ಮೈಸೂರು | ಕಬಿನಿ ಜಲಾಶಯ ಹಿನ್ನೀರಿನಲ್ಲಿರುವ ಅಕ್ರಮ ರೆಸಾರ್ಟ್ ತೆರವುಗೊಳಿಸುವಂತೆ ಸಂಘಟನೆಗಳ ಒತ್ತಾಯ

Date:

ಮೈಸೂರು ಹೃದಯವಂತ ಕನ್ನಡಿಗರ ಬಳಗ, ರೈತ ಪರ ಸಂಘಟನೆ ಮತ್ತು ಕರ್ನಾಟಕ ಜೈ ಭೀಮ್ ಸೇನೆಯ ವತಿಯಿಂದ, ಕಬಿನಿ ಜಲಾಶಯದ ಹಿನ್ನೀರಿನಲ್ಲಿರುವ ಅಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಸಂಘಟನೆಗಳ ಮುಖಂಡರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

- Advertisement -

ಕನ್ನಡಪರ ಹೋರಾಟಗಾರರಾದ ಡಿಪಿಕೆ ಪರಮೇಶ್ ಮಾತನಾಡಿ, ಕಬಿನಿ ಜಲಾಶಯದ ಎಡ ಬಲ ದಂಡೆಯಲ್ಲಿರುವ ಭೂಮಿಯನ್ನ ಅಕ್ರಮವಾಗಿ ಆಕ್ರಮಿಸಿ, ರೆಸಾರ್ಟ್ ನಿರ್ಮಿಸಿಕೊಂಡು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಇಂತಹದ್ದೆಲ್ಲ ಅಧಿಕಾರಿಗಳ ಗಮನಕ್ಕೆ ಇಲ್ಲವಾ?. ಇಂತವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳದೆ, ರಾಜಕಾರಣಿಗಳ ಗುಲಾಮರಂತೆ ವರ್ತಿಸುವುದು ಎಷ್ಟು ಸರಿ?. ಕಬಿನಿ ಉಳಿಸಿಕೊಳ್ಳಬೇಕಾದ್ದು ಎಲ್ಲರ ಹೊಣೆ, ಅಧಿಕಾರಿಗಳ ಕರ್ತವ್ಯವು ಹೌದು. ಇದನ್ನೆಲ್ಲಾ ಮರೆತಂತೆ ನಡೆಯುವುದು ಸರಿಯಲ್ಲ. ಇದರಿಂದಾಗಿಯೇ, ಮಾನವ-ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಪ್ರಾಣಿಗಳ ಆವಾಸ ಸ್ಥಳ ಒತ್ತಲಿಸಿದಂತೆ ಅವುಗಳಿಗೆ ಜಾಗ ಇಲ್ಲದಾಗಿ ಗ್ರಾಮಗಳತ್ತ ಮುಖ ಮಾಡಿವೆ. ಇದಕ್ಕೆಲ್ಲ ಕಾರಣ ಯಾರು ದುರಾಸೆಯ ಮನುಷ್ಯ. ಇದನ್ನ ತಡೆಯಬೇಕಾದವರು ಯಾರು? ಅಧಿಕಾರಿಗಳು. ಇದುವರೆಗೆ ಅಂತಹ ದಿಟ್ಟ ಕೆಲಸ ಮಾಡಿಲ್ಲ, ಈಗಲಾದರೂ ಕ್ರಮಕ್ಕೆ ಮುಂದಾಗಿ ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಸಂಬಂಧ ಎಚ್‍ ಡಿ ಕೋಟೆ ತಾಲ್ಲೂಕಿನ ತಹಸಿಲ್ದಾರ್ ಶ್ರೀನಿವಾಸ್ ರವರಿಗೆ ಮನವಿ ಮಾಡಲಾಗಿದೆ. ಅಲ್ಲದೆ ಕಳೆದ ವಾರದ ಹಿಂದೆ ‘ಕಬಿನಿ ಉಳಿಸಿ, ಅರಣ್ಯ ರಕ್ಷಿಸಿ’ ಅನಿರ್ಧಿಷ್ಟಾವಧಿ ಧರಣಿ ಕುಳಿತಾಗ ಜಿಲ್ಲಾಧಿಕಾರಿಗಳು ಸಮಯ ಕೋರಿದರು, ಅದರಂತೆ, ತಾತ್ಕಾಲಿಕವಾಗಿ ಹೋರಾಟ ವಾಪಸ್ ಪಡೆದಿದ್ದೀವಿ. ಜೊತೆಗೆ ಎಚ್ಚರಿಕೆಯನ್ನು ನೀಡಿದ್ದೇವೆ. ದುರಂತವೇನೆಂದರೆ ನಮ್ಮ ಮನವಿಗಳಿಗೆ ಎಲ್ಲಾ ಇಲಾಖೆಗಳಿಗೂ ಬರೀ ಪತ್ರ ರವಾನೆ ಮೂಲಕ ಸಂತೃಪ್ತಿ ಪಡಿಸುತಿದ್ದಾರೆ ವಿನಃ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದೇ ರೀತಿ ತಾತ್ಸಾರ ಮಾಡುತ್ತಾ, ಕಾಲಹರಣ ಮಾಡಿದರೆ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ನಾವುಗಳು ಸಹ ಅಧಿಕಾರಿಗಳು ಹೇಳಿದಂತೆಲ್ಲ ಕೇಳಿದ್ದೇವೆ. ಪದೇ ಪದೇ ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ರಾಜಕಾರಣಿಗಳ ಮುಲಾಜು ನಮಗಿಲ್ಲ, ಹೋರಾಟಕ್ಕೆ ಇಳಿದರೆ ಮಂಡಿಯೂರಿಸುವುದು ಗೊತ್ತಿದೆ ಎಂದು ಕಿಡಿಕಾರಿದರು.

ಇಂತಹ ಮೃದುಧೋರಣೆ ಅನುಸರಿಸುತ್ತಿರುವುದು ನೋಡಿದರೆ, ರಾಜಕಾರಣಿಗಳಿಗೆ ಹೆದರಿ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ. ಹಾಗಾದರೆ, ಜನಸಾಮಾನ್ಯರು ಕಟ್ಟುವ ತೆರಿಗೆ ಪಡೆಯಲು ನಿಮಗೆ ಯೋಗ್ಯತೆ ಇದಿಯಾ?. ನಮ್ಮ ತೆರಿಗೆಯಿಂದ ಸರ್ಕಾರಿ ಅಧಿಕಾರಿಗಳು ಸಂಬಳ ಪಡೆಯುತ್ತಿರುವುದು. ನಮ್ಮ ಕಷ್ಟಕ್ಕೆ, ನಮ್ಮ ನೋವಿಗೆ ಸ್ಪಂದನೆ ಇಲ್ಲ ಎಂದರೆ ಇನ್ನೇನಿಕೆ. ನೊಂದವರಿಗೆ ನ್ಯಾಯ ಕೊಡಿಸುವುದು, ಸರ್ಕಾರಿ ಸಂಪತ್ತು ಸಂರಕ್ಷಣೆ ಮಾಡುವುದು ನಿಮ್ಮ ಆದ್ಯ ಕರ್ತವ್ಯ. ಆದರೇ, ನೀವುಗಳು ಯಾರ ಸೇವೆ ಮಾಡುತ್ತಿದ್ದೀರಿ?. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಏನಾಗಬಹುದು, ಇದರ ಬಗ್ಗೆ ಯಾಕೆ ನಿಮಗೆ ಯೋಚನೆ ಇಲ್ಲ ಎಂದು ಪ್ರಶ್ನಿಸಿದರು.

ವಕೀಲರಾದ ರವಿಕುಮಾರ್ ಮಾತನಾಡಿ, ರಾಜಕೀಯ ಒತ್ತಡಗಳಿಂದ ಜಡ್ಡುಗಟ್ಟಿರುವ ಮೈ ಕೊಡವಿ, ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಉತ್ತಮ ಕೆಲಸ ಮಾಡಲು ಮುಂದಾಗಬೇಕು, ದಾಖಲೆಗಳ ಮೂಲಕ ಮನವಿ ಮಾಡುತ್ತಾ ಇದ್ದೇವೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗೆ ಮುಂದುವರೆದರೆ ಕಬಿನಿ, ಅರಣ್ಯ ಉಳಿಸಲು ಸಾಧ್ಯವೇ?. ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುವುದನ್ನು ಮೊದಲು ಬಿಡಿ, ಅಕ್ರಮವಾಗಿ ಕಟ್ಟಿರುವ ರೆಸಾರ್ಟ್ ಗಳ ದಾಖಲೆ ಪರಿಶೀಲನೆ ಮಾಡಿ ತೆರವುಗೊಳಿಸಿ. ಭೂ ಕಬಳಿಕೆ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಫೆಬ್ರವರಿ. 3ರಂದು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದು, ಪರಿಶೀಲನೆ ನಡೆಸಿ, ಯಾವುದೇ ಮುಲಾಜಿಗೆ ಒಳಗಾಗದೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.

ಈ ಸುದ್ದಿ ಓದಿದ್ದೀರಾ? ಹುಣಸೂರು | ಪರಿಸರ ಉಳಿಸುವ ರೈತರನ್ನು; ಪರಿಸರ ಹಾಳು ಮಾಡುವಂತೆ ಮಾಡಿದ್ದಾರೆ: ಹೊಸೂರು ಕುಮಾರ್

ಮನವಿ ನೀಡುವಾಗ ಕರ್ನಾಟಕ ಭೀಮಸೇನೆಯ ಎಂ. ಮಂಜುನಾಥ, ಮನೋಜ್ ಕುಮಾರ್, ಕಬಿನಿ ಸುರೇಶ್, ಸೋಮೇಶ್, ಶಿವ, ಮಾದೇವಪ್ಪ , ಸೋಮು , ಮಂಜುನಾಥ್, ಕೃಷ್ಣೆಗೌಡ, ಶಿವಸ್ವಾಮಿ, ಜಗದೀಶ್, ಸುಮಂತ್, ಸತೀಶ್ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ

ಜಿಡಾಗಾ ಮುಗಳಖೋಡ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರ...

ಉಡುಪಿ | ಕಸ್ತೂರಿ ರಂಗನ್ ವರದಿ ಅಧಿಸೂಚನೆ ತಕ್ಷಣ ಹಿಂಪಡೆಯಿರಿ: ಕಾಂಗ್ರೆಸ್ ಆಗ್ರಹ

ಪಶ್ಚಿಮ ಘಟ್ಟ ಹಾಗೂ ಅದರ ತಪ್ಪಲು ಪ್ರದೇಶಗಳ ನಿವಾಸಿಗಳಿಗೆ ಮಾರಕವಾಗಿರುವ ಕಸ್ತೂರಿ...

ಕಲಬುರಗಿ | ₹16 ಸಾವಿರ ಕೋಟಿ ವೆಚ್ಚಕ್ಕೆ ಲೆಕ್ಕವೆಲ್ಲಿ? 371(ಜೆ) ಕುರಿತು ಶ್ವೇತಪತ್ರಕ್ಕೆ ಸಿಪಿಐ,ಎಐಕೆಎಸ್ ಪಟ್ಟು

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ 371(ಜೆ) ಅಡಿಯಲ್ಲಿ ಇದುವರೆಗೆ ಖರ್ಚು ಮಾಡಿರುವ ₹16...

ಉಡುಪಿ | UAPA, NSA ಕಾಯ್ದೆಗಳು ಸಂವಿಧಾನಿಕ ಹಕ್ಕುಗಳ ದಮನಕ್ಕೆ ಅಸ್ತ್ರವಾಗುತ್ತಿವೆ : ಪ್ರೊ. ಫಣಿರಾಜ್

ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನವಾಗಿ ಆರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ,...