ದಕ್ಷಿಣ ಕನ್ನಡ | ಶಾಲೆಗಳ ಪುನರಾರಂಭ; ಲೇಖನಿ ಸಾಮಗ್ರಿ ಕೊಂಡುಕೊಳ್ಳಲು ನಿರಾಸಕ್ತಿ

Date:

ಪ್ರಸ್ತುತ ವಾರದಲ್ಲಿ ಶಾಲೆಗಳು ಪುನರಾರಂಭಗೊಂಡಿದ್ದರೂ ಪುಸ್ತಕಗಳು, ಲೇಖನಿ ಸಾಮಗ್ರಿ(ಸ್ಟೇಷನರಿ)ಗಳು ಮತ್ತು ಸಮವಸ್ತ್ರಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಈ ವರ್ಷ ಹೆಚ್ಚಿನ ಜನಸಂದಣಿ ಕಾಣುತ್ತಿಲ್ಲ. ಮಂಗಳೂರು ಭಾಗದಲ್ಲಿ ನೀರಿನ ಕೊರತೆಯಿಂದಾಗಿ ಈ ವಾರ ಶಾಲೆಗಳನ್ನು ಪುನರಾರಂಭಿಸಲು ಸಂದಿಗ್ದ ಪರಿಸ್ಥಿತಿ ಉಂಟಾಗಿದ್ದು, ಹೊಸ ಶೈಕ್ಷಣಿಕ ವರ್ಷಕ್ಕೆ ಜೂನ್ 1 ರಿಂದ ಶಾಲೆಗಳು ತೆರೆಯಲಿವೆ ಎಂದು ಅಂಗಡಿಯವರು ತಿಳಿಸಿದ್ದಾರೆ.

“ನೀರಿನ ಸಮಸ್ಯೆಯಿಂದಾಗಿ ಈ ವಾರ ಶಾಲೆಗಳನ್ನು ಪುನರಾರಂಭಿಸುವ ಅನಿಶ್ಚಿತತೆ ಮೊದಲ ಕಾರಣವಾಗಿರಬಹುದು. ಹಾಗಾಗಿ ಜೂನ್‌ 1ರಿಂದ ಶಾಲೆ ಆರಂಭವಾಗಬಹುದು. ಈ ಹಿನ್ನೆಲೆಯಲ್ಲಿ ಪೋಷಕರು ಸ್ಟೇಷನರಿ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿರುವದು ಕಂಡುಬರುತ್ತಿಲ್ಲ. ಎರಡನೆಯದಾಗಿ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಸ್ಟೇಷನರಿ ವಸ್ತುಗಳು ಮತ್ತು ನೋಟ್‌ಬುಕ್‌ಗಳನ್ನು ಒದಗಿಸುವುದರಿಂದ ಅವುಗಳ ಮಾರಾಟವು ಕಡಿಮೆಯಾಗಿದೆ. ಮೂರನೆಯದಾಗಿ, ಸ್ಟೇಷನರಿ ವಸ್ತುಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಪೋಷಕರು ಹಿಂಜರಿಯುತ್ಎಂತಿದ್ದುದಾರೆ” ಎಂದು ಸ್ಟೇಷನರಿ ಅಂಗಡಿ ಮಾಲಿಕರು ತಿಳಿಸಿದ್ದಾರೆ.

“ಕಳೆದ ವರ್ಷಕ್ಕೆ ಹೋಲಿಸಿದರೆ ಕಾಗದದ ವಸ್ತುಗಳ ಬೆಲೆ ಶೇ.50ರಷ್ಟು ಹೆಚ್ಚಾಗಿದೆ. ಬರವಣಿಗೆ ಉಪಕರಣಗಳ ಬೆಲೆಗಳೂ ಹಾಗೆಯೇ ಇವೆ. ಸ್ಟೇಷನರಿ ವಸ್ತುಗಳ ಮೇಲೆ ವಿಧಿಸಿರುವ ಶೇ.18ರಷ್ಟು ಜಿಎಸ್‌ಟಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಪರಿಹಾರವನ್ನು ಕಂಡುಹಿಡಿಯಬೇಕು. ಕೆಲವು ರಾಜ್ಯಗಳು ಈಗಾಗಲೇ ಅವುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಸಹಾಯವಾಗುತ್ತದೆ” ಎಂದು ಮಾಲೀಕರು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಶಿಕ್ಷಣ ಕ್ಷೇತ್ರದ ಬದಲಾವಣೆಗೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿ: ನಿರಂಜನಾರಾಧ್ಯ ವಿ ಪಿ

“ನೋಟ್ ಬುಕ್‌ಗಳ ಬೆಲೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಬೆಲೆ ಏರಿಕೆಯಿಂದಾಗಿ ಪೆನ್ನುಗಳು ಮತ್ತು ಸಂಬಂಧಿತ ಪರಿಕರಗಳ ಬೆಲೆಯೂ ಶೇ.10 ರಷ್ಟು ಹೆಚ್ಚಾಗಿದೆ. ಈ ವರ್ಷ ಚುನಾವಣಾ ಫಲಿತಾಂಶದ ನಂತರವೇ ಮಾರಾಟ ಪ್ರಾರಂಭವಾಯಿತು. ಆದರೂ, ಕೊಂಡುಕೊಳ್ಳುವವರು ಮುಗಿಬೀಳುತ್ತಿಲ್ಲ” ಎಂದು ಕಾರ್ತಿಕ್ ಸ್ಕೂಲ್ ಬುಕ್ಸ್ ಅಂಡ್ ಸ್ಟೇಷನರೀಸ್‌ ಮಾಲೀಕ ಹೇಳಿದ್ದಾರೆ.

ನೋಟ್ ಬುಕ್ ಬೆಲೆ ಏರಿಕೆ

ನೋಟ್‌ಬುಕ್‌ಗಳು, ಪೆನ್ನುಗಳು ಮತ್ತು ಇತರ ಲೇಖನಿ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದರೂ, ಛತ್ರಿಗಳನ್ನು ಹೊರತುಪಡಿಸಿ ಸಮವಸ್ತ್ರ, ಶಾಲಾ ಬ್ಯಾಗ್ ಮತ್ತು ಶೂಗಳ ಬೆಲೆ ಸ್ಥಿರವಾಗಿದೆ.‌ ಛತ್ರಿಗಳ ಬೆಲೆ ಶೇ. 10ರಿಂದ 15 ರಷ್ಟು ಏರಿಕೆ ಕಂಡಿದ್ದು, ಉಳಿದ ವಸ್ತುಗಳ ಬೆಲೆ ಹಿಂದಿನ ವರ್ಷದಂತೆಯೇ ಇದೆ ಎಂದು ನಗರದ ಕೇಂದ್ರ ಮಾರುಕಟ್ಟೆಯಲ್ಲಿರುವ ಸೌರಾಷ್ಟ್ರ ಕ್ಲಾತ್ ಸ್ಟೋರ್ಸ್‌ ಮಾಲೀಕ ತಿಳಿಸಿದ್ದಾರೆ.

“ನೋಟ್‌ಬುಕ್‌ಗಳನ್ನು ಒದಗಿಸುವ ಶಾಲೆಗಳು ಪ್ರಸ್ತುತ ವರ್ಷದಲ್ಲಿ ಸ್ಟೇಷನರೀಸ್‌ ಬೆಲೆಯನ್ನು ₹700ರಿಂದ ₹1,000ದವರೆಗೆ ಹೆಚ್ಚಿಸಿವೆ” ಎಂದು ಕೆಲವು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ; ಬೇಕಿದೆ ಮಾರುಕಟ್ಟೆ ಸೌಲಭ್ಯ

ಸೀತಾಫಲ ಹಣ್ಣು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಸ್ವಾದಿಷ್ಟ, ರೋಗ...

ಕಾವೇರಿ ವಿವಾದ | ತಮಿಳು ನಟ ಸಿದ್ಧಾರ್ಥ್‌ ಕ್ಷಮೆ ಕೇಳಿದ ನಟ ಶಿವರಾಜ್‌ಕುಮಾರ್

ತಮಿಳು ನಟ ಸಿದ್ಧಾರ್ಥ್‌ ಅವರ ಸುದ್ದಿಗೋಷ್ಠಿಗೆ ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ...

ಕರ್ನಾಟಕ ಬಂದ್ | ದಾವಣಗೆರೆ: ತಮಿಳುನಾಡಿ ನೀರು ಹರಿಸದಂತೆ ಒತ್ತಾಯಿಸಿ ಕರವೇ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಕಾವೇರಿ ನಿರ್ವಹಣಾ...

ಹಾವೇರಿ | ಕಾವೇರಿ ನೀರು ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಲಿ

ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯ ವಿವಿಧ ಸಂಘಟನೆಗಳ...