ವೈಯಕ್ತಿಕ ದ್ವೇಷ ಹಾಗೂ ಜಮೀನು ವ್ಯಾಜ್ಯದ ಕಾರಣದಿಂದ ಕಿಡಿಗೇಡಿಗಳು ಕಾಫಿ ತೋಟವನ್ನು ನಾಶ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದಲ್ಲಿ ನಡೆದಿದೆ.
ಎನ್ ಆರ್ ಪುರದ ನೇಮನಹಳ್ಳಿ ಗ್ರಾಮದಲ್ಲಿ ರಮೇಶ್ ಗೌಡ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಕತ್ತರಿಸಿ ನಾಶ ಮಾಡಲಾಗಿದೆ. ಜಮೀನು ವಿಚಾರವಾಗಿ ವೈಯುಕ್ತಿಕ ದ್ವೇಷಕ್ಕೆ ಈ ದುಷ್ಕೃತ್ಯ ನಡೆಸಲಾಗಿದೆ ಎಂದು ರಮೇಶ್ ಗೌಡ ಆರೋಪಿಸಿದ್ದಾರೆ.
“ಕಿಡಿಗೇಡಿಗಳು ಮಧ್ಯರಾತ್ರಿ ಜೀಪಿನ ಮೂಲಕ ತೋಟದ ಬೇಲಿ ಮುರಿದು ಒಳನುಗ್ಗಿದ್ದಾರೆ. ಲಾಂಗು, ಮಚ್ಚುಗಳನ್ನು ಬೀಸಿ ಬಾಳೆ ಹಾಗೂ ಕಾಫಿ ಗಿಡಗಳನ್ನು ಕೊಚ್ಚಿ ನಾಶ ಮಾಡಿದ್ದಾರೆ. ತೋಟದ ಪಕ್ಕದಲ್ಲಿದ್ದ ಮನೆಯ ಮೇಲೆ ಕಲ್ಲು ತೂರಾಟ ಮಾಡಿ, ಹಾನಿ ಎಸಗಿದ್ದಾರೆ” ಎಂದು ತೋಟದ ಮಾಲೀಕರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸಂಭ್ರಮದ ರಂಜಾನ್ ಆಚರಣೆ; ಸಹೋದರಂತೆ ಬದುಕಲು ಕರೆ
ತೋಟದ ಮಾಲೀಕರು ಬೆಳೆ ನಾಶದ ವಿಡಿಯೋ ಮಾಡಿಕೊಂಡಿದ್ದು, ಸಂದರ್ಶ ಕಾರಗದ್ದೆ, ಮನೋರಂಜನ್, ಸತ್ಯನಾರಾಯಣ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದಾರೆ.