ಚುನಾವಣೆಯಲ್ಲಿ ಮೋದಿ ಬಲ ಕುಸಿತಗೊಂಡಿದ್ದರಿಂದ ಇಡಿ ದಾಳಿ ವಿಳಂಬ: ಸಚಿವ ಪ್ರಿಯಾಂಕ್ ಖರ್ಗೆ

Date:

“ವಿರೋಧ ಪಕ್ಷಗಳ ಮೇಲೆ ನಡೆಯುವ ಐಟಿ ಮತ್ತು ಇಡಿ ದಾಳಿ ಆಶ್ಚರ್ಯವೇನಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಬಲ ಕುಸಿತಗೊಂಡ ಪರಿಣಾಮ ವಾಲ್ಮೀಕಿ ಹಗರಣದ ಇಡಿ ದಾಳಿ ವಿಳಂಬವಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ನಾಯಕರನ್ನು, ವಿರೋಧ ಪಕ್ಷಗಳನ್ನು ಕುಗ್ಗಿಸಲು ಐಟಿ-ಇಡಿ ದಾಳಿ ಮಾಡುತ್ತಾರೆ. ಹತ್ತು ವರ್ಷಗಳಿಂದಲೂ ಇದೇ ನಡೆದುಕೊಂಡು ಬಂದಿದೆ. ಇದರಲ್ಲೇನೂ ಅಶ್ಚರ್ಯವಿಲ್ಲ” ಎಂದರು.

“ಮಂತ್ರಿಯಾಗಿದ್ದ ನಾಗೇಂದ್ರ ಅವರೇ, ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆ ಆಗಬೇಕು ಎಂದು ಎಸ್‌ಐಟಿ ರಚನೆಗೆ ಶಿಫಾರಸ್ಸು ಮಾಡಿದ್ದಾರೆ. ಎಸ್‌ಐಟಿಯೂ ರಚನೆಯಾಗಿದೆ. ರಾಜೀನಾಮೆಯನ್ನೂ ನೀಡಿದ್ದಾರೆ. ನಿನ್ನೆ ಬಂದ ಆಡಿಯೋ ನೋಡಿದರೆ, ಅದರಲ್ಲೆ ಅಧಿಕಾರಿಗಳು ನಿಗಮದ ಅಧ್ಯಕ್ಷರಿಗೆ ಗೊತ್ತಾದರೆ ದೊಡ್ಡ ರಾದ್ದಾಂತವಾಗುತ್ತದೆ ಎಂದು ಹೇಳಿರುವುದು ಸ್ವಷ್ಟವಾಗಿದೆ. ಯಾರು ಅಧಿಕಾರಿಗಳು ತಪ್ಪುಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿದೆ. ಶಾಸಕ ದದ್ದಲ್, ನಾಗೇಂದ್ರ ಅವರು ಜೆಡಿಎಸ್ ಕಾಂಗ್ರೆಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ. ತನಿಖೆಗೆ ಹಾಜರಾಗುತ್ತಿದ್ದಾರೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಮುಡಾ ಹಗರಣ ಆರೋಪ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ. ಆದರೆ ನಾವು ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಹಗರಣ, ಗಂಗಾಕಲ್ಯಾಣ ಹಗರಣಗಳ ಬಗ್ಗೆ ದಾಖಲೆ ನೀಡಿ ಮಾತನಾಡಿದ್ದೆವು. ಇವರು ಕೂಡ ದಾಖಲೆ ನೀಡಿ ಮಾತನಾಡಲಿ. ಮುಡಾ ಅಕ್ರಮದ ಬಗ್ಗೆ 2011ರಲ್ಲಿ ಬಿ.ಎಸ್.ಯಡಯೂರಪ್ಪ ಅವರು ಸ್ಪೀಕರ್‌ಗೆ ದೂರು ನೀಡಿದ್ದರು. ಆಗ ಬಿಜೆಪಿಗೆ ಅಕ್ರಮ ನಡೆಯುತ್ತಿರುವುದು ಗೊತ್ತಿತ್ತಲ್ಲ. ಯಾಕೆ ತನಿಖೆ ಮಾಡಲಿಲ್ಲ, ಯಾಕೆ ಸುಮ್ಮನಿದ್ದರು” ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ಅಂಗನವಾಡಿ ಅವ್ಯವಸ್ಥೆ | ಸಿಂಧಗಿ ; ಬಾಡಿಗೆ ಕಟ್ಟಡದಿಂದ ಮುಕ್ತಿ ಪಡೆಯಬಹುದೇ ತಾಲೂಕಿನ 66 ಅಂಗನವಾಡಿ ಕೇಂದ್ರಗಳು?

“ಈಗ ಸಚಿವ ಭೈರತಿ ಸುರೇಶ್ ಅವರು ಈ ಎಲ್ಲವನ್ನೂ ನಿಲ್ಲಿಸಿ ತನಿಖೆ ಮಾಡಿಸುತ್ತಿದ್ದಾರೆ. ಇದನ್ನು ಮಾಡುತ್ತಿರುವುದು ತಪ್ಪಾ?” ಎಂದು ಪ್ರಶ್ನಿಸಿದ ಅವರು, “ಮುಖ್ಯಮಂತ್ರಿಗಳು ಮತ್ತು ಅವರ ಕಾನೂನು ಸಲಹೆಗಾರರು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲ ಕಾನೂನು ರೀತಿಯೇ ತೆಗೆದುಕೊಂಡಿರುವುದನ್ನು ತೆರೆದಿಟ್ಟಿದ್ದಾರೆ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯ ಮಲ್ಯ- ಕಳ್ಳನೋ, ಸುಳ್ಳನೋ, ವಂಚಕನೋ ಅಥವಾ ಸಂತನೋ?

ವಿಜಯ ಮಲ್ಯ ಮೇಲಿರುವುದು ಸಾಲ ತೀರಿಸದ ಆರೋಪವೊಂದೇ ಅಲ್ಲ. ಅವರ ಮೇಲೆ...

ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬ: ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ

ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬದ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಗುಡುಗಿ ಹಾಡಿದ ಕವಿ ಸಿದ್ದಲಿಂಗಯ್ಯ: ಅಗ್ರಹಾರ ಕೃಷ್ಣಮೂರ್ತಿಯವರ ನುಡಿನಮನ

ಜೂ. 11ರಂದು ಕವಿ ಸಿದ್ದಲಿಂಗಯ್ಯನವರು ಇಲ್ಲವಾದ ದಿನ. ಅವರೊಂದಿಗೆ ಒಡನಾಡಿದ ಅಗ್ರಹಾರ...

ದೆಹಲಿ ಮಾಜಿ ಸಿಎಂ ಆತಿಶಿ ಬಂಧಿಸಲಾಗಿದೆ ಎಂದ ಎಎಪಿ: ಪೊಲೀಸರ ನಕಾರ

ದೆಹಲಿಯ ಕಲ್ಕಾಜಿಯ ಭೂಮಿಹೀನ್ ಶಿಬಿರದ ನಿವಾಸಿಗಳನ್ನು ಭೇಟಿ ಮಾಡಲು ಹೋದಾಗ ದೆಹಲಿ...

Download Eedina App Android / iOS

X