‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಲೇಖಕ ನಾಗರಾಜ್ ಹರಪನಹಳ್ಳಿ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ಮತ ಚಲಾವಣೆ ಉಸಿರಾಟದಷ್ಟೇ ಮುಖ್ಯ. ಅಧಿಕಾರ ಕೇಂದ್ರವನ್ನು ನಿಯಂತ್ರಿಸುವ ಶಕ್ತಿ ಮತದಾನಕ್ಕೆ ಇದೆ ಎಂಬುದು ಸಾಬೀತುಪಡಿಸಲು ಮತ ಚಲಾವಣೆ ಅತೀ ಮುಖ್ಯ ಪ್ರಕ್ರಿಯೆ.
ಈ ಬಾರಿಯ ಚುನಾವಣೆ ಯಾಕೆ ಮುಖ್ಯ?
ಈ ಸಲದ ಚುನಾವಣೆ ಧಾರ್ಮಿಕ ಮತಾಂಧರನ್ನು, ಮನುಷ್ಯ-ಮನುಷ್ಯರ ಮಧ್ಯೆ ದ್ವೇಷ ಬೆಳೆಸುವವರನ್ನು ಸೋಲಿಸುವ ದೃಷ್ಟಿಯಿಂದ ಮುಖ್ಯ. ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಈ ಕಾಲದ ತುರ್ತು ಅಗತ್ಯತೆಗಾಗಿ ಈ ಚುನಾವಣೆ ಮುಖ್ಯವಾಗಿದೆ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಬರಲಿರುವ ಸರ್ಕಾರ ಮಾನವೀಯವಾಗಿ ಇರಬೇಕು. ರೈತರು ಮತ್ತು ಯುವ ಜನರ ಹಿತ ಕಾಪಾಡಬೇಕು. ಶಿಕ್ಷಣ ಮತ್ತು ಆರೋಗ್ಯ ಸೇವೆ ಸಾಧ್ಯವಿರುವಷ್ಟು ಜನರಿಗೆ ಉಚಿತವಾಗಿ ಕೊಡುವ ಕೆಲಸವಾಗಬೇಕು.