ಕೋಲಾರ ನಗರ ದೇವತೆ ಶ್ರೀ ಕೋಲಾರಮ್ಮ ದೇವಾಲಯದ ರಥ ಬೀದಿಯ ನೂತನ ಮುಖದ್ವಾರವನ್ನು ಬುಧವಾರ ವಿಧಾನ ಪರಿಷತ್ ಸದಸ್ಯ ಎಂ. ಎಲ್. ಅನಿಲ್ ಕುಮಾರ್ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಲೋಕಾರ್ಪಣೆಗೊಳಿಸಿದರು
ಮುಖದ್ವಾರದ ಉದ್ಘಾಟನೆಗೂ ಮುನ್ನ ದೇವಾಲಯದ ಸಾಂಪ್ರದಾಯಿಕ ವಿಧಿವಿಧಾನಗಳಂತೆ ಗೋಪೂಜೆ ಹಾಗೂ ಬಿಂಬದರ್ಶನ ಕಾರ್ಯಕ್ರಮಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಕೋಲಾರಮ್ಮ ತಾಯಿಯು ಜಿಲ್ಲೆಯ ಜನತೆಗೆ ಹಾಗೂ ಸಮಸ್ತ ಭಕ್ತಾದಿಗಳಿಗೆ ಆಯುರಾರೋಗ್ಯ, ಸುಖ-ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಗಣ್ಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮುಖದ್ವಾರದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಎಂಎಲ್ಸಿ ಎಂಎಲ್ ಅನಿಲ್ ಕುಮಾರ್ ಕೋಲಾರದಲ್ಲಿ ಇವತ್ತು ವಿಶೇಷವಾದ ದಿನ ಪ್ರತಿ ಶುಕ್ರವಾರದಂದು ವಿಶೇಷ ಪೂಜೆ ಹಾಗೂ ವಿಶೇಷ ಸಾಂಸ್ಕೃತಿಕ ಸೌರಭ ನಡೆಯುತ್ತದೆ ಇದಕ್ಕಾಗಿ ಬೇರೆ ಬೇರೆ ಜಿಲ್ಲೆಯಿಂದ ಬರತ್ತಾರೆ ಮುಖ್ಯಧ್ವಾರ ಇರಲಿಲ್ಲ ಎಂಬ ಕೊರತೆ ಇತ್ತು ಅದನ್ನು ಶಾಸಕ ಕೊತ್ತೂರು ಮಂಜುನಾಥ್ ಅವರು ದಾನಿಗಳಿಂದ 28 ಲಕ್ಷ ನಿರ್ಮಾಣ ಮಾಡಿ ಉದ್ವಾಟನೆ ಮಾಡಿಸಿದ್ದಾರೆ ಮುಂದೆ ಕೋರ್ಟ್ ವೃತ್ತದಿಂದ ಕೋಲಾರ ದೇವಾಯದ ವರೆಗೆ ಎರಡು ಬದಿಯ ರಸ್ತೆ ಅಭಿವೃದ್ಧಿ ಲೈಟ್ ಅಳವಡಿಸಲು ಸುಮಾರು 1.23 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೋಡಿದರು.
ಇದನ್ನು ಓದಿದ್ದೀರಾ..?ಕೋಲಾರ | ದಲಿತ ಚಳುವಳಿಯ ಹೆಜ್ಜೆ ಗುರುತುಗಳೇ ಯುವಕರಿಗೆ ಸ್ಪೂರ್ತಿಯಾಗಬೇಕು: ಎಂಎಲ್ಸಿ ಅನಿಲ್ ಕುಮಾರ್
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಆರ್ ರವಿ, ನಗರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಆಫ್ಸರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಕಠಾರಿಪಾಳ್ಯ ಗಂಗಣ್ಣ, ಅಮರನಾಥ್, ಬಿ.ಟಿ ಚಂದ್ರಶೇಖರ್,ಪೈರೋಜ್ ಖಾನ್, ಅಧಿಕಾರಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರು, ದೇವಾಲಯದ ಆಡಳಿತ ಮಂಡಳಿಯ ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು




