ಚಿಕ್ಕಮಗಳೂರು | ಇಸ್ರೇಲ್ ನರಮೇಧ: ರಾಜ್ಯ ಸರ್ಕಾರದ ನಡೆಗೆ ಕರ್ನಾಟಕ ಜನಶಕ್ತಿ ಖಂಡನೆ

Date:

ಜಗತ್ತಿನಾದ್ಯಂತ ನಾಗರಿಕ ಸಮಾಜದಲ್ಲಿ ಇಂದು ಚರ್ಚೆಯಾಗುತ್ತಿರುವುದು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ, ನಾಗರಿಕರ ಮೇಲೆ ದಾಳಿ ಮಾಡಿರುವುದು ಅತ್ಯಂತ ಖಂಡನೀಯ. ಕೆಲವು ರಾಜ್ಯಗಳಲ್ಲಿ ಅಂಥ ಚರ್ಚೆಗಳಿಗೆ, ಪ್ರತಿಭಟನೆಗಳಿಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ ಎಂದು ಕರ್ನಾಟಕ ಜನಶಕ್ತಿ ಬೇಸರ ವ್ಯಕ್ತಪಡಿಸಿದೆ.

- Advertisement -

ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿಯವರಾದ ಗೌಸ್ ಮೋಹಿದ್ದಿನ್, ಇಸ್ರೇಲ್ ಸರ್ಕಾರ ಪ್ರತಿದಿನವು ನೂರಾರು ಪಾಲಸ್ತೀನೀಯರನ್ನು ಕೊಲ್ಲುತ್ತಿದೆ. ಅವರಲ್ಲಿ ಹೆಚ್ಚು ಜನ ಮಕ್ಕಳು. ತನ್ನ ಹಠಮಾರಿತನವನ್ನೇ ದೊಡ್ಡ ಗಂಟಲಿನಿಂದ ಸಮರ್ಥಿಸಿಕೊಳ್ಳುತ್ತಿರುವ ಆ ದೇಶ, ಕಳೆದ 75ವರ್ಷಗಳಿಂದ ತಾನು ಪಾಲಸ್ತೀನೀಯರ ಮೇಲೆ ನಡೆಸುತ್ತಲೇ ಇರುವ ದೌರ್ಜನ್ಯಗಳನ್ನು ಮರೆಮಾಚುತ್ತಿದೆ. ಇಂಥ ಅಮಾನವೀಯ ನಡವಳಿಕೆಗಳನ್ನು ಜಗತ್ತಿನ ಹಲವು ದೇಶಗಳ, ಜನ ಖಂಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ನಮ್ಮ ದೇಶದಲ್ಲಿಯೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕೆಲವು ರಾಜ್ಯಗಳಲ್ಲಿ ಅಂಥ ಚರ್ಚೆಗಳಿಗೆ ಪ್ರತಿಭಟನೆಗಳಿಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ. ಆಘಾತಕಾರಿ ವಿಷಯವೇನೆಂದರೆ, ಕರ್ನಾಟಕವೂ ಅಂಥ ರಾಜ್ಯವೆನ್ನುವುದು.

ರಾಜ್ಯದ ರಾಜಧಾನಿಯೂ ಒಳಗೊಂಡಂತೆ ಹಲವು ಪ್ರದೇಶಗಳಲ್ಲಿ ಈ ಸಮಸ್ಯೆಯ ಬಗ್ಗೆ ಬಹಿರಂಗವಾಗಿ ಚರ್ಚೆಸಲು, ಪ್ರತಿಭಟಿಸಲು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಸಭಾಂಗಣದ ಒಳಗಿನ ಕಾರ್ಯಕ್ರಮಗಳನ್ನು ನಡೆಯಲು ಬಿಡುತ್ತಿಲ್ಲ. ಇಂಥ ಮನೋಭಾವವನ್ನೇ ಸರ್ವಾಧಿಕಾರಿ ಧೋರಣೆ ಎಂದು ಕರೆಯಬೇಕಾಗಿದೆ.

ಕೆಲವೇ ತಿಂಗಳುಗಳ ಹಿಂದೆ ಇಲ್ಲಿನ ಜನ ತನ್ನ ಕೋಮುವಾದಿ ನೀತಿ ಜತೆಗೆ ಸರ್ವಾಧಿಕಾರಿ ಧೋರಣೆಗೂ ಕುಖ್ಯಾತವಾಗಿದ್ದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್‌ ಸರ್ಕಾರವನ್ನು ಅಸ್ತಿತ್ವಕ್ಕೆ ತಂದರು. ಪ್ರಜೆಗಳ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಕಾಂಗ್ರೆಸ್, ಅದೇ ಸರ್ವಾಧಿಕಾರಿ ಮನೋಭಾವವನ್ನು ಪ್ರದರ್ಶಿಸುತ್ತಿರುವುದು ಖಂಡನೀಯ.

ಕಾಂಗ್ರೆಸ್‌ ಕೇಂದ್ರ ನಾಯಕತ್ವ ಬಹಿರಂಗವಾಗಿಯೇ ಪಾಲಸ್ತೀನೀಯರ ಪರ ನಿಲುವು ತೆಗೆದುಕೊಂಡಿದೆ. ಆದರೂ, ಇಲ್ಲಿನ ಅದೇ ಪಕ್ಷದ ಸರ್ಕಾರ ತದ್ವಿರುದ್ಧವಾಗಿ ಬಿಜೆಪಿಗೆ ಹತ್ತಿರವಾಗಿ ನಿಂತಿದೆ. ತನ್ನದೇ ಪಕ್ಷದ ನೀತಿಗೆ ತಾವು ವಿರುದ್ಧವಾಗಿ ನಡೆಯುತ್ತಿರುವುದು ಅವರಿಗೆ ತಿಳಿಯುತ್ತಿಲ್ಲವೆ ಎಂದು ಅಸಮಾಧಾನ ಹೊರಹಾಕಿದರು

ಈ ವಿದ್ಯಮಾನಗಳು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳ ಗಮನಕ್ಕೆ ಬಂದೇ ಇರುತ್ತವೆ. ಆದರೂ, ಅವರು ಇಂಥ ನೀತಿಯನ್ನು, ಪೊಲೀಸ್ ರಾಜ್ಯವನ್ನು ಮುಂದುವರೆಯಲು ಬಿಟ್ಟಿರುವುದೇಕೆ? ಬೆಂಗಳೂರಿನಲ್ಲಿ ಈಗಾಗಲೇ ಎಲ್ಲಾ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿರುವ ಪೊಲೀಸರ ಈ ನಡವಳಿಕೆ ಖಂಡನೀಯ.

ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಸರ್ಕಾರ ಎಚ್ಚೇತ್ತುಕೊಂಡು ಜನಸಾಮಾನ್ಯರ ಪ್ರತಿಭಟನೆಯ ಹೋರಾಟಗಳಿಗೆ ಕಡಿವಾಣ ಹಾಕುವುದಾದರೆ, ಮುಂದೆ ಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನ ಕಳಿಸುತ್ತಾರೆಂದು ಎಚ್ಚರಿಕೆ ನೀಡಿದರು.

ನೂರಾರು ಪುಟ್ಟ ಮಕ್ಕಳ ಜೀವ ಉಳಿಯಬೇಕು ಸಾವಿರಾರು ಸಂಖ್ಯೆಯಲ್ಲಿ ಈ ದಾಳಿಯಿಂದ ಜನರು ಸಾಯುತ್ತಿದ್ದಾರೆ ಈ ಕೂಡಲೇ ಸರ್ಕಾರ ಎಚ್ಚೆತ್ತಿಕೊಳ್ಳಕೊಂಡು ಹೋಗುತ್ತಿರುವ ಪ್ರಾಣಗಳನ್ನು ಉಳಿಸಬೇಕೆಂದು ಯುವ ಮುಖಂಡರಾದ ಅಜ್ಮತ್ ಪಾಷ ಹೇಳಿದರು.

ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ. ಅಮಿತ್ ಷಾ ನಿರ್ದೇಶನ ಪಾಲಿಸುತ್ತಿರುವ ಗೃಹ ಸಚಿವಾಲಯ. ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರಾ? ಸಿದ್ದರಾಮಯ್ಯನವರಿಗೆ ಇದು ಕಿವಿಮಾತು ಎಂದು ಸುದ್ದಿಗೋಷ್ಠಿಯಲ್ಲಿ ಗೌಸ್ ಮೊಹಿದ್ದೀನ್ ಕಿಡಿಯಾದರು.

ಸುದ್ದಿ ಗೋಷ್ಠಿಯಲ್ಲಿ  ಗಣೇಶ್, ಮೋಹನ್, ಅಜ್ಮತ್ ಪಾಷ, ಹಸನಬ್ಬ, ಗೋವಿಂದೇಗೌಡ, ಪುಟ್ಟಸ್ವಾಮಿ ಇನ್ನಿತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ: ಶಾಸಕ ಡಾ.ಕೊತ್ತೂರು ಜಿ ಮಂಜುನಾಥ್ ಗರಂ

ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಹಾಗೂ ಶಿಷ್ಟಾಚಾರ ಪಾಲಿಸದೆ ಏಕಾಏಕಿ ಕಾಮಗಾರಿಗಳನ್ನು...

ಕೊಲ್ಹಾರ | ಶಾಸಕರಿಲ್ಲದ ಪ್ರಜಾಸೇವಾ ಆಂದೋಲನ: ಅಹವಾಲು ಹೊತ್ತುಬಂದವರಿಗೆ ನಿರಾಸೆ, ಅಧಿಕಾರಿಗಳಿಂದ ಪರಿಹಾರದ ಭರವಸೆ

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶಾಸಕರಿಲ್ಲದೆ ಪ್ರಜಾಸೇವಾ ಆಂದೋಲನ ನಡೆಯಿತು. ಇದರಿಂದಾಗಿ...

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ರಾಯಚೂರು | ಕೆ. ಶಾಂತಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಸಂತಸದ ವಿಚಾರ: ಬೋಸರಾಜು

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅವರು ಜವಾಬ್ದಾರಿ...