- ಚೆಕ್ಬೌನ್ಸ್ ಪ್ರಕರಣ ಎದುರಿಸುತ್ತಿರುವ ವೈ ಎಸ್ ವಿ ದತ್ತ
- ಏಪ್ರಿಲ್ 26 ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ
ಚೆಕ್ ಬೌನ್ಸ್ ಪ್ರಕರಣ ಆರೋಪ ಎದುರಿಸುತ್ತಿದ್ದ ಕಡೂರಿನ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ವೈ ಎಸ್ ವಿ ದತ್ತ ಬಂಧನ ಭೀತಿ ಎದುರಾಗಿದೆ.
ಚೆಕ್ ಬೌನ್ಸ್ ಪ್ರಕರಣ ಎದುರಿಸುತ್ತಿದ್ದ ದತ್ತ, ಕೋರ್ಟ್ ಗೆ ನೀಡಿದ ಭರವಸೆಯಂತೆ ಶನಿವಾರ (ಏ15) ಹಣ ಪಾವತಿಸಬೇಕಿತ್ತು.
ಇತ್ತ ಕೋರ್ಟ್ಗೆ ಗೈರು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ದತ್ತ ಕೋರಿದ್ದರು. ಆದರೆ ದತ್ತ ಅವರ ಮನವಿ ತಿರಸ್ಕರಿಸಿರುವ ಜನಪ್ರತಿನಿಧಿಗಳ ಕೋರ್ಟ್ ಹಾಜರಾತಿಯಿಂದ ವಿನಾಯಿತಿ ನೀಡಲು ಒಪ್ಪಿಗೆ ನೀಡಿಲ್ಲ.
ಬದಲಿಗೆ ಪ್ರಕರಣದ ಸಂಬಂಧ ಮಾಜಿ ಶಾಸಕರಿಗೆ ಎಚ್ಚರಿಕೆ ನೀಡಿರುವ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
ಸಿ.ಎಸ್. ಸೋಮೇಗೌಡ ಎಂಬುವರು ವೈ ಎಸ್ ವಿ ದತ್ತ ವಿರುದ್ಧ ಚೆಕ್ ಬೌನ್ಸ್ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಏಪ್ರಿಲ್ 26 ರಂದು ವೈಎಸ್ ವಿ ದತ್ತ ಅವರನ್ನು ಕೋರ್ಟ್ ಗೆ ಹಾಜರುಪಡಿಸಲು 42 ನೇ ಎಸಿಎಂಎಂ ಕೋರ್ಟ್ ಜಡ್ಜ್ ಜೆ. ಪ್ರೀತ್ ಆದೇಶಿಸಿದ್ದಾರೆ.