ಬಳ್ಳಾರಿಯ ಕೂಡ್ಲಗಿಯಲ್ಲಿ ಕಾಂಗ್ರೆಸ್ನ ಎನ್ ಟಿ ಶ್ರೀನಿವಾಸ್, ಚಿತ್ರದುರ್ಗದ ಚಳ್ಳೆಕರೆಯಲ್ಲಿ ಕಾಂಗ್ರೆಸ್ನ ಟಿ ರಘುಮೂರ್ತಿ ಜಯದ ನಗೆ ಬೀರಿವುದು ಬಹುತೇಕ ನಿಶ್ಚಯವಾಗಿದೆ. ಹಾಗೆಯೇ ಹಾಸನ ನಗರದಲ್ಲಿ ಸ್ವರೂಪ್ ಗೌಡ ಗೆಲುವು ಕೂಡ ಖಚಿತವಾಗಿದೆ.
ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ನಲ್ಲಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ, ಚಿಂತಾಮಣಿಯಲ್ಲಿ ಕಾಂಗ್ರೆಸ್, ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್, ಹಳಿಯಾಳದಲ್ಲಿ ಬಿಜೆಪಿ, ಕನಕಪುರದಲ್ಲಿ ಡಿ ಕೆ ಶಿವಕುಮಾರ್, ನಾಗಮಂಗಲದಲ್ಲಿ ಕಾಂಗ್ರೆಸ್ ಎನ್ ಚಲುವರಾಯಸ್ವಾಮಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಮುನ್ನಡೆ ಸಾಧಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ ವಿ ಸೋಮಣ್ಣ ಭಾರಿ ಅಂತರದಲ್ಲಿ ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ ಪುಟ್ಟರಂಗಶೆಟ್ಟಿ ಗೆಲುವು ಖಚಿತವಾಗಿದೆ. ಚಿಂತಾಮಣಿಯಲ್ಲಿ ಎಂ ಸಿ ಸುಧಾಕರ್, ಧಾರವಾಡದಲ್ಲಿ ವಿನಯ ಕುಲಕರ್ಣಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಗೆಲುವು ಸಾಧಿಸಿದರೆ, ಸರ್ವಜ್ಞನಗರದಲ್ಲಿ ಕೆಜೆ ಜಾರ್ಜ್, ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್, ಮಲ್ಲೇಶ್ವರಂನಲ್ಲಿ ಅಶ್ವತ್ಥನಾರಾಯಣ್ ಗೆಲುವು ಸಾಧಿಸಿದ್ದಾರೆ.