ವಿಧವೆಯರಿಗೆ ಮಾಸಾಶನ ಮತ್ತು ವೃದ್ದಾಪ್ಯ ಪಿಂಚಣಿಯನ್ನು ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಬಿಡುಗಡೆ ಮಾಡುವಂತೆ ಹಾಗೂ ರಾಜ್ಯದಲ್ಲಿ ಕೈಗಾರಿಕೆಗಾಗಿ ರೈತರ ಜಮೀನುಗಳನ್ನು ಬಲವಂತವಾಗಿ ಭೂ ಸ್ವಾದೀನ ಪಡಿಸಿಕೊಂಡ ಭೂ ಸಂತ್ರಸ್ಥ ಕುಟುಂಬಗಳಿಗೆ ಅದ ಮೋಸವನ್ನು ಸರಿಪಡಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘ(ಕೆ.ಪಿ.ಆರ್.ಎಸ್) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಎನ್ ಶ್ರೀರಾಮ್ ಮಾತನಾಡಿ ರಾಜ್ಯದ ಅರ್ಹ ಕಡುಬಡವರಿಗೆ ನೀಡುತ್ತಿರುವ ಮಾಸಾಶನ ಮತ್ತು ವೃದ್ದಾಪ್ಯ ಪಿಂಚಣಿಯು ಕಳೆದ ಮೂರು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ ಅವರ ಆರೋಗ್ಯಕ್ಕಾಗಿ ಔಷಧಿಗಳು, ದಿನನಿತ್ಯದ ವೆಚ್ಚಗಳಿಗಾಗಿ ಹಣ ಇಲ್ಲದೇ ಕಡು ಬಡವರು ಹಲವು ಸಂಕಷ್ಠದಲ್ಲಿ ಜೀವನ ನಡೆಸುವಂತಾಗಿದೆ ಪ್ರತಿ ತಿಂಗಳು ನಿಗದಿತ ದಿನದಂತೆ ತಪ್ಪದೇ ಹಣವನ್ನು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು
ಮಾಸಾಶನ ಪಿಂಚಣಿ 800, ವೃದ್ದಾಪ್ಯ ಪಿಂಚಣಿ ಕೆಲವರಿಗೆ 1000, ಮತ್ತೆ ಕೆಲವರಿಗೆ 1200 ರೂ. ಬರುತ್ತಿದ್ದು, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಎಲ್ಲ ನಿರ್ಗತಿಕ ಪಿಂಚಣಿಯನ್ನು 3000 ರೂ.ಗಳಿಗೆ ಹೆಚ್ಚಿಸಲಾಗಿದೆ. ನಮ್ಮ ರಾಜ್ಯದಲ್ಲಿಯೂ ಇದೇ ರೀತಿ ಎಲ್ಲಾ ನಿರ್ಗತಿಕರ ಪಿಂಚಣಿಯನ್ನು 3000 ರೂ.ಗಳಿಗೆ ಹೆಚ್ಚಿಸಬೇಕು ಪ್ರತಿ ತಿಂಗಳು ನಿಗದಿತ ದಿನ ಬರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ ಬಳ್ಳಾರಿ ಜಿಲ್ಲೆಯ ಕುಡಿತೆನಿ ಪ್ರದೇಶದ 7 ಗ್ರಾಮಗಳ ಸುಮಾರು 5,000 ರೈತ ಕುಟುಂಬಗಳ 12,887 ಎಕರೆ ಜಮೀನುಗಳನ್ನು ಕೈಗಾರಿಕೆಗಳಿಗಾಗಿ, ಕಂಪನಿ ಮಾಲೀಕರೊಂದಿಗೆ ಶಾಮೀಲಾಗಿ, ಭೂ ಬೆಲೆ ನಿಗದಿಯಲ್ಲಿ ಅನುಸರಿಸಬೇಕಾದ ಮಾನದಂಡಗಳನ್ನು ಧಿಕ್ಕರಿಸಿ, ಮೋಸದ ಭೂ ಬೆಲೆ ನಿಗದಿಸಿ, ಬಲವಂತವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ ಅದೇ ಮಾದರಿಯಲ್ಲಿ ಬೆಂಗಳೂರಿಗೆ ಹತ್ತಿರದಲ್ಲಿರುವ ಬಿಡದಿಯಲ್ಲಿ ಟೌನ್ ಶಿಫ್ ಹೆಸರಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು,
ಮೋಸದ ಭೂ ಬೆಲೆಯೊಂದಿಗೆ, ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡು ಸುಮಾರು 16 ವರ್ಷಗಳಾದರೂ ಯಾವುದೇ ಕೈಗಾರಿಕೆಗಳು ಸ್ಥಾಪಿಸದೆ ಭೂ ಸಂತ್ರಸ್ಥ ಕುಟುಂಬಗಳಿಗೆ ಉದ್ಯೋಗ ನೀಡದೆ, ಪ್ರತಿ ಕುಟುಂಬಕ್ಕೆ ಲಕ್ಷಾಂತರ ರೂಗಳ ಉದ್ಯೋಗ ನಷ್ಟ ಉಂಟು ಮಾಡಿದ್ದಾರೆ ರೈತರು ಮತ್ತು ಸರ್ಕಾರದ ಬೊಕ್ಕಸಕ್ಕೆ ಉಂಟು ಮಾಡಲಾದ ಈ ಪ್ರಕರಣಗಳ ತನಿಖೆಗಾಗಿ ಮತ್ತು ರೈತರಿಗೆ ಮಾಡಲಾದ ಮೋಸ ಮತ್ತು ಅನ್ಯಾಯವನ್ನು ಸರಿ ಪಡಿಸುವಂತೆ ಹಾಗೂ ತಕ್ಷಣವೇ ಅಲ್ಲಿನ ಭೂ ಸಂತ್ರಸ್ಥರ ಜೊತೆ ಚರ್ಚಿಸಿ ನ್ಯಾಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..? ಕೋಲಾರ | ದಲಿತ ಚಳುವಳಿಯ ಹೆಜ್ಜೆ ಗುರುತುಗಳೇ ಯುವಕರಿಗೆ ಸ್ಪೂರ್ತಿಯಾಗಬೇಕು: ಎಂಎಲ್ಸಿ ಅನಿಲ್ ಕುಮಾರ್
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಉಪಾಧ್ಯಕ್ಷರಾದ ಗಂಗಮ್ಮ, ವೆಂಕಟಮ್ಮ, ಸಹ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಡಿ.ರಂಗನಾಥ್, ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್, ಮುಖಂಡರಾದ ಆಶಾ. ಚಿನ್ನಮ್ಮ, ಕೇಶವರಾವ್, ಮುನಿರತ್ನಮ್ಮ ಮುಂತಾದವರು ಇದ್ದರು.




