ಚುನಾವಣಾ ಮತ ಎಣಿಕೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಈಗಗಲೇ 10 ಸುತ್ತುಗಳ ಮತ ಎಣಿಕೆ ಮುಗಿದಿದೆ. ಬಿಎಸ್ಪಿಯಿಂದ ಉಚ್ಚಾಟನೆಗೊಂಡು, ನೀಲಿ ಶಾಲು ಕಳಚಿಟ್ಟು ಹಿಂದುತ್ವವಾದಿಗಳ ಕೇಸರಿ ಶಾಲು ಧರಿಸಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್ ಮಹೇಶ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್ ಕೃಷ್ಣಮೂರ್ತಿ ಮುನ್ನಡೆ ಸಾಧಿಸಿದ್ದಾರೆ. ಇದೂವರೆಗೆ ಎಣಿಕೆಯಾಗಿರುವ ಮತಗಳ ಪೈಕಿ 61,858 ಮತಗಳನ್ನು ಪಡೆದು ಕೃಷ್ಣಮೂರ್ತಿ ಮುನ್ನಡೆಯಲ್ಲಿದ್ದಾರೆ. 28,124 ಮತಗಳನ್ನು ಪಡೆದು ಎನ್ ಮಹೇಶ್ ಭಾರೀ ಹಿನ್ನಡೆಯಲ್ಲಿದ್ದಾರೆ.
ದಲಿತ ಚಳುವಳಿಗೆ ತಿಲಾಂಜಲಿ ಇಟ್ಟು ಕೇಸರಿ ಪಡೆ ಸೇರಿರುವ ಮಹೇಶ್ ಅವರನ್ನು ಸೋಲಿಸಬೇಕೆಂದು ಕ್ಷೇತ್ರ ಜನರು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಈಗ ಮತ ಎಣಿಕೆಯು ಅದನ್ನು ಸಾಕ್ಷೀಕರಿಸುತ್ತಿದೆ.