ಎಸ್.ಯು.ಸಿ.ಐ. ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಎಚ್ ಟಿ ಇಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐನ ಹಿರಿಯ ರಾಜ್ಯ ಸೆಕ್ರೇಟೆರಿಯೇಟ್ ಸದಸ್ಯರಾದ ಡಾ. ಟಿ. ಎಸ್. ಸುನೀತ ಕುಮಾರ್ , ಪಕ್ಷದ ಮುಖಂಡರಾದ ಬಿ. ಭಗವಾನರೆಡ್ಡಿ ಮತ್ತು ಸದಸ್ಯರಾದ ಎಚ್.ಟಿ. ಭರತ ಕುಮಾರ ಮತ್ತು ಮಹಾದೇವಿ ಧರ್ಮಶೆಟ್ಟಿ ಉಪಸ್ಥಿತರಿದ್ದರು.
ಕಳೆದ ಹಲವಾರು ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಎಐಯುಟಿಯುಸಿ ನೇತೃತ್ವದಲ್ಲಿ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹ ಕಾರ್ಯಕರ್ತೆಯರ ಸಮಸ್ಯೆಗಳ ನಿವಾರಣೆಗಾಗಿ ನಿರಂತರ ಹೋರಾಟ ಕಟ್ಟಿ ಬೆಳೆಸಿರುವ ಇವರು ಉದ್ಯಾನವನದ ಕಾರ್ಮಿಕರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ನೌಕರರ, ಜೊತೆಗೆ ವಸತಿ ನಿಲಯ ಕಾರ್ಮಿಕರ ಸಮಸ್ಯೆಗಳ ವಿರುದ್ದ ಯಶಸ್ವಿ ಚಳುವಳಿಯ ನೇತೃತ್ವ ವಹಿಸಿದ ಮಲ್ಲಿಕಾರ್ಜುನ ಅವರು ಲೋಕಸಭಾ ಚುನಾವಣೆಗೆ ಕಣಕ್ಕಿಳಿದಿದ್ದಾರೆ.