ಊರಿನ ಮುಸ್ಲಿಂ ಸಮಾಜದ ಯುವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಚಂದಾ ಎತ್ತಿದ ಹಣವನ್ನು ಸಮಾಜದ ಕೆಲಸಕ್ಕೆ ಖರ್ಚು ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನದಾಫ್ ಕಮಿಟಿ ಅಧ್ಯಕ್ಷ ಶಫೀಕ್ ಬೆನ್ನಿ ಹೇಳಿದರು.
ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿ ಮುಸ್ಲಿಂ ಖಬರ ಸ್ಥಾನ(ದಫನ್ ಮಾಡುವ ಸ್ಥಳ)ದಲ್ಲಿ ಅಂಜುಮನ್ ಕಮಿಟಿ, ಟಿಪ್ಪು ಸುಲ್ತಾನ್ ಕಮಿಟಿ, ನದಾಫ್ ಕಮಿಟಿಯ ಕಾರ್ಯಕರ್ತರು ಒಗ್ಗೂಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ತಾಲೂಕ ಅಧ್ಯಕ್ಷ ರಸುಲ್ ಬೆನ್ನೂರ್ ಮಾತನಾಡಿ, “ಹುಣಸಗಿಯಲ್ಲಿ ಎಲ್ಲ ಮುಸ್ಲಿಂ ಯುವಕರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಚಂದಾ ವಸೂಲಿ ಮಾಡುವವರು ಇನ್ನು ಮುಂದೆ ಜಿಲ್ಲಾ ವಕ್ಫ್ ಬೋರ್ಡ್ನಿಂದ ಮುಸ್ಲಿಂ ಕಮಿಟಿ ರಚನೆ ಮಾಡಿ ಚಂದಾ ವಸೂಲಿ ಮಾಡಲಿ, ಸರ್ಕಾರಿ ವಕ್ಫ್ ಬೋರ್ಡಿನಲ್ಲಿ ಕಮಿಟಿಯಲ್ಲಿ ನೋಂದಾಯಿಸದೆ ಚಂದಾ ವಸೂಲಿ ಮಾಡುವುದು ಅಪರಾಧ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯ
ಅಂಜುಮನ್ ಕಮಿಟಿ, ಟಿಪ್ಪು ಸುಲ್ತಾನ್ ಕಮಿಟಿ, ನದಾಫ್ ಕಮಿಟಿಯ ಎಲ್ಲ ಯುವಕರು ಸೇರಿ ಜೆಸಿಬಿ ಸಹಾಯದಿಂದ ಜಾಲಿ ಗಿಡಗಳನ್ನು ತೆಗೆಸುವುದರ ಮೂಲಕ ಹುಣಸಗಿ ಪಟ್ಟಣದ ಖಬರ ಸ್ಥಾನವನ್ನು ಸ್ವಚ್ಛಗೊಳಿಸಿ ಮಂದಹಾಸ ಮೂಡಿಸಿದರು.
ಬಂದೇ ನವಾಜ್ ಯಾತ್ನೂರ್, ಸೂಫಿಸಾಬ್ ಡಿ ಸುರಪುರ್, ಖಾದರ್ ಬೆಕಿನಾಳ, ಸುಭನಬೋಜಿ, ಲಿಯಾಖತ್ ಅಲಿ ಬೆನ್ನೂರು, ಲಾಲ್ ಸಾಬ್ ನದಾಫ್, ನಬಿಲಾಲ್ ಬಡೆ ಕೂರುಸಿ, ಸದ್ದಾಂ ಕೂರುಸಿ, ಇಸಾಮುದ್ದೀನ್ ಮಂಡಿ ಪೀರ್, ಅನ್ವರ್ ಪಾಷಾ ಚೌದ್ರಿ, ದರ್ಶ್ ಮೊಹಮ್ಮದ್ ಕೊಡಗಾನೂರ, ವಾಷಿಂ ಯಾತ್ನೂರ್, ಉಮಾರ್ ಸಾಬ್ ಬೆನ್ನೂರು ಇದ್ದರು.