ಐಪಿಎಲ್ 16ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಕೆಕೆಆರ್ ತಂಡ 4ನೇ ಗೆಲುವು ದಾಖಲಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್, ಆತಿಥೇಯ ಸನ್ರೈಸರ್ಸ್ ಹೈದರಾಬಾದ್, ಎಸ್ಆರ್ಎಚ್ ವಿರುದ್ಧ 5 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಮೂರು ಓವರ್ ಬೌಲಿಂಗ್ನಲ್ಲಿ 3 ಬೈ ಸೇರಿದಂತೆ ಕೇವಲ 12 ರನ್ ಬಿಟ್ಟುಕೊಟ್ಟ ಸ್ಪಿನ್ನರ್ ವರುಣ್ ಚಕ್ರವರ್ತಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೇಸಿಂಗ್ ವೇಳೆ 15ನೇ ಓವರ್ವರೆಗೂ ಗೆಲುವಿನತ್ತ ಮುನ್ನಡೆದಿದ್ದ ಎಸ್ಆರ್ಎಚ್, ಕೊನೆಯ 5 ಓವರ್ಗಳಲ್ಲಿ ಬ್ಯಾಟಿಂಗ್ನಲ್ಲಿ ತೋರಿದ ನಿರ್ಲ್ಯಕ್ಷದಿಂದಾಗಿ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ 9 ವಿಕೆಟ್ ನಷ್ಟದಲ್ಲಿ 171 ರನ್ಗಳಿಸಿತ್ತು. ಸವಾಲಿನ ಮೊತ್ತ ಬೆನ್ನಟ್ಟುವ ವೇಳೆ ಹೈದರಾಬಾದ್ ತಂಡ 15 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟದಲ್ಲಿ 134 ರನ್ಗಳಿಸಿತ್ತು. ಮುಂದಿನ 30 ಎಸೆತಗಳಲ್ಲಿ 38 ರನ್ಗಳಿಸಬೇಕಾದ ಸಾಮನ್ಯ ಗುರಿ ಆತಿಥೇಯ ತಂಡದ ಎದುರಿಗಿತ್ತು. ಈ ವೇಳೆ ನಾಯಕ ಮಾರ್ಕಮ್ ಮತ್ತು ಅಬ್ದುಲ್ ಸಮದ್ ಕ್ರೀಸ್ನಲ್ಲಿದ್ದರು. ಹೀಗಾಗಿ ಗೆಲುವಿನ ಅವಕಾಶ ಆತಿಥೇಯ ತಂಡ ಪಾಲಿಗೆ ಇತ್ತು.
ಆದರೆ ಅಂತಿಮ 5 ಓವರ್ಗಳಲ್ಲಿ ಬಿಗು ಬೌಲಿಂಗ್ ಪ್ರದರ್ಶನ ನೀಡಿದ ಕೆಕೆಆರ್ ಬೌಲರ್ಗಳು, ಕೈ ಬಿಟ್ಟು ಹೋಗಿದ್ದ ಪಂದ್ಯವನ್ನು ಮತ್ತೆ ತಮ್ಮ ವಶಕ್ಕೆ ಪಡೆದರು. ಕೊನೆಯ 5 ಓವರ್ಗಳಲ್ಲಿ ಕ್ರಮವಾಗಿ 4,8,5,12 ಹಾಗೂ ಕೊನೆಯ ಓವರ್ನಲ್ಲಿ ಕೇವಲ ಮೂರು ರನ್ಗಳಿಸಲಷ್ಟೇ ಎಸ್ಆರ್ಎಚ್ ಬ್ಯಾಟರ್ಗಳಿಗೆ ಸಾಧ್ಯವಾಯಿತು.
ಅಂತಿಮ 6 ಎಸೆತಗಳಲ್ಲಿ ಎಸ್ಆರ್ಎಚ್ ಗೆಲುವಿಗೆ ಕೇವಲ 9 ರನ್ಗಳ ಅಗತ್ಯವಿತ್ತು. ಆದರೆ ಸ್ಪಿನ್ನರ್ ವರುಣ್ ಚಕ್ರವರ್ತಿ, ಕೇವಲ ಮೂರು ರನ್ ಮಾತ್ರ ಬಿಟ್ಟುಕೊಡುವ ಕೊಡುವ ತಂಡಕ್ಕೆ ಗೆಲುವು ತಂದುಕೊಟ್ಟರು.