ಕೂಲಿ ಕಾರ್ಮಿಕರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆಯ ವತಿಯಿಂದ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಶಾಸಕಿ ಲತಾ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
“ಹರಪನಹಳ್ಳಿ ಭಾಗದ ನಾರಾಯಣಪುರ, ಹಳ್ಳಿಕೇರಿ, ಹಲುಗಾವಲು, ನಂದ್ಯಾಲ್ ಗೌರಿಹಳ್ಳಿ ತೊಗರಿಕಟ್ಟೆ, ಕುಣಿಮಾದೆಹಳ್ಳಿ ಗ್ರಾಮಗಳ ಭಾಗದ ಜನರಿಗೆ ಸ್ವಂತ ಜಾಗ, ಮನೆಯಿಲ್ಲದೆ ಬೀದಿಯಲ್ಲಿ ಬದುಕುವಂಥ ಪರಿಸ್ಥಿತಿ ಎದುರಾಗಿದೆ. ಕೂಲಿ ಹಣದಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುಗುತ್ತಿಲ್ಲ” ಎಂದು ಚರ್ಚಿಸಿದರು ..
“ದಾವಣಗೆರೆ ಜಿಲ್ಲಾಧಿಕಾರಿಗೆ ಹಲವು ಬಾರಿ ಗಮನಕ್ಕೆ ತಂದು, ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ʼಕೈಗಾರಿಕೆ ಆರಂಭಿಸಿ, ಇಲ್ಲವೇ ಭೂಮಿ ಬಿಡಿʼ; ಸಂತ್ರಸ್ತ ರೈತರ ಹೋರಾಟ
“ಶಿಂಗ್ರಹಳ್ಳಿಯಲ್ಲಿ ಸರ್ವೆ ನಂ 46/ಎ, ನಾರಾಯಣಪುರ 437, ಹಳ್ಳಿಕೇರಿ ಭಾಗದಲ್ಲಿ ಸರ್ಕಾರಿ ಜಮೀನುಗಳಿದ್ದು, ಈ ಜಮೀನುಗಳನ್ನು ಕೂಲಿಕಾರರಿಗೆ ನೀಡಬೇಕು” ಎಂದು ಮನವಿ ಮಾಡಿದರು..
ಈ ಸಂದರ್ಭದಲ್ಲಿ ಗ್ರಾಕೂಸ ತಾಲೂಕು ಸಂಚಾಲಕಿ ಭಾಗ್ಯ, ನೀಲಮ್ಮ, ಗಂಗಾಧರ, ಚೌಡಪ್ಪ, ಅಂಜಿನಪ್ಪ ಸೇರಿದಂತೆ ಇತರರು ಇದ್ದರು.