- ಮಾರ್ಚ್ 29ಕ್ಕೆ ದೇಶದ 31 ನಗರಗಳಲ್ಲಿ ಪತ್ರಿಕಾಗೋಷ್ಠಿ
- ರಾಹುಲ್ ಗಾಂಧಿ ಅನರ್ಹತೆಗೆ ಕಾಂಗ್ರೆಸ್ನಿಂದ ಖಂಡನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿರುವ ಕಾಂಗ್ರೆಸ್, ಎರಡು ದಿನಗಳ ಅವಧಿಯಲ್ಲಿ 35 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ.
ಮೋದಿ ಉಪನಾಮ ಟೀಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ಸಂಸತ್ನಿಂದ ಅನರ್ಹಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರ ಖಂಡಿಸಿ ‘ಪ್ರಜಾಪ್ರಭುತ್ವ ಅನರ್ಹತೆ’ ಎನ್ನುವ ಬ್ಯಾನರ್ನಡಿ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಮಾರ್ಚ್ 28 ಮತ್ತು 29ರಂದು ಕಾಂಗ್ರೆಸ್ನ ಹಿರಿಯ ನಾಯಕರು ‘ಪ್ರಜಾಪ್ರಭುತ್ವ ಅನರ್ಹತೆ’ ಕುರಿತು 35 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ” ಎಂದು ತಿಳಿಸಿದ್ದಾರೆ.
“ಪತ್ರಿಕಾಗೋಷ್ಠಿಗಳಲ್ಲಿ ನೀರವ್ ಮೋದಿ ಮತ್ತು ಲಲಿತ್ ಮೋದಿಗೆ ‘ಮೋದಾನಿ’ ಮತ್ತು ಮೋದಿ ಸರ್ಕಾರ ನೀಡಿದ ‘ಕ್ಲೀನ್ ಚೀಟ್’ನ ವಾಸ್ತವತೆಯನ್ನು ಸಹ ಎತ್ತಿ ಹಿಡಿಯಲಾಗುತ್ತದೆ” ಎಂದಿದ್ದಾರೆ.
ಮಾರ್ಚ್ 28ಕ್ಕೆ ನಾಲ್ಕು ನಗರಗಳಲ್ಲಿ ಪತ್ರಿಕಾಗೋಷ್ಠಿ
ಮಾರ್ಚ್ 28ಕ್ಕೆ ದೇಶದ ನಾಲ್ಕು ನಗರಗಳಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಲಿದೆ.
ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಲಖನೌದಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಅಜಯ್ ಮಾಕೆನ್ ಜಮ್ಮುವಿನಲ್ಲಿ, ಅಶೋಕ್ ಚವಾಣ್ ಹೈದರಾಬಾದ್ನಲ್ಲಿ ಹಾಗೂ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಚಂಡೀಗಢದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್
ಮಾರ್ಚ್ 29 ರಂದು 31 ನಗರಗಳಲ್ಲಿ ಪತ್ರಿಕಾಗೋಷ್ಠಿ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಹಮದಾಬಾದ್, ಬೆಂಗಳೂರಿನಲ್ಲಿ ಆನಂದ್ ಶರ್ಮಾ, ಚಂಡೀಗಢದಲ್ಲಿ ಸುಪ್ರಿಯಾ ಶ್ರೀನೇತ್, ಶಿಮ್ಲಾದಲ್ಲಿ ಶಕ್ತಿಸಿನ್ಹ್ ಗೋಹಿಲ್, ತಿರುವನಂತಪುರದಲ್ಲಿ ಮನೀಷ್ ತಿವಾರಿ, ಸೂರತ್ನಲ್ಲಿ ಕನ್ಹಯ್ಯಾ ಕುಮಾರ್, ವಾರಣಾಸಿಯಲ್ಲಿ ಗೌರವ್ ವಲ್ಲಭ್, ಮುಂಬೈನಲ್ಲಿ ಪವನ್ ಖೇರಾ ಮತ್ತು ಸಲ್ಮಾನ್ ಖುರ್ಷಿದ್ ಅವರು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.