ಕೊನೆಯ ಓವರ್ನ ಎರಡು ಬಾಲ್ಗೆ ಒಂದು ಸಿಕ್ಸರ್ ಒಂದು ಫೋರ್ ಬಾರಿಸಿ ತಂಡಕ್ಕೆ ಜಯ ತಂದಿಟ್ಟ ಜಡೇಜಾ
ಸೋಮವಾರ ತಡರಾತ್ರಿ ಮುಕ್ತಾಯವಾದ ಐಪಿಎಲ್ ಫೈನಲ್ನಲ್ಲಿ ಚೆನ್ನೈ ತಂಡವು 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಆ ಮೂಲಕ ಸತತ ಎರಡನೇ ಪ್ರಶಸ್ತಿ ಗೆಲ್ಲುವ ಗುಜರಾತ್ ಟೈಟನ್ಸ್ ತಂಡದ ಕನಸನ್ನು ನುಚ್ಚು ನೂರು ಮಾಡಿತು.
ಗುಜರಾತ್ ಟೈಟನ್ಸ್ ತಂಡ ನೀಡಿದ 215 ರನ್ ಗಳ ಬೆನ್ನು ಹತ್ತಿದ ಚೆನ್ನೈ ತಂಡ, ಮೊದಲ ಓವರ್ನ ಮೂರು ಬಾಲ್ ಆಡಿ ಮಳೆಯ ಕಾರಣದಿಂದಾಗಿ ಆಟ ನಿಲ್ಲಿಸಿತು. ಆ ನಂತರ, ತಡರಾತ್ರಿ ಮಳೆ ನಿಂತಾಗ ಮತ್ತೆ ಶುರುವಾದ ಆಟಕ್ಕೆ ಡಕ್ವರ್ಥ್ ಲೂಯಿಸ್ ನಿಯಮದಂತೆ 15 ಓವರ್ ಗಳಲ್ಲಿ 171 ರನ್ಗಳ ಗುರಿ ನೀಡಲಾಯಿತು. 171 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಕೊನೆಯ ಎರಡು ಎಸೆತಗಳಲ್ಲಿ 10 ರನ್ ಗಳಿಸುವ ಸವಾಲು ಎದುರಾಯಿತು.
15ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದ ಜಡೇಜಾ ಚೆನ್ನೈಗೆ ರೋಚಕ ಜಯ ತಂದುಕೊಟ್ಟರು. ಕೊನೆಗೂ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ನಿಜವಾಗಿಸಿದ ಧೋನಿ, ಚೆನ್ನೈಗಾಗಿ ಗೆಲುವು ತಂದುಕೊಟ್ಟರೆ, ರೋಚಕ ಪಂದ್ಯದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ತಂಡದ ಆಟಗಾರರು ಧೋನಿಗಾಗಿ ಆಡಿ ಗೆಲುವು ತಂದುಕೊಟ್ಟರು. ಆ ಮೂಲಕ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್ ಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಸಾಯಿ ಸುದರ್ಶನ್ ಹಾಗೂ ಸಾಹ ಅವರ ಅದ್ಭುತ 96 ರನ್ಗಳ ನೆರವಿನಿಂದಾಗಿ 4 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ ವರುಣನ ಅಡೆತಡೆಯನ್ನೂ ಲೆಕ್ಕಿಸದೆ, ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ದಿದ್ದು, ಆ ಗೆಲುವನ್ನು ಧೋನಿಗಾಗಿ ಮುಡಿಪಾಗಿಟ್ಟಿದ್ದು, ಎಲ್ಲ ಆಟಗಾರರಲ್ಲೂ ಎದ್ದು ಕಾಣುತ್ತಿತ್ತು.