- ದೇವೇಗೌಡರ ಅಂಗಳಕ್ಕೆ ಬಿದ್ದ ಹಾಸನ ಟಿಕೆಟ್ ಗೊಂದಲ
- ವರಿಷ್ಠರ ನಿರ್ಧಾರವೇ ಅಂತಿಮ ಎಂದ ಸಹೋದರರು
ಜೆಡಿಎಸ್ ಪಕ್ಷದೊಳಗೆ ವಿವಾದ ಹುಟ್ಟಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ನಿಭಾಯಿಸುವ ಜವಾಬ್ದಾರಿ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಹೆಗಲೇರಿದೆ. ಈ ವಿಚಾರದಲ್ಲಿ ದೇವೇಗೌಡರ ನಿರ್ಧಾರವೇ ಅಂತಿಮ ಎಂದು ಕುಮಾರಸ್ವಾಮಿ ಹಾಗೂ ರೇವಣ್ಣ ಒಟ್ಟಾಗಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಇಬ್ಬರೂ ನಾಯಕರು, ಪಕ್ಷದ ಹಿತಕ್ಕಾಗಿ ವರಿಷ್ಠರ ಆಣತಿಯಂತೆ ನಡೆಯುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನ ವಿಚಾರದಲ್ಲಿ ನನ್ನ ನಿಲುವು ಹೇಳಿದ್ದೇನೆ. ಎಚ್ ಡಿ ದೇವೇಗೌಡರು ಅನುಭವದ ಮಾತು ಹೇಳಿದ್ದಾರೆ. ಟಿಕೆಟ್ ಬಗ್ಗೆ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇದೇ ವೇಳೆ ಟಿಕೆಟ್ ಹಂಚಿಕೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕುಮಾರಸ್ವಾಮಿ, ಇಂದು (ಏಪ್ರಿಲ್ 3) ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಾಧ್ಯತೆ ಬಗ್ಗೆ ಸುಳಿವು ನೀಡಿದರು.
ಇನ್ನು ಹೊಳೆನರಸೀಪುರದಲ್ಲಿ ಮಾತನಾಡಿ ಎಚ್ಡಿಕೆ ಸಹೋದರ ಎಚ್ಡಿ ರೇವಣ್ಣ, ದೇವೇಗೌಡರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದರು.
ಈ ಸುದ್ದಿ ಓದಿದ್ದೀರಾ? :ಆದಿ ಚುಂಚನಗಿರಿ ಸ್ವಾಮೀಜಿಗಳಿಗೊಂದು ಬಹಿರಂಗ ಪತ್ರ
ಟಿಕೆಟ್ ವಿಚಾರವಾಗಿ ನಾವು ದೇವೇಗೌಡರ ಜೊತೆ ರಾತ್ರಿ 11ರವರೆಗೆ ಹೆಚ್.ಡಿ ಕುಮಾರಸ್ವಾಮಿ ಮತ್ತು ಹೆಚ್.ಡಿ ದೇವೇಗೌಡರ ಜೊತೆ ಚರ್ಚಿಸಿರುವೆ. 60 ವರ್ಷಗಳ ರಾಜಕೀಯ ಅನುಭವ ದೇವೇಗೌಡರಿಗಿದೆ. ಅದನ್ನು ಬಳಸಿಕೊಂಡು ಮುನ್ನಡೆಯಲು ಸಿದ್ಧರಾಗಿದ್ದೇವೆ ಎಂದು ರೇವಣ್ಣ ಹೇಳಿದರು.