ಬೀದರ್ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಗವಾನ್ ಬುದ್ಧರ ಜಯಂತ್ಯೋತ್ಸವ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಜರುಗಿತು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭಗವಾನ್ ಬುದ್ಧರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚಾನೆ ಮಾಡಿದರು. ಆಣದೂರಿನ ಭಂತೆ ಜ್ಞಾನ ಸಾಗರ ಅವರು ತ್ರಿಶರಣ ಪಂಚಶೀಲ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಚುನಾವಣೆ ತಹಸೀಲ್ದಾರ ಮಲಶೆಟ್ಟಿ ಚಿದ್ರಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸುಭಾಷ ರತ್ನಾಕರ್ ಸೇರಿದಂತೆ ಸಮಾಜದ ಮುಖಂಡರಾದ ರಾಜಪ್ಪಾ ಗೂನ್ನಳ್ಳಿಕರ್, ಮಹೇಶ ಗೋರನಾಳಕರ್, ಶಿವಕುಮಾರ ನೀಲಿಕಟ್ಟಿ, ವಿನಯಕುಮಾರ ಮಾಳಗೆ, ವಿಜಯಕುಮಾರ ಸೋನಾರೆ, ಬಾಬು ಆಣದೂರೆ, ರಾಜಕುಮಾರ ಗಾದಗಿ, ಪ್ರಸನ್ನ ಡಾಂಗೆ, ಜಗದೀಶ್ವರ ಬಿರಾದರ, ಸಂದೀಪ್ ಕಾಂಟೆ, ಶರಣು ಫುಲೆ ಮತ್ತಿತರರು ಉಪಸ್ಥಿತರಿದ್ದರು.
ಕಮಲನಗರ ತಹಸೀಲ್ ಕಚೇರಿಯಲ್ಲಿ ಬುದ್ಧ ಜಯಂತಿ ಆಚರಣೆ :
ಕಮಲನಗರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಭಗವಾನ್ ಬುದ್ಧರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಗ್ರೇಡ್-2 ತಹಸೀಲ್ದಾರ್ ರಮೇಶ ಪೆದ್ದೆ ಅವರು ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ʼಗೌತಮ ಬುದ್ಧರ ಶಾಂತಿ, ಕರುಣೆ, ಅಹಿಂಸೆ ತತ್ವಗಳನ್ನು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆʼ ಎಂದರು.
ಈ ಸಂದರ್ಭದಲ್ಲಿ ತಹಸೀಲ್ ಕಚೇರಿಯ ಸಿಬ್ಬಂದಿ, ಸಮಾಜದ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ವಿಶ್ವ ಕಾರ್ಮಿಕ ದಿನ : ವಿಚಾರಗೋಷ್ಠಿ, ಕಾರ್ಮಿಕರಿಗೆ ಸನ್ಮಾನ




