ಸಂವಿಧಾನ ಬದಲಿಸುತ್ತೇವೆ ಎಂದವರನ್ನೇ ಬದಲಿಸೋಣ. 40% ಸರ್ಕಾರದ ಆಡಳಿತ ಸಾಮಾನ್ಯ ಜನರಿಗೆ ನೂರಕ್ಕೆ ನೂರರಷ್ಟು ನರಕವಾಗಿದೆ. ಈವರೆಗೆ ಸಂಕಷ್ಟ ಅನುಭವಿಸಿದ್ದು ಸಾಕು. ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಜೇವರ್ಗಿ ದಲಿತ ಸಂಘರ್ಷ ಸಮಿತಿ ಕರೆ ನೀಡಿದೆ.
ಕಲಬುರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಸಿಂಗ್ ಪರ ಮತಯಾಚನೆ ಮಾಡುತ್ತಿದ್ದ ವೇಳೆ ಬಣಮಗಿ ಗ್ರಾಮದಲ್ಲಿ ದಸಂಸ ಮುಖಂಡರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ್ನಲ್ಲಿ ಬಿಜೆಪಿ ಅಲೆಯಿದೆ, ಬೇರೆ ಪಕ್ಷಗಳಿಗೆ ನೆಲೆಯಿಲ್ಲ: ಸಚಿವ ಪ್ರಭು ಚವ್ಹಾಣ್
“ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳೋಣ, ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯೋಣ. ಇದೇ ಮೇ 10ರಂದು ನಮ್ಮ ಸಿಟ್ಟು ತೀರಿಸಿಕೊಳ್ಳುವ ದಿನವಾಗಿದೆ. ಜನ ವಿರೋಧಿ ‘ಬಿಜೆಪಿ’ಯನ್ನು ಸೋಲಿಸಿ, ಜನಪರವಾದ ‘ಕಾಂಗ್ರೆಸ್ಸನ್ನು ಗೆಲ್ಲಿಸೋಣ” ಎಂದು ಮತದಾನ ಜಾಗೃತಿ ಸಭೆ ನಡೆಸಿದರು.
ಈ ವೇಳೆ ದಸಂಸ ಮುಖಂಡರುಗಳಾದ ಭೀಮರಾಯ ನಗನೂರ್ , ದವಲಪ್ಪ ಮದನ್ , ಸಿದ್ರಾಮ್ ಕಟ್ಟಿ, ಮಹೇಶ್ ಕೋಕಿಲೆ, ಶ್ರೀ ಹರಿ ಕರಿಕಿಹಳ್ಳಿ, ಕಾಂಗ್ರೆಸ್ ಅಭ್ಯರ್ಥಿ ಡಾ ಅಜಯ್ ಸಿಂಗ್, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.