ಹಣಕ್ಕಾಗಿ ಸಾಕು ಮಕ್ಕಳೇ ಮಹಿಳೆಯೊಬ್ಬರಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಮಾರ್ಕೆಟ್ನಲ್ಲಿ ನಡೆದಿದೆ.
ಅಣ್ಣಮ್ಮ (56) ಚಾಕು ಇರಿತಕ್ಕೊಳಗಾದ ಮಹಿಳೆ. ಸುಮಿತ್ರಾ ಹಾಗೂ ಮುನಿರಾಜು ಆರೋಪಿಗಳು. ಅಣ್ಣಮ್ಮ ಅವರು ತಮ್ಮ ಅಕ್ಕನ ಮಕ್ಕಳಾದ ಸುಮಿತ್ರಾ, ಮುನಿರಾಜು ಅವರನ್ನು ಸಾಕುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಮುನಿರಾಜು ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆದರೆ, ಆತನಿಗೆ ಕೆಲಸದ ಸ್ಥಳದಲ್ಲಿ ಸಂಬಳ ನೀಡುತ್ತಿಲ್ಲ. ನೀವೆ ಬಂದು ಸಂಬಳ ಕೊಡಿಸಿ ಎಂದು ಸುಮಿತ್ರಾ ಮತ್ತು ಮುನಿರಾಜು ಅಣ್ಣಮ್ಮನನ್ನು ಕರೆದುಕೊಂಡು ಹೋಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ; ಆದರೆ, ತಜ್ಞರ ಯೋಚನೆಯೇನು?
ಈ ಸಮಯದಲ್ಲಿ ಅಣ್ಣಮ್ಮಗೆ ಮುನಿರಾಜು ಚಾಕು ಇರಿದಿದ್ದಾನೆ. ನಂತರ, ಮನೆಯಲ್ಲಿದ್ದ ₹6 ಲಕ್ಷ ನಗದು ಮತ್ತು ಚಿನ್ನವನ್ನು ದರೋಡೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.