ಏರ್‌ ಇಂಡಿಯಾದಲ್ಲಿ ಸಿಬ್ಬಂದಿ ಕೊರತೆ ; ಹಲವು ವಿಮಾನಗಳ ಕಡಿತ

Date:

  • ನ್ಯೂಯಾರ್ಕ್‌, ಸ್ಯಾನ್‌ ಫ್ರಾನ್ಸಿಸ್ಕೊದ ತಲಾ 3 ವಿಮಾನ ಕಡಿತ
  • ಏರ್‌ ಇಂಡಿಯಾದಿಂದ ಅಮೆರಿಕಕ್ಕೆ ವಾರಕ್ಕೆ 47 ವಿಮಾನ ಕಾರ್ಯ

ಏರ್‌ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯೊಂದಾಗಿ ಭಾರತದಿಂದ ಅಮೆರಿಕಕ್ಕೆ ತೆರಳುವ ಹಲವು ವಿಮಾನಗಳನ್ನು ಕಡಿತಗೊಳಿಸಲಾಗಿದೆ.

“ನ್ಯೂಯಾರ್ಕ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊಗೆ ತೆರಳುವ ತಲಾ ಮೂರು ವಿಮಾನಗಳ ಹಾರಾಟವನ್ನು ಸಿಬ್ಬಂದಿ ಕೊರತೆಯಿಂದ ಮುಂದಿನ 2-3 ತಿಂಗಳ ಕಾಲ ಕಡಿತಗೊಳಿಸಲಾಗುವುದು” ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ಸೋಮವಾರ (ಮಾರ್ಚ್‌ 20) ತಿಳಿಸಿದ್ದಾರೆ.

ಏರ್ ಇಂಡಿಯಾದ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ತೆರಳುವ ವಿಮಾನ ಮೂರು ತಿಂಗಳ ಕಾಲ ರದ್ದುಗೊಳ್ಳುತ್ತದೆ. ನೆವಾರ್ಕ್‌ಗೆ ತೆರಳುವ ವಿಮಾನ ಒಂದು ತಿಂಗಳಿಗೂ ಹೆಚ್ಚು ಕಾಲ ರದ್ದಾಗಲಿದೆ. ಮುಂಬೈನಿಂದ ನ್ಯೂಯಾರ್ಕ್‌ಗೆ ಹಾರುವ ವಿಮಾನದ ಪ್ರಯಾಣವನ್ನು ಮೇ ತಿಂಗಳು ಪೂರ್ತಿ ನಿಲ್ಲಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಯ ಆಂತರಿಕ ಸಂವಹನ ವಿಭಾಗ ಹೇಳಿದೆ.

“ಏರ್ ಇಂಡಿಯಾದ ಎಐ 105/106 ವಿಮಾನ ಮಾರ್ಚ್ 26 ರಿಂದ ಏಪ್ರಿಲ್ 29ರವರೆಗೆ ರದ್ದುಗೊಳ್ಳಲಿದೆ. ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುವ ಎಐ 119/116 ವಿಮಾನ ಸಂಪೂರ್ಣ ಮೇ ತಿಂಗಳವರೆಗೆ ಇರುವುದಿಲ್ಲ. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹಾರುವ ಎಐ 173/174 ವಿಮಾನ ಸೇವೆಯನ್ನು ಮಾರ್ಚ್ 26 ರಿಂದ ಜೂನ್ 29ರವರೆಗೆ ರದ್ದುಗೊಳಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ಸಂಸ್ಥೆಯು ಅಮೆರಿಕಕ್ಕೆ ವಾರದಲ್ಲಿ 47 ವಿಮಾನಗಳನ್ನು ನಿರ್ವಹಿಸುತ್ತದೆ. ಇದರಲ್ಲಿ ಏಳು ಶಿಕಾಗೊ, 14 ನ್ಯೂಯಾರ್ಕ್, ಆರು ನೆವಾರ್ಕ್, 17 ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಮೂರು ಡಲ್ಲೆಸ್‌ಗೆ ಸಂಚರಿಸುತ್ತವೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರೊಬ್ಬರು ತಿಳಿಸಿದರು.

“ನಾವು ಒಂದೇ ಮಾರ್ಗಗಳಲ್ಲಿ ಪುನರಾವರ್ತನೆಯಾಗುವ ವಿಮಾನಗಳನ್ನು ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ” ಎಂದು ಕ್ಯಾಪ್‌ಬೆಲ್‌ ವಿಲ್ಸನ್‌ ಹೇಳಿದರು.

ಸಿಬ್ಬಂದಿ ಕೊರತೆಯಿಂದ ವಿಮಾನಯಾನ ಸಂಸ್ಥೆಯು ತನ್ನ ಬಿ787 ವಿಮಾನವನ್ನು ನಿರ್ವಹಿಸುವ ಬದಲು ದುಬೈ ಮತ್ತು ಬ್ಯಾಂಕಾಕ್‌ಗೆ ಸಣ್ಣ ಗಾತ್ರದ ವಿಮಾನವನ್ನು ನಿರ್ವಹಿಸುತ್ತಿದೆ. ಗರಿಷ್ಠ ಚಳಿಗಾಲದ ಪ್ರಯಾಣದ ಅವಧಿಯಲ್ಲಿ ವಿಮಾನಯಾನ ಸಂಸ್ಥೆಯು ನ್ಯೂಯಾರ್ಕ್, ವಿಯೆನ್ನಾ, ಕೋಪನ್ ಹ್ಯಾಗನ್ ಮತ್ತು ಮಿಲನ್‌ಗೆ ತೆರಳುವ ವಿಮಾನಗಳನ್ನು ರದ್ದುಗೊಳಿಸಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡಮಾರುತ | ತಮಿಳುನಾಡಿನಲ್ಲಿ ಹೈ ಅಲರ್ಟ್‌; ಶಾಲಾ-ಕಾಲೇಜು ರಜೆ ಘೋಷಣೆ

ಬಂಗಾಳಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ರೂಪುಗೊಂಡಿದೆ. ಈ ಹಿನ್ನೆಲೆ, ಆಂಧ್ರಪ್ರದೇಶ ಮತ್ತು ತಮಿಳುನಾಡಿನತ್ತ...

ಮಿಚಾಂಗ್ ಚಂಡಮಾರುತಕ್ಕೆ ಆಂಧ್ರ – ತಮಿಳುನಾಡು ತತ್ತರ; 120 ರೈಲುಗಳ ಸಂಚಾರ ರದ್ದು

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಆಂಧ್ರ...

ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

ಇಂದು ಪ್ರಕಟಗೊಂಡ ಚುನಾವಣಾ ಫಲಿತಾಂಶಗಳ ಬಗ್ಗೆ ಚುನಾವಣಾ ಆಯೋಗ ಎಲ್ಲ ರಾಜ್ಯಗಳ...

ಈ ಫಲಿತಾಂಶ ಲೋಕಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವಿನ ಮುನ್ಸೂಚನೆ: ಪ್ರಧಾನಿ ನರೇಂದ್ರ ಮೋದಿ

'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹ್ಯಾಟ್ರಿಕ್‌ ಗೆಲುವು 2024ರ...