ಟಿ20 | ಅತಿ‌ಹೆಚ್ಚು ರನ್ ಚೇಸಿಂಗ್‌‌, ದಾಖಲೆ ಬರೆದ ದಕ್ಷಿಣ ಆಫ್ರಿಕಾ

Date:

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತಿಹೆಚ್ಚು ರನ್‌ ಬೆನ್ನಟ್ಟುವ ಮೂಲಕ ದಕ್ಷಿಣ ಆಫ್ರಿಕಾ ಹೊಸ ದಾಖಲೆ ಬರೆದಿದೆ.

ಸೆಂಚುರಿಯನ್‌ ಮೈದಾನದಲ್ಲಿ ವೆಸ್ಟ್‌ ಇಂಡೀಸ್‌ ಮುಂದಿಟ್ಟಿದ್ದ 259 ರನ್‌ಗಳ ಗುರಿಯನ್ನು ಆತಿಥೇಯ ಆಫ್ರಿಕಾ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಬೆನ್ನಟ್ಟಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಮೊತ್ತವನ್ನು ಚೇಸ್‌ ಮಾಡಿದ ತಂಡ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲೂ ಅತಿಹೆಚ್ಚು ಮೊತ್ತವನ್ನು ಬೆನ್ನಟ್ಟಿದ ಗೆಲುವಿನ ದಾಖಲೆ ಹರಿಣಗಳ ಹೆಸರಿನಲ್ಲೇ ಇದೆ. (438/9 ಆಸ್ಟ್ರೇಲಿಯ ವಿರುದ್ಧ)

2022ರಲ್ಲಿ ಸೆರ್ಬಿಯಾ ವಿರುದ್ಧ ಬಲ್ಗೇರಿಯಾ 243 ರನ್‌ಗಳನ್ನು (19.4 ಓವರ್‌) ಚೇಸ್‌ ಮಾಡಿದ್ದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಇದುವರೆಗಿನ ದಾಖಲೆಯಾಗಿತ್ತು.

ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕೆರಿಬಿಯನ್ನರು, ಜಾನ್ಸನ್ ಚಾರ್ಲ್ಸ್ ಗಳಿಸಿದ ಚೊಚ್ಚಲ ಟಿ20 ಶತಕ (118 ರನ್‌, 46 ಎಸೆತ, 4X10, 6X11) ಮತ್ತು ಕೈಲ್ ಮೇಯರ್ಸ್ ಅರ್ಧಶತಕಗಳ (51 ರನ್‌, 27 ಎ., 4X5, 6X4) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ 258 ರನ್‌ಗಳಿಸಿತ್ತು.

ಚೇಸಿಂಗ್‌ ವೇಳೆ ಮೊದಲನೇ ವಿಕೆಟ್‌ಗೆ ಕ್ವಿಂಟನ್‌ ಡಿಕಾಕ್‌ ಮತ್ತು ರೀಝಾ ಹೆಂಡ್ರಿಕ್ಸ್‌ ಮೊದಲ 10 ಓವರ್‌ಗಳಲ್ಲೇ 149 ರನ್‌ ದಾಖಲಿಸುವ ಮೂಲಕ ಅಬ್ಬರದ ಆರಂಭ ಒದಗಿಸಿದ್ದರು. ವೃತ್ತಿ ಜೀವನದ 79ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾ ಮೊದಲ ಶತಕ ಡಿ‌ ಕಾಕ್ ಮೊದಲ ಶತಕದ ಸಂಭ್ರವನ್ನಾರಿಸಿದರು.( 100 ರನ್‌, 44 ಎಸೆತ, 4×9 6×8) ರೀಝಾ ಹೆಂಡ್ರಿಕ್ಸ್‌ 68 ರನ್‌ಗಳಿಸಿದರು (28 ಎಸೆತ, 4×11 6×2).

ಶನಿವಾರ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 3 ವಿಕೆಟ್‌ಗಳ ಜಯ ಸಾಧಿಸಿತ್ತು. ಸರಣಿ ನಿರ್ಧಾರಕ ಮೂರನೇ ಪಂದ್ಯ ಮಂಗಳವಾರ ಜೊಹಾನೆಸ್‌ಬರ್ಗ್‌ನಲ್ಲಿ ನಡೆಯಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದೇವರು ಆತನಿಗೆ ಮರುಜನ್ಮ ನೀಡಿದ್ದಾನೆ’: ಪ್ರಾಣ ಉಳಿಸಿದ ನಂತರ ವಿಡಿಯೋ ಪೋಸ್ಟ್ ಮಾಡಿದ ಶಮಿ

ಇತ್ತೀಚಿಗೆ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತ...

ಟಿ20 | ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ರೋಚಕ ಗೆಲುವು: ಜೋಶ್ ಇಂಗ್ಲಿಸ್ ಶತಕ ವ್ಯರ್ಥ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್...

ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.7 ಲಕ್ಷ ರೂ. ವಂಚನೆ, ದೂರು ದಾಖಲು

ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ...

ಪಾಪಿಗಳು ಹಾಜರಾದ ಕಾರಣ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿದೆ: ಮಮತಾ ಬ್ಯಾನರ್ಜಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಂತರ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ...