ರಾಜ್ಯದ ಜನತೆ ಕಾಂಗ್ರೆಸ್ಅನ್ನು ತಿರಸ್ಕರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 151 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಪ್ರಭು ಬಿ ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದರು.
ಔರಾದ್(ಬಿ) ವಿಧಾನಸಭಾ ಕ್ಷೇತ್ರದ ಲಾಧಾ, ಧೂಪತಮಹಾಗಾಂವ, ಬಾಚೆಪಳ್ಳಿ, ಮಣಿಗೆಂಪೂರ, ಬಾಬಳಿ, ಮಸ್ಕಲ್, ನಾಗೂರ(ಬಿ), ನಿಟ್ಟೂರ(ಕೆ), ರಕ್ಷ್ಯಾಳ(ಕೆ), ರಕ್ಷ್ಯಾಳ(ಬಿ), ಬೆಳಕೋಣಿ, ಮಹಾಡೋಣಗಾಂವ, ಮುಂಗನಾಳ, ಖಂಡೆಕೇರಿ, ಹಸ್ಸಿಕೇರಾ, ಮುಧೋಳ(ಬಿ), ಬೇಂಬ್ರಾ, ಲಕ್ಷ್ಮೀನಗರ, ಬೆಡಕುಂದಾ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಮೇ.1ರಂದು ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ ವೇಳೆ ಮಾತನಾಡಿದರು.
“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡಿವೆ. ಸಾಕಷ್ಟು ಜನಪರ ಕೆಲಸಗಳಾಗಿವೆ. ಬಡವರು, ರೈತರು, ಹಿಂದುಳಿದವರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾಡಿನ ಏಳಿಗೆಗೆ ಶ್ರಮಿಸಲಾಗಿದೆ. ರಾಜ್ಯದೆಲ್ಲೆಡೆ ಜನತೆ ಬಿಜೆಪಿಯತ್ತ ಒಲವು ತೋರಿಸುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಕಾಣಲಿದೆ” ಎಂದರು.
“ಔರಾದ(ಬಿ) ಕ್ಷೇತ್ರದಲ್ಲಿ ಬಿಜೆಪಿಯ ಅಲೆಯಿದೆ. ಬೇರೆ ಯಾವುದೇ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ. ತಾವು ಭೇಟಿ ನೀಡಿದ ಎಲ್ಲ ಗ್ರಾಮಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಕ್ಷೇತ್ರದ ಮಹಾಜನತೆ ಹಿಂದೆಂಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.
ಮೇ 3ರಂದು ಔರಾದ್ಗೆ ಯಡಿಯೂರಪ್ಪ ಆಗಮನ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮೇ 3ರಂದು ಔರಾದ್(ಬಿ) ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಸಚಿವ ಪ್ರಭು.ಬಿ ಚವ್ಹಾಣ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಔರಾದ್ ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡುವರು. ಔರಾದ(ಬಿ) ಹಾಗೂ ಕಮಲನಗರ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮೊಸಳೆ ಕಣ್ಣೀರು ಹಾಕಬೇಡಿ, ಮೊದಲು ಅನ್ನದಾತರಿಗೆ ಉತ್ತರಿಸಿ: ಶರಣಬಸಪ್ಪ ಮಮಶೆಟ್ಟಿ
ಈ ಸಂದರ್ಭದಲ್ಲಿ ಮುಖಂಡರುಗಳಾದ ವಸಂತ ಬಿರಾದಾರ, ಮಾರುತಿ ಚವ್ಹಾಣ, ಶರಣಪ್ಪ ಪಂಚಾಕ್ಷರಿ, ಬಾಬುರಾವ ಬಿರಾದಾರ, ರಾಜಕುಮಾರ ಪೋಕಲವಾರ, ಸಚಿನ್ ರಾಠೋಡ್, ದೇವಿದಾಸ ರಾಠೋಡ್, ಮೃತ್ಯುಂಜಯ ಬಿರಾದಾರ, ಮಂಜು ಸ್ವಾಮಿ, ಮಾದಪ್ಪ ಮಿಠಾರೆ, ಬಾಲಾಜಿ ಠಾಕೂರ, ರಮೇಶ ವಾಗಮಾರೆ, ಸಂಜು ಮಾನಕರೆ, ವೀರೇಶ ಅಲ್ಮಾಜೆ, ರಾಜಪ್ಪ ಸೋರಳ್ಳೆ, ನಯ್ಯೂಮ್ ಚೌಧರಿ, ತ್ರಿಮುಖ ಶೇರಿಕಾರ ಸೇರಿದಂತೆ ಇತರರು ಇದ್ದರು.