ಉಜ್ಬೇಕಿಸ್ತಾನದ ಸಿಪ್ನಿಂದ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿ ನೋಯ್ಡಾ ಮೂಲದ ಔಷಧೀಯ ಘಟಕ ಮಾರಿಯನ್ ಬಯೋಟೆಕ್ನ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ.
ಉಜ್ಬೇಕಿಸ್ತಾನದ 18 ಮಕ್ಕಳ ಸಾವಿಗೆ ಕಾರಣವಾದ ಸಿರಪ್ಗಳಲ್ಲಿ ಮಾರಿಯನ್ ಬಯೋಟೆಕ್ನ ಕೆಮ್ಮಿನ ಸಿರಪ್ ಡಾಕ್ 1 ಸಹ ಇದೆ ಎಂದು ಹೇಳಲಾಗಿದೆ. ಕಳೆದ ಡಿಸೆಂಬರ್ನಲ್ಲಿ ನಡೆದ ಈ ಘಟನೆ ಸಂಬಂಧ ಕೇಂದ್ರ ಹಾಗೂ ರಾಜ್ಯ ಔಷಧ ನಿಯಂತ್ರಕ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.
“ಮಕ್ಕಳ ಸಾವಿಗೆ ಸಂಬಂಧಿಸಿ ತನಿಖೆ ಕೈಗೊಂಡಾಗಿನಿಂದ ಜನವರಿಯಿಂದ ಮಾರಿಯನ್ ಬಯೋಟೆಕ್ನ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿತ್ತು. ಈಗ ಉತ್ತರ ಪ್ರದೇಶದ ಔಷಧ ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರ ಸಂಸ್ಥೆಯ ಪರವಾನಗಿ ರದ್ದುಗೊಳಿಸಿದೆ” ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ನೋಯ್ಡಾ ಪೊಲೀಸರು ಮಾರ್ಚ್ 3 ರಂದು ಮಾರಿಯನ್ ಬಯೋಟೆಕ್ನ ಮೂವರು ಉದ್ಯೋಗಿಗಳನ್ನು ಬಂಧಿಸಿದ್ದರು. ತನಿಖೆ ವೇಳೆ ಮಾರಿಯನ್ ಬಯೋಟೆಕ್ನ ಕೆಮ್ಮಿನ ಔಷಧಿಗಳು ಕಲಬೆರಕೆಯಿಂದ ಕೂಡಿದ್ದು ಗುಣಮಟ್ಟದ ಕೊರತೆಯಿದೆ ಎಂದು ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.