ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಹಾಗೂ ಐ.ಟಿ. ಘಟಕಗಳ ಆಶ್ರಯದಲ್ಲಿ ಕಾರ್ಕಳದ ಕೆ.ಜಿ.ಟಿ.ಟಿ.ಐ. ವತಿಯಿಂದ ಜುಲೈ 13ರಿಂದ ಆಗಸ್ಟ್ 1ರವರೆಗೆ ಆಯೋಜಿಸಲಾಗಿದ್ದ 90 ಗಂಟೆಗಳ ‘ಕಂಪ್ಯೂಟರ್ ತರಬೇತಿ’ ಕಾರ್ಯಾಗಾರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಕಳದ ಕೆ.ಜಿ.ಟಿ.ಟಿ.ಐ.ಯ ಶ್ರೀಮತಿ ವಿಂದ್ಯಾ ಅವರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಪದವಿಗಳ ಜೊತೆಗೆ ಆಧುನಿಕ ಉದ್ಯೋಗ ಮಾರುಕಟ್ಟೆಗೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ. ಹಾಗೂ ಐ.ಟಿ. ಘಟಕದ ಸಂಚಾಲಕಿ ನಿಶ್ಚಿತ ಎಸ್. ಹೋಬಳಿದಾರ್ ಉಪಸ್ಥಿತರಿದ್ದರು.
ವಿಖ್ಯಾತ್ ಪ್ರಾರ್ಥನೆ ನೆರವೇರಿಸಿದರು. ದೇವಿಕ ಪದ್ಮಶಾಲಿ ಸ್ವಾಗತಿಸಿದರು. ತರಬೇತಿಯ ಫಲಾನುಭವಿಗಳಾದ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ರಶ್ಮಿತಾ ವಂದಿಸಿದರು. ಕಾರ್ಯಕ್ರಮವನ್ನು ಪ್ರಿಯಾ ನಿರೂಪಿಸಿದರು.






