ಗ್ರಾಮೀಣ ಪ್ರದೇಶದಲ್ಲಿರುವ ಉಪ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಹಾಗೂ ತಾಲೂಕಿನ ಎಲ್ಲಾ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಗಳು ಕೆಂದ್ರ ಸ್ಥಾನದಲ್ಲಿ ವಾಸ್ತವ್ಯ ಇರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣದ) ಕಾರ್ಯಕರ್ತರು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿ, ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, “ಕೇಂದ್ರ ಮತ್ತು ರಾಜ್ಯ ಸರಕಾರವು ಗ್ರಾಮೀಣ ಭಾಗದ ಜನರ ಪರಿಸ್ಥಿತಿಯನ್ನು ಅರಿತು ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಉಪ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ, ಆ ಕಟ್ಟಡಗಳಿಗೆ ಆರೋಗ್ಯ ಸುರಕ್ಷಾ ಅಧಿಕಾರಿಗಳನ್ನು ನೇಮಿಸಿದ್ದಾರೆ” ಎಂದರು.
“ಸದರಿ ಅಧಿಕಾರಿ ಆಯಾ ಕೇಂದ್ರಗಳಲ್ಲಿ ವಾಸ್ಥವ್ಯವಿದ್ದು, ಗ್ರಾಮೀಣ ಪ್ರದೇಶ ಜನರ ಆರೋಗ್ಯ ಸುಧಾರಿಸಲು ಪ್ರಥಮ ಚಿಕಿತ್ಸೆ ನೀಡುವುದರ ಜೊತೆಗೆ ಗರ್ಭಿಣಿ ಬಾಣಂತಿಯರ ಆರೋಗ್ಯವನ್ನು ಕ್ಷಣ ಕ್ಷಣ ವಿಚಾರಿಸಲು ಸರ್ವ ರೀತಿಯ ವ್ಯವಸ್ಥೆ ಮಾಡಿರುವುದನ್ನು ತಮ್ಮ ಇಲಾಖೆಯ ಬಹಳಷ್ಟು ಜನ ಆರೋಗ್ಯ ಸುರಕ್ಷಾ ಅಧಿಕಾರಿಗಳು ಸರಿಯಾಗಿ ನಿರ್ವಹಿಸದೇ ಇರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀರ್ವವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪುಟ್ಟಪ್ಪ ಹಿತ್ತಲಮನಿ, ನೂರ ಅಹ್ಮದ ಲಕ್ಷೇಶ್ವರ, ಮಾರುತಿ ಹಾಲಗಿ, ಮಾದೇವಪ್ಪ ಹೇಡಿಗೊಂಡ, ಅನಸೂಯಾ ಶಿದ್ದಪ್ಪಳವರ, ಖಲಂದರ ಎಲೆಹಳ್ಳಿ, ಧರ್ಮಣ್ಣ ಡಮ್ಮಳ್ಳಿ, ರಮೇಶ ದಾಸಪ್ಪನವರ, ಪವನ ವಡ್ಡರ, ಮೌಲಾಸಾಬ ನದಾಫ, ಶೇಖಪ್ಪ ದೀಪಾವಳಿ, ರಾಜಕುಮಾರ ದೊಡ್ಡಮನಿ, ಶಾರದಾ ಆರಬಗೊಂಡ. ರಾಜಣ್ಣ ಗೌಡರ, ಕೃಷ್ಣಪ್ಪ ನಾಗಜ್ಜಿ, ಅಶೋಕ ಸವಣೂರ, ಸುರೇಶ ಲಚಮಣ್ಣವರ, ಬಸವರಾಜ ಹರಿಜನ, ಅಣ್ಣಪ್ಪ ಸವಣೂರ, ಅಣ್ಣಪ್ಪ ಬಾಳಂಬೀಡ, ರಮೇಶ ಹೋಬಳೇರ, ಮಾಬುಬಲಿ ದುಂಡಶಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




