ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರಿನಲ್ಲಿ ಭಾನುವಾರ ಸಂಭವಿಸಿದ ಬೋಟ್ ದುರಂತದಲ್ಲಿ 6 ಮಕ್ಕಳು ಮತ್ತು 3 ಮಹಿಳೆಯರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. 20 ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ತಾನೂರಿನ ಒಟ್ಟುಂಪುರಂನ ತೂವಲ್ ಥೀರಂ ಎಂಬಲ್ಲಿ ಭಾನುವಾರ ಸಂಜೆ 6.30ರ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ನದಿಯಲ್ಲಿ ಮುಳುಗಿದ ಎರಡು ಅಂತಸ್ತಿನ ಬೋಟ್ನಲ್ಲಿ 40 ರಿಂದ 50 ಮಂದಿ ಪ್ರವಾಸಿಗರಿದ್ದರು ಎನ್ನಲಾಗಿದೆ. ಬೋಟ್ನಿಂದ ಜಿಗಿದು ಕೆಲವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.
ದುರಂತಕ್ಕೀಡಾದ ಬೋಟ್ಗೆ ಎರಡು ಬಾಗಿಲುಗಳಿದ್ದರೂ ಸಹ, ಸಣ್ಣ ಮಕ್ಕಳು ಸೇರಿದಂತೆ ಹಲವು ಕುಟುಂಬಗಳು ಹೊರಬರಲಾಗದೆ ಕೆಳಗಿನ ಅಂತಸ್ತಿನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಈಜಿ ದಡ ಸೇರಿದ ಶಫೀಕ್ ಎಂಬುವವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.