ನಗರದ ರಾಂಪೂರದಲ್ಲಿರುವ ವಿದ್ಯಾಜ್ಯೋತಿ ಶಾಲೆ ನವೀಕರಣ ಸಂಬಂಧ ₹15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಡಿಡಿಪಿಐ (ಉಪ ನಿರ್ದೇಶಕರ ಸಾರ್ವಜನಿಕ ಶಿಕ್ಷಣ ಇಲಾಖೆ) ಕಚೇರಿಯ ಎಫ್ಡಿಸಿ (ಪ್ರಥಮ ದರ್ಜೆ ಸಹಾಯಕ) ಮಾಬಳೇಶ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ನಡೆದಿದೆ.
ಶಾಲೆಯ ನವೀಕರಣ ಕಡತವನ್ನು ಅನುಮೋದಿಸಲು ಮಾಬಳೇಶ ಅವರು ಶಾಲೆಯ ಮುಖ್ಯಸ್ಥ ಸಿದ್ದಣ್ಣ ಅವರಿಂದ ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಸಿದ್ದಣ್ಣ ಅವರು ಮನವಿ ಮಾಡಿಕೊಂಡರೂ, ಹಣ ನೀಡಿದರೆ ಮಾತ್ರ ನವೀಕರಣ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಪಟ್ಟು ಹಿಡಿದಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಾಹನ ಡಿಕ್ಕಿ: ಕುರಿಗಾಯಿ ಸೇರಿ ಮೂರು ಕುರಿಗಳು ಸಾವು
ಸಿದ್ದಣ್ಣ ಎಂಬುವವರ ದೂರಿನ ಮೇರೆಗೆ ಲೋಕಾಯುಕ್ತ ಎಸ್ ಪಿ ಸತೀಶ ಸಿರಗುಪ್ಪ ನೇತೃತ್ವದಲ್ಲಿ ಧಾಳಿ ನಡೆಸಿದ್ದು 15 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳು ಮಾಬಳೇಶರನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.




