ಹಳೆ ಮೈಸೂರು ಭಾಗದ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಕೊಡಗು – ಐದು ಜಿಲ್ಲೆಗಳಿಂದ ಆರು ಯುವ ನಾಯಕರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ. ಕುತೂಹಲಕಾರಿ ಎಂದರೆ, ಅವರ ಪೋಷಕರು ಅಸೆಂಬ್ಲಿ ಸದಸ್ಯರಾಗಿದ್ದರು.
ದರ್ಶನ್ (ನಂಜನಗೂಡು) ಅವರ ತಂದೆ ಧ್ರುವನಾರಾಯಣ ಆರ್ ಮಾಜಿ ಶಾಸಕ ಮತ್ತು ಸಂಸದರಾಗಿದ್ದರು. ಮಂತರ್ ಗೌಡ (ಮಡಿಕೇರಿ) ಅವರ ತಂದೆ ಎ ಮಂಜು ಮಾಜಿ ಸಚಿವರು ಹಾಗೂ ಈಗ ಅರಕಲಗೂಡಿನ ಜೆಡಿಎಸ್ ಶಾಸಕರಾಗಿದ್ದಾರೆ. ಎಚ್.ಎಂ ಗಣೇಶ್ ಪ್ರಸಾದ್ (ಗುಂಡ್ಲುಪೇಟೆ) ಅವರ ತಂದೆ ಎಚ್.ಎಸ್ ಮಹಾದೇವ ಪ್ರಸಾದ್ ಐದು ಬಾರಿ ಶಾಸಕ ಮತ್ತು ತಾಯಿ ಗೀತಾ ಮಹಾದೇವ ಪ್ರಸಾದ್ ಕೂಡ ಒಮ್ಮೆ ಶಾಸಕರಾಗಿದ್ದರು. ಈಗ ಮೂವರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕುಮಾರಸ್ವಾಮಿ ಅವರೇ ಪಕ್ಷ ವಿಸರ್ಜನೆ ಯಾವಾಗ? ಕಾಲೆಳೆದ ನೆಟ್ಟಿಗರು
ಎಚ್.ಡಿ ಹರೀಶ್ ಗೌಡ (ಹುಣಸೂರು) ಅವರ ತಂದೆ ಜಿ.ಟಿ ದೇವೇಗೌಡ (ಚಾಮುಂಡೇಶ್ವರಿ) ಹಾಲಿ ಶಾಸಕ. ಸ್ವರೂಪ್ ಪ್ರಕಾಶ್ (ಹಾಸನ) ಮಾಜಿ ಶಾಸಕ ಎಚ್.ಎಸ್ ಪ್ರಕಾಶ್ ಅವರ ಪುತ್ರ. ಇಬ್ಬರೂ ಜೆಡಿಎಸ್ನಿಂದ ಆಯ್ಕೆಯಾಗಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯ (ಮೇಲುಕೋಟೆ), ಸರ್ವೋದಯ ಕರ್ನಾಟಕ ಪಕ್ಷವನ್ನು ಸ್ಥಾಪಿಸಿದ ಜನಪ್ರಿಯ ರೈತ ನಾಯಕ, ಮಾಜಿ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರ ಪುತ್ರ. ದರ್ಶನ್ ಪುಟ್ಟಣ್ಣಯ್ಯ ಅವರು ಈ ಬಾರಿ ಸರ್ವೋದಯ ಪಕ್ಷದಿಂದ ಗೆಲವು ಸಾಧಿಸಿದ್ದಾರೆ.