ʼದಹಾಡ್‌ʼ ವೆಬ್‌ ಸರಣಿಗೆ ಹಂತಕ ಸೈನೇಡ್ ಮೋಹನ್‌ ಕಥೆ ಸ್ಫೂರ್ತಿಯೇ?

Date:

  • ಸೈನೇಡ್ ಮೋಹನ್‌ ಕುಕೃತ್ಯಗಳನ್ನು ಹೋಲುವ ʼದಹಾಡ್‌ʼ ಕಥನ
  • ಹೋಲಿಕೆಯ ಕಾರಣಕ್ಕೇ ಹೆಚ್ಚು ಸದ್ದು ಮಾಡುತ್ತಿರುವ ʼದಹಾಡ್‌ʼ ಸರಣಿ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಹಂತಕ ʼಸೈನೇಡ್ ಮೋಹನ್‌ʼ ಹೆಸರು ಭಾರೀ ಚರ್ಚೆಯಲ್ಲಿದೆ. ದಶಕದ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ನರಹಂತಕನ ಕುಕೃತ್ಯಗಳನ್ನು ಆಧರಿಸಿ ಇತ್ತೀಚೆಗೆ ಹಿಂದಿಯಲ್ಲಿ ʼದಹಾಡ್‌ʼ ಹೆಸರಿನ ವೆಬ್‌ ಸರಣಿ ಬಿಡುಗಡೆಯಾಗಿದೆ. ಆದರೆ, ಕರ್ನಾಟಕ ಮೂಲದ ʼಸೈನೇಡ್ ಮೋಹನ್‌ʼ ಕಥೆಯನ್ನು ಈ ಸರಣಿಯಲ್ಲಿ ರಾಜಸ್ತಾನದ್ದು ಎಂಬಂತೆ ಬಿಂಬಿಸಲಾಗಿದೆ.

ದಹಾಡ್‌ ವೆಬ್‌ ಸರಣಿ

ʼಕಾಲೇಜು ಪ್ರೊಫೆಸರ್‌ ಆನಂದ್‌ ಎಂಬಾತ ಅಮಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಅವರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಕೊನೆಗೆ ಆ ಮಹಿಳೆಯರು ಗರ್ಭ ಧರಿಸಿದಾಗ ಸೈನೇಡ್ ಲೇಪಿತ ಗರ್ಭನಿರೋಧಕ ಮಾತ್ರೆಗಳನ್ನು ನೀಡಿ ಅವರನ್ನು ಕೊಲ್ಲುತ್ತಾನೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಿಸಿದರೂ ಅನುಮಾನ ಹುಟ್ಟಿಸುವ ಈ ಸರಣಿ ಸಾವಿನ ಪ್ರಕರಣಗಳನ್ನು ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಹೇಗೆ ಭೇದಿಸುತ್ತಾರೆ ಎಂಬುದರ ಸುತ್ತ ಈ ವೆಬ್‌ ಸರಣಿ ಮೂಡಿಬಂದಿದೆ. ಇಡೀ ವೆಬ್‌ ಸರಣಿಯ ಕಥೆ ರಾಜಸ್ತಾನದ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂಥದ್ದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸೈನೇಡ್ ಮೋಹನ್‌ ಕಥೆ

ʼದಹಾಡ್‌ʼ ವೆಬ್‌ ಸರಣಿಯನ್ನು ನೋಡಿದ ಪ್ರತಿಯೊಬ್ಬರು ಇದು ಕಾಮುಕ, ನರಹಂತಕ ಸೈನೇಡ್ ಮೋಹನನ ಕಥೆ ಎಂದೇ ಹೇಳುತ್ತಿದ್ದಾರೆ. ಕರ್ನಾಟಕದ ಕರಾವಳಿ ಮೂಲದ ಮೋಹನ್‌ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದ ಈತ, ಆ ಮಹಿಳೆಯರು ಗರ್ಭ ಧರಿಸುತ್ತಲೇ ಸೈನೇಡ್ ಲೇಪಿತ ಗರ್ಭ ನಿರೋಧಕ ಮಾತ್ರೆಗಳನ್ನು ನೀಡುತ್ತಿದ್ದ. ಗೌಪ್ಯತೆಯ ಕಾರಣಕ್ಕೆ ಸಾರ್ವಜನಿಕ ಶೌಚಾಲಯಗಳಲ್ಲಿ ಆ ಮಾತ್ರೆಗಳನ್ನು ಸೇವಿಸುತ್ತಿದ್ದ ಮಹಿಳೆಯರು ಕೊನೆಗೆ ಅದೇ ಶೌಚಾಲಯಗಳಲ್ಲಿ ಶವವಾಗಿ ಪತ್ತೆಯಾಗುತ್ತಿದ್ದರು. ಈ ರೀತಿ ಪ್ರತಿ ಮಹಿಳೆಯ ಶವ ಪತ್ತೆಯಾದಾಗಲೂ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಶಂಕೆ ವ್ಯಕ್ತವಾಗುತ್ತಿತ್ತು. ಆದರೆ, ಈ ಸರಣಿ ಕೊಲೆಗಳು ಆಕಸ್ಮಿಕವಲ್ಲ ಎಂದು ಅರಿತ ಪೊಲೀಸರು ತನಿಖೆ ನಡೆಸಿ 20 ಮಹಿಳೆಯರನ್ನು ಬಲಿ ಪಡೆದಿದ್ದ ಸೈನೇಡ್ ಮೋಹನನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನ್ಯಾಯಾಲಯದಲ್ಲಿ ಈತನ ಮೇಲಿನ ಎಲ್ಲ ಆಪಾದನೆಗಳು ಸಾಬೀತಾಗಿ ಸದ್ಯ ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದಾನೆ.

ʼದಹಾಡ್‌ʼ ವೆಬ್‌ ಸರಣಿ ʼಸೈನೇಡ್ ಮೋಹನ್‌ʼನ ಕುತೃತ್ಯಗಳ ಕಥೆಯನ್ನೇ ಹೋಲುವಂತಿದೆ. ಆದರೆ, ಇಡೀ ಕಥೆಯನ್ನು ರಾಜಸ್ತಾನದಲ್ಲಿ ನಡೆದದ್ದು ಎಂಬಂತೆ ತೋರಿಸಲಾಗಿದೆ. ಜೋಯಾ ಅಖ್ತರ್‌ ಈ ಸರಣಿಯ ಕಥೆಯನ್ನು ರಚಿಸಿದ್ದು, ಬಾಲಿವುಡ್‌ನ ಖ್ಯಾತ ನಿರ್ದೇಶಕಿ ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್‌ ಜಂಟಿಯಾಗಿ ನಿರ್ದೇಶಿಸಿದ್ದಾರೆ. ವಿಜಯ್‌ ವರ್ಮಾ ಸರಣಿ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್‌ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮಹಿಳಾ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡಿಗ ಗುಲ್ಷನ್‌ ದೇವಯ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ʼದಹಾಡ್‌ʼ ಚಿತ್ರಕಥೆಯ ಬಗ್ಗೆ ಹೋಲಿಕೆಯ ಮಾತುಗಳು ಕೇಳಿ ಬರುತ್ತಿವೆಯಾದರೂ ಚಿತ್ರತಂಡ ಮಾತ್ರ, ಕಾಲ್ಪನಿಕ ಕತೆ ಎಂದು ಹೇಳಿ, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನಾಗಿದೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...