ತುಮಕೂರು | ತೇಜಸ್ವಿಯವರ ವೈಚಾರಿಕ ಚಿಂತನೆಗಳನ್ನು ಜನರು ಸ್ವೀಕರಿಸಬೇಕು: ಮಲ್ಲಿಕಾ ಬಸವರಾಜು

Date:

ತೇಜಸ್ವಿಯವರ ಬರಹಗಳನ್ನು ಓದಿದರೆ, ನಮ್ಮ ಅಹಂಕಾರವೆಲ್ಲಾ ಕರಗಿ, ಅಗಾಧವಾದ ಪ್ರಕೃತಿಯಲ್ಲಿ ನಾವು ಒಂದು ಅಣುಮಾತ್ರ ಅನಿಸುತ್ತದೆ. ಕುವೆಂಪು ಅವರ ವೈಚಾರಿಕ ಚಿಂತನೆಗಳಿಗೆ ಜೀವ ಬಂದಂತೆ ತೇಜಸ್ವಿಯವರು ಬದುಕಿದರು ಎಂದು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಅಭಿಪ್ರಾಯಪಟ್ಟರು.

- Advertisement -

ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ವಿಚಾರ ಮಂಟಪ ಸಹಯೋಗದಲ್ಲಿ ,ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರವರ ನೆನಪಿನ ” ನನ್ನ ಗ್ರಹಿಕೆಯ ತೇಜಸ್ವಿ ” ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಅದು ಹೇಗಿದೆಯೋ ಹಾಗೆ ಉಳಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು .ಇಂದಿನ ಬಹುಪಾಲು ಯುವಜನತೆ ,ತೇಜಸ್ವಿಯವರ ನಿರ್ಭಯ ನಡೆ ,ಚಾರಣಕ್ಕೆ ಮಾರುಹೋದ ಹಾಗೆ ,ಅವರ ವೈಚಾರಿಕ ಚಿಂತನೆಗಳಿಗೆ ,ಜಾತ್ಯಾತೀತ ನಡೆಗೆ ಕನೆಕ್ಟ್ ಆಗ್ತಾ ಇಲ್ಲ . ತೇಜಸ್ವಿರವರ ವೈಚಾರಿಕತೆಯ ನ್ನೂ ನಾವು ರೂಢಿಸಿಕೊಳ್ಳಬೇಕಿದೆ ” ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಡಾ. ರೇಖಾ ಹಿಮಾನಂದ್ ಮಾತನಾಡಿ ” ತೇಜಸ್ವಿರವರು ಇಂದು ಇದ್ದಿದ್ದರೆ ,80 ರ ಹಿರಿಯರಾಗಿರುತ್ತಿದ್ದರು . ಅವರ ಬರಹದಲ್ಲಿ ಸ್ಥಳೀಯತೆಗೆ ಒತ್ತು ಕೊಟ್ಟರು .ಅವರು ಗುರು ,ಗೆಳೆಯ ,ಅನುಭಾವಿ ಏನೆಲ್ಲಾ ಆಗಿದ್ದರು .ಅವರೊಳಗೊಬ್ಬ ಸಾಹಸಿ ಇದ್ದರು .ಎಲ್ಲವನ್ನೂ ಸದಾ ಕುತೂಹಲದಿಂದ ಗಮನಿಸುತ್ತಿದ್ದರು.ಪ್ರಕೃತಿ ಮತ್ತು ಮನುಷ್ಯನ ನಡುವೆ ಇರುವ ಅಂತರವನ್ನೇ ತೆಗೆದು ಹಾಕಿದರು. ಕುವೆಂಪುರವರ ಮೂಲಕ ಗುರುತಿಸಿಕೊಳ್ಳದೇ ,ತಮ್ಮದೇ ಸ್ವತಂತ್ರ ಅಭಿವ್ಯಕ್ತಿ ಕಂಡುಕೊಂಡರು .ತೇಜಸ್ಚಿ ರವರು ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿರುವರು .ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಅದ್ಭುತವಾಗಿವೆ ” ಎಂದರು.

ತುಮಕೂರು ವಿವಿ ಹಿರಿಯ ಸಂಶೋಧನಾರ್ಥಿ ಧನುಷ್ ಎಚ್ ಶೇಖರ್ ಮಾತನಾಡಿ ” ತೇಜಸ್ವಿ ಬಹುದೊಡ್ಡ ಕಥೆಗಾರರು . ಇವರ ಕಥೆಗಳಲ್ಲಿ ಇರುವ ಪ್ರಾದೇಶಿಕತೆ ಬಹಳ ಮುಖ್ಯ. ಪ್ರಶಸ್ತಿ ಗಳಿಗಾಗಿ ಹಾತೊರೆಯದೆ ಪ್ರಕೃತಿಯ ನಡುವೆ ಬದುಕುತ್ತಾ ಅಲ್ಲಿನ ಮೌನವನ್ನು ಧ್ಯಾನಿಸಿದರು . ಅಧಿಕಾರದ ಸ್ಥಾನಗಳಿಂದ ಅಂತರ ಕಾಯ್ಧುಕೊಂಡರು .ಸೈದ್ದಾಂತಿಕ ಭಿನ್ನತೆಗಳ ನಡುವೆಯೂ ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡರು ಎಂದು ಹೇಳಿ ಅನಂತಮೂರ್ತಿ ಮತ್ತು ತೇಜಸ್ವಿರವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದರು.

ಸಂಶೋಧನಾರ್ಥಿ ನವೀನ್ ಮಾತನಾಡಿ” ಯಾರನ್ನೂ ಮೆಚ್ಚಿಸುವ ಇರಾದೆ ತೇಜಸ್ವಿರವರಿಗೆ ಇರಲಿಲ್ಲ .
ತೇಜಸ್ವಿರವರನ್ನು ಕಾಡು ,ಫೋಟೊಗ್ರಫಿ ,ಚಾರಣ ಕ್ಕಷ್ಟೇ ಸೀಮಿತಗೊಳಿಸಬಾರದು .ಅವರೊಳಗಿದ್ದ ವೈಚಾರಿಕತೆಯನ್ನು ಜನರು ಸ್ವೀಕರಿಸಬೇಕು ಎಂದು ಹೇಳುತ್ತಾ ,ತೇಜಸ್ವಿರವರು ತಮ್ಮ ತಂದೆ ಕುವೆಂಪುರವರ ಚಿತೆಗೆ ಬಲಗೈನಲ್ಲಿ ಅಗ್ನಿಸ್ಪರ್ಶ ಮಾಡಿದ್ದನ್ನು ನೆನಪಿಸಿಕೊಂಡರು.

ಹರ್ಷಚರ್ಧನ್ ” ತೇಜಸ್ವಿರವರ ಕಥೆಗಳು ,ನಮ್ಮ ಸುತ್ತಲಿನ ಬದುಕನ್ನು ತೆರೆದಿಡುವಂತಹವೇ ಆಗಿವೆ .ಅವರ ಮಿಲೇನಿಯಂ ಸರಣಿ ಪುಸ್ತಕಗಳು ಅಧ್ಬುತ ವಾಗಿ ಮೂಡಿಬಂದಿವೆ” ಎಂದರು.

“ಸಮಾಜದ ದೃಷ್ಟಿಯಲ್ಲಿ ಪ್ರಾಮುಖ್ಯವೆನಿಸದ ,ಕಟ್ಟಕಡೆಯ ವ್ಯಕ್ತಿ ಮಂದಣ್ಣನಂಥವರನ್ನೂ ತೇಜಸ್ವಿ ತಮ್ಮ ಬರಹದಲ್ಲಿ ಅಧ್ಬುತವಾಗಿ ಕಟ್ಟಿಕೊಟ್ಟಿರುವರು” ಎಂದು ಪುನೀತ್ ತಿಳಿಸಿದರು.

ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ,ಪಿಎಚ್ ಡಿ ಸಂಶೋಧನಾರ್ಥಿಗಳು ,ಉಪನ್ಯಾಸ ಕರು ಮತ್ತು ಲೇಖಕಿಯರು ತಮ್ಮ ,ತಮ್ಮ ಗ್ರಹಿಕೆಗೆ ಸಿಕ್ಕ ತೇಜಸ್ವಿರವರನ್ನು ಕುರಿತು ಮಾತನಾಡಿದರು .

ಕಾರ್ಯಕ್ರಮದಲ್ಲಿ ಡಾ. ಆಶಾರಾಣಿ ಬಗ್ಗನಡು, ತರಂಗಿಣಿ ,ಮಾರುತಿ ,ಪಾರ್ವತಿ ,ನಂದನ್,ವಿಚಾರ ಮಂಟಪದ ವರುಣ್ ರಾಜ್ ಭಾಗವಹಿಸಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಹಾವು ಕಚ್ಚಿದರೆ ಕ್ಷಣವೂ ತಡಮಾಡದೆ, ಸರ್ಕಾರಿ ಆಸ್ಪತ್ರೆಯತ್ತ ಧಾವಿಸಿ: ಡಾ. ಮಹೇಶ ಕೋಣಿ

ಹಾವು ಕಡಿತಕ್ಕೆ ಒಳಗಾದವರು ಆತಂಕಕ್ಕೊಳಗಾಗಿ ನಾಟಿ ಚಿಕಿತ್ಸೆ, ನಕಲಿ ವೈದ್ಯರ ಮೊರೆ...

ರಾಯಚೂರು | ಕೆ. ಶಾಂತಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ಸಂತಸದ ವಿಚಾರ: ಬೋಸರಾಜು

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ. ಶಾಂತಪ್ಪ ಅವರು ಜವಾಬ್ದಾರಿ...

ಉಡುಪಿ | ಕಾರ್ಕಳದಲ್ಲಿ ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ

ಕಾರ್ಕಳ–ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ವ್ಯಾಪ್ತಿಯಲ್ಲಿ ಮಾಜಿ ಸಚಿವ ರಮಾನಾಥ ರೈ...

ಕಲಬುರಗಿ | ಲೋಕ ಅದಾಲತ್‌ನಲ್ಲಿ 179 ಪ್ರಕರಣ ಇತ್ಯರ್ಥ; ₹4.93 ಕೋಟಿ ಪರಿಹಾರಕ್ಕೆ ಆದೇಶ

ನಗರದ ಹೈಕೋರ್ಟ್ ಪೀಠದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮೋಟಾರು...