಮದಿಂದ ಡಿಸೆಂಬರ್ 3 ರವರೆಗೆ ಫಲಿತಾಂಶ ಪ್ರಕಟವಾಗುವವರೆಗೆ ಗ್ರಾಮಸ್ಥರಿಗೆ ನೀರು ಬಿಡಬೇಡಿ ಎಂದು ನಿರಾಕರಿಸಿರುವ ವರದಿಗಳು ದಾಖಲಾಗಿವೆ.
“ನಾನು ಗ್ರಾಮದಲ್ಲಿ ಎಲ್ಲರಿಗೂ ನೀರು ಒದಗಿಸುವ ಸಲುವಾಗಿ ನಾಲ್ಕು ಕೊಳವೆ ಬಾವಿಗಳನ್ನು ಸರ್ಕಾರದ ವತಿಯಿಂದ ಕೊರೆಸಿದ್ದೇನೆ. ಆದರೆ ಚುನಾವಣೆ ನಂತರ ಇಂತಹ ಘಟನೆಗಳು ಏಕೆ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಸಚಿವರಾದ ಬ್ರಿಜೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವಸ್ಥಾನಗಳಲ್ಲಿ ಅನ್ಯ ಧರ್ಮದವರಿಗೆ ಉದ್ಯೋಗಾವಕಾಶವಿಲ್ಲ: ಆಂಧ್ರ ಹೈಕೋರ್ಟ್
ಆದಾಗ್ಯೂ, ಸಚಿವರ ಹೇಳಿಕೆಯನ್ನು ಹಲವಾರು ಗ್ರಾಮಸ್ಥರು ಒಪ್ಪುವುದಿಲ್ಲ. ಕೆಲವು ಗ್ರಾಮದ ಮುಖಂಡರು ಗ್ರಾಮಸ್ಥರನ್ನು ಬಿಜೆಪಿಗೆ ಮತ ಹಾಕಿದ್ದಾರೋ ಇಲ್ಲವೋ ಎಂದು ಕೇಳಿ ಅವರು ವಾಸವಾಗಿರುವ ಪ್ರದೇಶಗಳಿಗೆ ಕೊಳವೆ ಬಾವಿಯ ಮೋಟರ್ ಬಂದ್ ಮಾಡಿಸಿದ್ದಾರೆ ಎಂದು ಹೇಳುತ್ತಾರೆ.
“ಮತದಾನದ ನಂತರ ಬಿಜೆಪಿ ಮುಖಂಡರು ಕೊಳವೆ ಬಾವಿ ಮೋಟರ್ಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಕೇವಲ ಕಾಟಾಚಾರಕ್ಕೆಂದು ಸಾರ್ವಜನಿಕರಿಗೆ ಅನುಕೂಲವಾಗದ ರಾತ್ರಿ ವೇಳೆ ಸ್ವಿಚ್ ಆನ್ ಮಾಡುತ್ತಾರೆ” ಎಂದು ಅದೇ ಗ್ರಾಮದ ಮಹಿಳೆಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಯಖೇಡಾ ಗ್ರಾಮದ ಇತರೆ ನಿವಾಸಿಗಳು ಕೂಡ ಬಿಜೆಪಿಗೆ ಮತ ಹಾಕದಿದ್ದರೆ ನೀರು ಬಿಡುವುದಿಲ್ಲ ಎಂದು ದೂರಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಈ ವರದಿಯ ಕುರಿತು ಸುದ್ದಿ ಕ್ಲಿಪ್ಪಿಂಗ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡು, “ಬಿಜೆಪಿಯ ಡಬಲ್ ಎಂಜಿನ್ನ ನಕಲಿ ಭರವಸೆಗಳು ಸುಳ್ಳಿನ ಗದ್ದಲದಲ್ಲಿ ಅಡಗಿಕೊಂಡಿವೆ. ಬಿಜೆಪಿಯ ಕ್ರೌರ್ಯದ ಪರಮಾವಧಿ ನೋಡಿ, ಮತ ಹಾಕದವರನ್ನು ನೀರಿಲ್ಲದೆ ಕೊಲ್ಲಲು ಮುಂದಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
भाजपा के "डबल इंजन" के "फर्जी दावे और झूठ के शोर" में छुपे-
भ्रष्ट्राचार, कुशासन और अत्याचार का जवाब तो मध्य प्रदेश की जनता ने दे दिया है !
मगर साढ़े 18 साल, कुकर्मों की सारी हदें पार करने वाली भाजपा का मन अब भी नहीं भरा !
भाजपा के क्रूरता की पराकाष्ठा देखिए- वोट न देने वाले… pic.twitter.com/2p49UpkBIu
— Randeep Singh Surjewala (@rssurjewala) November 22, 2023
“18 ವರ್ಷಗಳ ನಂತರ ದುಷ್ಕೃತ್ಯಗಳ ಎಲ್ಲ ಮಿತಿಗಳನ್ನು ದಾಟಿದ ಬಿಜೆಪಿಗೆ ಇನ್ನೂ ಸಮಾಧಾನವಾಗಿಲ್ಲ. ಭ್ರಷ್ಟಾಚಾರ, ದುರಾಡಳಿತ ಮತ್ತು ದೌರ್ಜನ್ಯಗಳಿಗೆ ಮಧ್ಯಪ್ರದೇಶದ ಜನರು ತಮ್ಮ ಉತ್ತರವನ್ನು ಮತಪೆಟ್ಟಿಗೆಯಲ್ಲಿ ನೀಡಿದ್ದಾರೆ!” ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದ ಚುನಾವಣಾ ಕದನವು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹೋರಾಟವೆಂದು ಪರಿಗಣಿಸಲ್ಪಟ್ಟಿದೆ. 2018 ರ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರವನ್ನು ಸದ್ಯ ಬಿಜೆಪಿಯಲ್ಲಿ ಕೇಂದ್ರ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಬಣ ಬಂಡಾಯವೆದ್ದು ಸರ್ಕಾರವನ್ನು ಉರುಳಿಸಿತ್ತು. ಡಿ.3ರಂದು ಫಲಿತಾಂಶ ಹೊರಬೀಳಲಿದೆ.
Just two days after MP voted in a relatively peaceful Assembly election, disturbing reports have emerged from Ashoknagar- that rural women are being denied water from government-built bore-wells unless they take oaths that they voted for the ruling BJP @ndtv @NDTVMPCG pic.twitter.com/7bHnwfuHHT
— Anurag Dwary (@Anurag_Dwary) November 22, 2023