ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್

Date:

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು ಕಟ್ಟಿಕೊಟ್ಟ ಸಾಕ್ಷ್ಯಚಿತ್ರಗಳತ್ತ ಒಂದು ನೋಟ...

ತನ್ನ ಪ್ರತಿ ಸಿನೆಮಾವನ್ನೂ ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್(ಆಗಸ್ಟ್ 11, 1941- ಸೆಪ್ಟಂಬರ್ 15, 2026), ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಪ್ಪಟ ಸಮಾಜವಾದಿ ಬದುಕಿನ ಕಣ್ಣೋಟದ ಗುಜ್ಮಾನ್, ಚಿಲಿಯ ಸಮಾಜವಾದಿ ಪಕ್ಷದ ನಾಯಕ ಸಲ್ವೋಡೊರ್ ಅಲಾಂಡೆ ಜನ ಸಾಮೂಹಿಕ ಚಳವಳಿಯ ಮೂಲಕ 1970ರಲ್ಲಿ ದೇಶದ ಅಧ್ಯಕ್ಷತೆ ವಹಿಸಿಕೊಂಡ ನಂತರದ ಒಂದು ವರ್ಷದ ಆಡಳಿತದ ಚಿತ್ರಣವನ್ನು ಕಟ್ಟಿಕೊಡುವ Primer Uno (First Year-1971) ಮೂಲಕ ಸಾಕ್ಷ್ಯ ಚಿತ್ರ ನಿರ್ದೇಶನದ ಬದುಕು ಆರಂಭಿಸಿದರು. 1973ರಲ್ಲಿ ಅಮೆರಿಕೆಯ CIAಯೊಂದಿಗೆ ಶಾಮೀಲಾಗಿ, ಜನರಲ್ ಪಿನೋಷೆಟಾ ಒಳಸಂಚಿನ ಮಿಲಿಟರಿ ಬುಡಮೇಲು ಕೃತ್ಯ ನಡೆಸಿ ಅಲಾಂಡೆಯ ಹತ್ಯೆಗೈದು ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಿದಾಗ ಗುಜ್ಮಾನ್ ಬಂಧನಕ್ಕೆ ಒಳಗಾದರು. 1971-1973ರವರೆಗೆ ಚಿಲಿಯಲ್ಲಿನ ಬೆಳವಣಿಗೆಗಳನ್ನು ಗುಜ್ಮಾನ್ ಚಿತ್ರಿಸಿದ್ದರು; ಆ ರೀಲುಗಳನ್ನು ಉಪಾಯದಿಂದ ದೇಶದ ಹೊರಗೆ ಸಾಗಿಸಿ, ತಾವು ಹತ್ಯೆಯ ಅಪಾಯದಿಂದ ಪಾರಾಗಿ ಮೊದಲು ಕ್ಯುಬಾ, ನಂತರ ಸ್ಪೇನ್ ಮತ್ತು ಫ್ರಾನ್ಸ್‌ಗಳಲ್ಲಿ ದೇಶಭ್ರಷ್ಟನಾಗಿ ನೆಲೆಸಿದರು. ತಾವು ಚಿತ್ರಿಸಿದ್ದ ದೃಶ್ಯಗಳನ್ನು ಸಂಕಲಿಸಿ, ಇಂದಿಗೆ ಬಲು ಪ್ರಸಿದ್ಧಿ ಪಡೆದಿರುವ Battle of Chile ಎಂಬ ಮೂರು ಭಾಗಗಳ ಸಾಕ್ಷ್ಯಚಿತ್ರವನ್ನು ಕಟ್ಟಿ, ಸಾಕ್ಷ್ಯ ಚಿತ್ರಕ್ಕೆ ಚರಿತ್ರೆ ನಿರೂಪಣೆಯ ವ್ಯಾಕರಣವನ್ನು ರಚಿಸಿದರು.

- Advertisement -

ದೇಶ ಭ್ರಷ್ಟರಾಗಿ ಹೊರ ದೇಶಗಳಲ್ಲಿ ಬದುಕಿದರೂ, ಅವರ ಕಲಾ ಸೃಜನತೆಯ ಅನವರತ ಗಮನ ಚಿಲಿ ಹಾಗೂ ಅದರ ಜನ ಇತಿಹಾಸವಾಗಿತ್ತು. ತನ್ನ ನೆಲದ ಭೂಗೋಳ ವಿಶಿಷ್ಟತೆ, ಮಾನವ ಬದುಕಿನ ಹಾದಿ, ದೇಶ-ಪರದೇಶ ಅಧಿಕಾರ ದಾಹದಲ್ಲಿ ನಾಡು ಹಾದ ಬೆಂಕಿ ಕೊಂಡಗಳನ್ನು ಎಳೆ ಎಳೆಯಾಗಿ ಗ್ರಹಿಸಿ ಅವರು ಕಟ್ಟಿರುವ ತ್ರಿವಳಿಗಳಾದ- Nostalgia for light, The pearl button ಮತ್ತು The Cordillera of dreams- ಇವು ಸಾಕ್ಷ್ಯಚಿತ್ರ ಕಟ್ಟುವಿಕೆಗೆ ಹೊಸ ದಿಗಂತವನ್ನೇ ಸೃಷ್ಟಿಸಿದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

ಅವರ ಕೊನೆಯ ಕೃತಿ My Imaginary Country ಯು ಅಕ್ಟೋಬರ್ 2019ರಲ್ಲಿ ಚಿಲಿಯ ರಾಜಧಾನಿ ಸ್ಯಾಂಟಿಯಾಗೋದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯು ಹೇಗೆ ನವ ಜನಾದೋಂಲನಕ್ಕೆ ಬೀಜವಾಗಿ, ದೇಶದ ಕಡೆಗಣಿತ ಜನ ಸಮೂಹವು ಸೆಟೆದೆದ್ದು ಹೊಸ ರಾಜಕೀಯ ದೆಸೆ ರೂಪಿಸಿತು ಎಂದು ನಿರೂಪಿಸುವ ಸಮಾಜಶಾಸ್ತ್ರದ ಕೈಪಿಡಿಯಾಗಿದೆ.
1973ರಲ್ಲಿ ಸಾಮ್ರಾಜ್ಯಶಾಹಿ ಕುಮ್ಮಕ್ಕಿನ ದೇಶಿ ಸರ್ವಾಧಿಕಾರದ ದಬ್ಬಾಳಿಕೆಯ ಕಾರಣ ದೇಶಭ್ರಷ್ಟನಾದ ಕಲಾವಿದನೊಬ್ಬ, ಐದು ದಶಕಗಳ ಕಾಲದ ತನ್ನ ಸಮಾಜವಾದಿ ತುಡಿತ, ಹತಾಶೆಗಳಿಗೆ- 1970-73ರ ಸಮಾಜವಾದಿ ನಾಡಿನ ಉಸಿರ ಕಣಗಳನ್ನು ಮೊಗೆದೆತ್ತಿ ಕೊಟ್ಟಂತೆ 80 ದಾಟಿದ ಗುಜ್ಮಾನ್‌ನನ್ನು ನವ ಯುವ ಚಳವಳಿ ಪುಳಕಿಸುವ ಬಗೆಯ ಭಾವತರಂಗಗಳ ದೃಶ್ಯ ಪ್ರತಿಮೆಗಳಿಗಾಗಿ My Imaginary Country ಯು ಅನನ್ಯವಾಗಿದೆ.

Advertisements

ಹಿರಿಯ ಗೆಳೆಯ ದಾರ್ಶನಿಕ ಗುಜ್ಮಾನ್ ನೀವು ಚಿರಾಯು.

paniraj
ಕೆ. ಫಣಿರಾಜ್
+ posts

ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಕೆ. ಫಣಿರಾಜ್
ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಳಿ ಮೂವತ್ತರಲ್ಲೇ ಮಹಿಳೆಯರ ಹೃದಯಕ್ಕೆ ಮುಪ್ಪು; ಪುರುಷರಿಗಿಂತ 10 ವರ್ಷ ಮುನ್ನವೇ ಆರಂಭ!

ಮಹಿಳೆಯರ ಹೃದಯದ ಆರೋಗ್ಯದ ಕುರಿತಂತೆ ಇದುವರೆಗೆ ಇದ್ದ ಸಾಮಾನ್ಯ ನಂಬಿಕೆಗಳನ್ನು ಸಂಪೂರ್ಣವಾಗಿ...

ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ, ಹೋರಾಟವೇ ಪ್ರೇರಣೆ: ಪ್ರೊ. ಸಿ.ಎಂ ತ್ಯಾಗರಾಜ

ರಾಣಿ ಚನ್ನಮ್ಮನ ಚರಿತ್ರೆ ಹಾಗೂ ಅವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸ್ವಾಭಿಮಾನ, ಧೈರ್ಯ...

ಹವಾಮಾನ ವೈಪರೀತ್ಯ: ತೀವ್ರ ಶಾಖದ ಅಪಾಯಕ್ಕೆ ತುತ್ತಾಗುತ್ತಿರುವವರಲ್ಲಿ ಭಾರತೀಯರೇ ಹೆಚ್ಚು

ಮಾನವ ಕೃತ್ಯಗಳಿಂದಾಗಿ ಭಾರೀ ಹವಾಮಾನ ವೈಪರೀತ್ಯ‌ ಎದುರಾಗಿದೆ. ಉಳ್ಳವರ ಕೃತ್ಯಕ್ಕೆ ಇಡೀ...

ಬಾಗಲಕೋಟೆ | ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ: ರಾಷ್ಟ್ರಮಟ್ಟದ ಸಾಧನೆಗೆ ಸಚಿವ ಕಾಶಪ್ಪನವರ ಕರೆ

ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ...