ಮೈಸೂರು | ಬಿಜೆಪಿ ಸರ್ಕಾರ ಧಾರ್ಮಿಕ ದ್ವೇಷ ಹರಡಿ ರಾಜಕೀಯ ಮಾಡುತ್ತಿದೆ: ಡಾ. ತಿಮ್ಮಯ್ಯ

Date:

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಧರ್ಮ ಧರ್ಮಗಳ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಮೂರು ಪರ್ಸೆಂಟ್ ಇರುವ ಜನ ಹಿಂದೂ ಹೆಸರಿನಲ್ಲಿ ದೇಶದ ಹಿಡಿತ ಹೊಂದಿದ್ದಾರೆ. ಬಹುಸಂಖ್ಯಾತರು ಈಗಲು ಹಿಂದೆ ಉಳಿದಿದ್ದು ಅಧಿಕಾರ ವಂಚಿತರಾಗಿದ್ದಾರೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೆ ಭಾರಿ ಬೆಲೆ ತೆತ್ತಬೇಕಾಗುತ್ತದೆ ಎಂದು ಎಂಎಲ್‌ಸಿ ಡಾ. ತಿಮ್ಮಯ್ಯ ಹೇಳಿದರು.

ಮೈಸೂರಿನ ಗುರು ರೆಸಿಡೆನ್ಸಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಹಿಂದ ದುಂಡುಮೇಜಿನ ಅಧಿವೇಶನದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಚಿಂತಕರಾದ ಅರವಿಂದ್ ಮಾಲಗತ್ತಿ ಮಾತನಾಡಿ, ದೇಶದಲ್ಲಿ ಎಂತಹ ವಿಷಮ ಪರಿಸ್ಥಿತಿ ನಿರ್ಮಾಣ ಆಗಿದೆ ಅಂದ್ರೆ, ಭೂಗತ ರಾಜಕಾರಣ ಎದುರಾಗಿದೆ. ಯಾರು ಸತ್ಯ ಹೇಳುತ್ತಾರೆ, ಯಾರು ಹೋರಾಟ ಮಾಡ್ತಾರೆ ಅವರ ಮೇಲೇ ಕೇಸ್ ಹಾಕೀಸೋದು ಇಡಿ, ಐಟಿ ಮೂಲಕ ಕಡಿವಾಣ ಹೇರೋದು. ಈಗಿನ ರಾಷ್ಟ್ರೀಯ ವ್ಯವಸ್ಥೆ ಜನತೆಯನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ. ಜನ ಈಗ ಜಾಗೃತರಾಗಿ ಇಂತಹ ಕೀಳು ಮಟ್ಟದ ರಾಜಕೀಯ ಮಾಡುವವರನ್ನು ಬದಲಾಯಿಸಬೇಕು ಎಂದರು.

ಮೋದಿ ಹೇಳ್ತಾರೆ 400 ಸೀಟ್ ಗೆಲ್ತೀವಿ ಅಂತ ರಾಜ್ಯದ ಬಿಜೆಪಿ ಮುಖಂಡ ಹೇಳ್ತಾರೆ 400 ಬಂದ್ರೆ ಸಂವಿಧಾನ ಬದಲಾಯಿಸುತ್ತೇವೆ ಅಂತ. ಅಂದರೆ, ಇವರಿಗೆ ಜನರ ಬದುಕು ಮುಖ್ಯ ಅಲ್ಲ ಸಂವಿಧಾನ ಬದಲಿಸೋದೆ ಇವರ ಗುರಿ. ಬಹು ಸಂಖ್ಯಾತ ವರ್ಗ ಆಳಿಸಿ ಕೊಳ್ಳಬೇಕು, ಮೇಲ್ಜಾತಿ ವರ್ಗ ಆಳಬೇಕು ಇದು ಮನುಸ್ಮೃತಿಯ ಕುತಂತ್ರ ಎಂದರು.

ಚಿಂತಕರಾದ ಕಾಳೇಗೌಡ ನಾಗವಾರ ಮಾತನಾಡಿ, ಯಾರ ಸ್ವಾತಂತ್ರ್ಯಕ್ಕೂ ದಕ್ಕೆ ಬರಬಾರದು. ಆದ್ರೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಅಪಮಾನ ಮಾಡುತ್ತಾ ಬಂದಿದೆ. ಬುದ್ದನ ಚಿಂತನೆ ಪ್ರಪಂಚದಲ್ಲೇ ಶ್ರೇಷ್ಠ.ರಾಜನ ಮಗ ಭಿಕ್ಷೆಗೆ ಬಂದ, ಕರ್ನಾಟಕದಲ್ಲಿ ಬಸವಣ್ಣ ಬಂದ್ರು ಇದು ನಿಜವಾದ ಶ್ರೇಷ್ಠತೆ. ಆತ್ಮದಲ್ಲಿ ನಾನು ಅನ್ನುವುದು ಇದ್ದರೆ ಶ್ರೇಷ್ಠ ಎನಿಸಿಕೊಳ್ಳಕಾರ, ಸಾಹಿತ್ಯ ಓದಿದ ಕಾರಣ ಸರ್ವ ಜನಾಂಗ ಶ್ರೇಷ್ಠ ಅನಿಸಿತು. ಪ್ರಕೃತಿ ಸಹಜ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಅವಕಾಶ ಸಿಗಲೇ ಇಲ್ಲ. ಕರ್ನಾಟಕ ಎಲ್ಲದಕ್ಕೂ ಮಾದರಿ ಆಗಿದೆ ಅಂದಿನ ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ ಇದ್ರು. ಮಹಿಳೆಯರು ಇದ್ರು ಮಹಿಳೆಯರಿಗೆ ಪ್ರಾಧಾನ್ಯತೆ ಇತ್ತು. ಆದ್ರೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಆಗ್ತಾ ಇದೆ. ಧರ್ಮ ಧರ್ಮ ಅನ್ನುವ ಭೂತ ಮೆಟ್ಟಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಣ್ಣ, ಮಾಜಿ ಶಾಸಕ ನಂಜುಂಡಸ್ವಾಮಿ, ಭಾರತಿ ಶಂಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಹರಿಹರ ಆನಂದ್ ಸ್ವಾಮಿ, ಅಹಿಂದ ಮುಖಂಡರಾದ ಶಿವರಾಮ್, ಜವರಪ್ಪ, ಮಾಜಿ ಪೊಲೀಸ್ ಅಧಿಕಾರಿ ಸುಹೈಲ್ ಅಹಮದ್  ಮರೂರು, ನಾಗೇಶ್, ಕಾಂತರಾಜು ಮುಂತಾದವರ ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ರೈತರ ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳು : ರೈತ ಸಂಘ ಪ್ರತಿಭಟನೆ

ಕಬ್ಬು ಪೂರೈಸಿದ ರೈತರಿಗೆ ಆರೇಳು ತಿಂಗಳಾದರೂ ಕಬ್ಬಿನ ಬಿಲ್‌ ಪಾವತಿಸದ ಸಕ್ಕರೆ...

ಮಂಡ್ಯ | ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ ‘ ಸೇರಿದ ಅಣ್ಣೂರು ಗ್ರಾಮ ಪಂಚಾಯಿತಿ

ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ...

ಗುಬ್ಬಿ | ಜೂನ್ 16 ರಂದು ಕಸಾಪ ಆಜೀವ ಸದಸ್ಯರ ಸಭೆ : ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಆಜೀವ ಸದಸ್ಯರ ಸಭೆಯನ್ನು ಇದೇ...

ರಾಯಚೂರು | ಹಣ ದುರ್ಬಳಕೆ ಪಿಡಿಒ ಅಮಾನತು

ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗೂರು ತಾಲ್ಲೂಕು ಕೋಠಾ ಗ್ರಾಮ...

Download Eedina App Android / iOS

X